ಬೃಹತ್ ಱಲಿಗೂ ಸಿದ್ಧತೆ ನಡೀತಿದೆ.
ಮೋದಿ..ರಾಜ್ಯಕ್ಕೆ ಮೋದಿ ಬರ್ತಾರೆ ಅನ್ನೋ ಸುದ್ದಿಯೇ ಕಮಲಪಾಳಯದ ಹುರುಪನ್ನ ಹೆಚ್ಚಿಸಿತ್ತು. ಇದೀಗ ನಮೋ ಆಗಮನಕ್ಕೆ ಡೇಟ್ ಫಿಕ್ಸ್ ಆಗಿದೆ. ಚುನಾವಣಾ ಕಹಳೆ ಮೊಳಗಿಸೋದಕ್ಕೂ ಅಖಾಡ ಸಿದ್ಧವಾಗಿದೆ. ಪ್ರಧಾನಿ ಮೋದಿ ಪ್ರವಾಸದ ಬಗ್ಗೆ ಸಿಎಂ ಬೊಮ್ಮಾಯಿಗೆ ಸಂದೇಶ ಬಂದಿದೆ. ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿರೋ ಪ್ರಧಾನಿ ಯಾತ್ರೆಗೆ ಸಿದ್ಧತೆ ಶುರುವಾಗಿದೆ.
ಕರುನಾಡಿಗೆ ‘ನಮೋ’
ಮೋದಿ ಕರ್ನಾಟಕ ದಂಡಯಾತ್ರೆಗೆ ಮುಹೂರ್ತ ನಿಗದಿಯಾಗಿದ್ದು, ಏಪ್ರಿಲ್ 6ಕ್ಕೆ ಪ್ರಧಾನಿಗಳ ರಾಜ್ಯ ಪ್ರವಾಸ ಆರಂಭವಾಗಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜನೆಗೆ ಪ್ಲಾನ್ ರೂಪಿಸಲಾಗಿದೆ. ಪ್ರಧಾನಿ ಮೋದಿ ಪ್ರವಾಸದ ಬಗ್ಗೆ ಸಿಎಂ ಬೊಮ್ಮಾಯಿಗೆ ಮಾಹಿತಿ ರವಾನೆಯಾಗಿದ್ದು, ಸಿದ್ಧತೆ ಶುರು ಮಾಡಿಕೊಂಡಿದ್ದಾರೆ. ಏಪ್ರಿಲ್ 1ಕ್ಕೆ ರಾಜ್ಯಕ್ಕೆ ಅಮಿತ್ ಶಾ, ಎಂಟ್ರಿ ಕೊಡಲಿದ್ದಾರೆ. ಇದಾದ ಬಳಿಕ ಅಂದ್ರೆ ಏಪ್ರಿಲ್ 6ರಂದು ಮೋದಿ ಕರುನಾಡಿನ ಅಖಾಡಕ್ಕೆ ಧುಮುಕಲಿದ್ದಾರೆ. ಅಂದು ಮಿಷನ್ 2023ರ ಮೊದಲ ಱಲಿ ಉದ್ಘಾಟನೆಗೆ ಮೋದಿ ಕಾತುರರಾಗಿದ್ದಾರೆ. ಹೀಗೆ ಅಮಿತ್ ಶಾ ಆಗಮನದ ಬೆನ್ನಲ್ಲೇ ಪ್ರಧಾನಿ ರಾಜ್ಯ ಪ್ರವಾಸ ನಡೆಸ್ತಿರೋದು, ಕುತೂಹಲದ ಕಣಜವನ್ನ ತುಂಬಿಸಿದೆ.
ರಾಜ್ಯದ ಮಣ್ಣನ್ನ ಮೆಟ್ಟಲಿರೋ ಮೋದಿ ಒಂದಷ್ಟು ಪ್ರವಾಸ ಪ್ಲಾನ್ಗಳನ್ನ ಸಿದ್ಧಪಡಿಸಿಕೊಂಡಿದ್ದಾರೆ. ಪ್ರಸ್ತಾಪಿಸಬೇಕಾದ ಪ್ರಮುಖ ವಿಷಯಗಳ ಪಟ್ಟಿಯೂ ಸಿದ್ಧವಾಗ್ತಿದ್ಯಂತೆ
ಮೋದಿ ಪ್ರಸ್ತಾಪಿಸಲಿರುವ ವಿಷಯಗಳು
- ಅವಧಿ ಪೂರ್ವ ಇಲ್ಲವೇ ಅವಧಿಯಂತೆ ಚುನಾವಣೆಗೆ ಸಿದ್ದರಾಗಲು ಕರೆ
- ಸಾರ್ವತ್ರಿಕ ಚುನಾವಣೆಗೆ BJP ಪರವಾದ ಟ್ರೆಂಡ್ ಸೃಷ್ಟಿಸಲಿರುವ ಮೋದಿ
- ಮೋದಿ ಪ್ರವಾಸದ ಬಗ್ಗೆ ಸಚಿವರ ಜೊತೆ ಚರ್ಚಿಸಿರುವ ಸಿಎಂ ಬೊಮ್ಮಾಯಿ
- ಉತ್ತರ ಭಾರತದ ನಂತರ ದಕ್ಷಿಣದ ರಾಜ್ಯಗಳತ್ತ ಪ್ರಧಾನಿ ಮೋದಿ ಕಣ್ಣು
ಒಟ್ನಲ್ಲಿ, ಪ್ರಧಾನಿ ರಾಜ್ಯ ಪ್ರವಾಸ ಕೇಸರಿ ಬ್ರಿಗೇಡ್ನಲ್ಲಿ ಹೊಸ ಉತ್ಸಾಹವನ್ನ ತಂದಿದೆ. ಸಚಿವರನ್ನೂ ಌಕ್ಟೀವ್ ಆಗಿಸಿದೆ. ಕಮಲಪಾಳಯದ ಚುನಾವಣಾ ತಯಾರಿಗೆ ಮತ್ತಷ್ಟು ವೇಗ ಕೊಟ್ಟಿದೆ.