ದೇಹದ ತೂಕ ಹೆಚ್ಚಿರುವುದಕ್ಕೆ ಆಸ್ಕರ್ ವೇದಿಕೆಯಲ್ಲಿ ಹಾಡುವ ಆಫರ್ ಕಳೆದುಕೊಂಡ್ರಾ ಕೀರವಾಣಿ?

ಮಾರ್ಚ್​ 12ರಂದು ಲಾಸ್​ ಏಂಜಲೀಸ್​ನಲ್ಲಿ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಹಾಲಿವುಡ್​ನ ಅನೇಕ ದಿಗ್ಗಜರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.

ಎಂ.ಎಂ. ಕೀರವಾಣಿಅವರು ‘ಆರ್​ಆರ್​ಆರ್​’ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ.

ಈ ಚಿತ್ರದ ನಾಟು ನಾಟು..’ ಹಾಡು  ಆಸ್ಕರ್ ರೇಸ್​ನಲ್ಲಿ ಇರುವುದರಿಂದ ಅವರ ಖ್ಯಾತಿ ವಿಶ್ವ ಮಟ್ಟಕ್ಕೆ ಹಬ್ಬಿದೆ. ಈಗಅವರು ಆಸ್ಕರ್ ವೇದಿಕೆ ಮೇಲೆ ಹಾಡುವ ಆಫರ್ ಕಳೆದುಕೊಂಡಿದ್ದಾರೆ. ಇದಕ್ಕೆ ಅವರ ದೇಹದ ತೂಕ ಕಾರಣವೇ ಎನ್ನುವ ಪ್ರಶ್ನೆ ಮೂಡಿದೆ. ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಮಾರ್ಚ್​ 12ರಂದು ಲಾಸ್​ ಏಂಜಲೀಸ್​ನಲ್ಲಿ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಹಾಲಿವುಡ್​ನ ಅನೇಕ ದಿಗ್ಗಜರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಅವರೆಲ್ಲರ ಮುಂದೆ ಪರ್ಫಾರ್ಮೆನ್ಸ್​ ನೀಡುವ ಅವಕಾಶ ಎಂಎಂ ಕೀರವಾಣಿ ಅವರಿಗೆ ಸಿಕ್ಕಿದೆ ಎನ್ನಲಾಗಿತ್ತು. ಈ ಬಗ್ಗೆ ಕೆಲ ವೆಬ್​​ಸೈಟ್​​ಗಳಲ್ಲಿ ಸುದ್ದಿ ಪ್ರಸಾರ ಆಗಿತ್ತು. ಆದರೆ, ಈಗ ಈ ಅವಕಾಶ ಅವರ ಕೈತಪ್ಪಿದೆ. ಗಾಯಕ ರಾಹುಲ್ ಸಿಪ್ಲಿಗುಂಜ್ ಹಾಗೂ ಕಾಲಭೈರವ ಅವರು ಲಾಸ್ ಏಂಜಲೀಸ್​ನ ಡಾಲ್ಬಿ ಥಿಯೇಟರ್​ನಲ್ಲಿ ‘ನಾಟು ನಾಟು..’ ಸಾಂಗ್​ನ ಹಾಡಲಿದ್ದಾರೆ.

ಈ ಮೊದಲು ಕೀರವಾಣಿ ಅವರು ದೇಹದತೂಕದ ಬಗ್ಗೆ ಮಾತನಾಡಿದ್ದರು. ಈ ಬಗ್ಗೆ ಅವರಿಗೆ ಚಿಂತೆ ಕಾಡಿದೆ. ‘ತುಂಬ ಸಮಯದಿಂದ ನಾನು ಆರೋಗ್ಯವನ್ನು ನಿರ್ಲಕ್ಷಿಸಿದೆ. ಗೋಲ್ಡನ್​ ಗ್ಲೋಬ್​ ಕಾರ್ಯಕ್ರಮದ ವೇದಿಕೆಯಲ್ಲಿ ನಿಂತುಕೊಂಡು ಮಾತನಾಡುವುದು ಕೂಡ ನನಗೆ ಸಮಸ್ಯೆ ಆಯಿತು’ ಎಂದು ಅವರು ಹೇಳಿದ್ದರು. ಈ ಕಾರಣಕ್ಕೆ ಅವರು ಈ ಅವಕಾಶ ಕೈ ಬಿಟ್ಟರಾ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಅವರ ಕಡೆಯಿಂದಲೇ ಸ್ಪಷ್ಟನೆ ಬೇಕಿದೆ.

ಎಂಎಂ ಕೀರವಾಣಿ ಅವರು 90ರ ದಶಕದಿಂದ ಚಿತ್ರರಂಗದಲ್ಲಿ ಆಯಕ್ಟೀವ್ ಆಗಿದ್ದಾರೆ. ರಾಜಮೌಳಿ ಸಿನಿಮಾಗಳಿಗೆ ಅವರು ಸಂಗೀತ ಸಂಯೋಜನೆ ಮಾಡುತ್ತಾರೆ. ಹಲವಾರು ಸೂಪರ್​ ಹಿಟ್​ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ ಖ್ಯಾತಿ ಅವರಿಗೆ ಇದೆ. ಕನ್ನಡದಲ್ಲಿಯೂ ಕೀರವಾಣಿ ಕೆಲಸ ಮಾಡಿದ್ದಾರೆ. ‘ಅಳಿಮಯ್ಯ’, ‘ಅಪ್ಪಾಜಿ’, ‘ಭೈರವ’, ‘ಸ್ವಾತಿ’, ‘ಕರ್ನಾಟಕ ಸುಪುತ್ರ’, ‘ದೀಪಾವಳಿ’, ‘ಜಮೀನ್ದಾರ್ರು’ ಮುಂತಾದ ಸಿನಿಮಾಗಳಿಗೆ ಅವರು ಸಂಗೀತ ನೀಡಿದ್ದಾರೆ. 2015ರಲ್ಲಿ ಅವರು ಚಿತ್ರರಂಗ ತೊರೆಯಬೇಕು ಎಂದುಕೊಂಡಿದ್ದರು. ಆ ವರ್ಷ ಬಂದ ‘ಬಾಹುಬಲಿ’ ಸಿನಿಮಾ ಹಿಟ್ ಆಯಿತು. ಇದರಿಂದ ಅವರು ಚಿತ್ರರಂಗದಲ್ಲಿ ಮುಂದುವರಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Martin: ದರೋಡೆಕೋರನಾಗಿದ್ದ ನಥನ್.. ದೊಡ್ಡ ಕುತ್ತಿಗೆ ರುಬಿಲ್: ಈ ದೈತ್ಯದೇಹಿಗಳ ಹಿನ್ನಲೆ, ಡಯೆಟ್ ಏನು?

Wed Mar 1 , 2023
ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಟೀಸರ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. 4 ದಿನಕ್ಕೆ 70 ಮಿಲಿಯನ್‌ಗೂ ಅಧಿಕ ವೀವ್ಸ್ ಸಾಧಿಸಿ ಸದ್ದು ಮಾಡ್ತಿದೆ. ಎ. ಪಿ ಅರ್ಜುನ್ ಟೇಕಿಂಗ್, ಸಿನಿಮಾ ಮೇಕಿಂಗ್, ಧ್ರುವ ಆರ್ಭಟ, ವಿಎಫ್‌ಎಕ್ಸ್ ಎಲ್ಲವೂ ಸಖತ್ ಕಿಕ್ ಕೊಡ್ತಿದೆ. ಇನ್ನು ಟೀಸರ್‌ನಲ್ಲಿ ಇಬ್ಬರು ಫಾರಿನ್ ಬಾಡಿ ಬಿಲ್ಡರ್‌ಗಳ ಜೊತೆ ಧ್ರುವ ಗುದ್ದಾಡಿರೋದು ಹೈಲೆಟ್ ಎನಿಸಿಕೊಂಡಿದೆ. ‘ಮಾರ್ಟಿನ್’ ಟೀಸರ್‌ ಸಿನಿಮಾ ಬಗ್ಗೆ ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿದೆ. […]

Advertisement

Wordpress Social Share Plugin powered by Ultimatelysocial