ಕೇರಳದ ಕೊಟ್ಟಾಯಂ ಜಿಲ್ಲೆಯ ಎರಡು ಹಳ್ಳಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು ದೃಢವಾಗಿರುವ ನಿಟ್ಟಿನಲ್ಲೇ ಜ್ವರ ಕಾಣಿಸಿಕೊಂಡಿರುವ ಕೋಳಿ ಮತ್ತು ಬಾತುಕೋಳಿಗಳನ್ನ ದಮನ ಮಾಡಲಾಗಿದೆ ಎಂದು ತಿಳಿದುಬಂದಿದೆ. ಗುಂಡ್ಲುಪೇಟೆಯು ಕೇರಳ ಮತ್ತು ತಮಿಳುನಾಡು ಗಡಿಗಳನ್ನ ಹೊಂದಿಕೊಂಡಿರುವ ಕಾರಣ ಗಡಿಯಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಕೇರಳ ರಾಜ್ಯದಿಂದ ಒಳಬರುವ ಗೂಡ್ಸ್ ವಾಹನಗಳಿಗೆ ಹೈಮೊಕ್ಲೋರೈಡ್ ಔಷಧಿ ದ್ರಾವಣವನ್ನ ಸಿಂಪಡಿಸಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗ್ತಿದ್ದು ಹಕ್ಕಿಜ್ವರ ಹತೋಟಿಗೆ ಬರುವ ತನಕ ಕೇರಳದಿಂದ ರಾಜ್ಯದೊಳಗೆ ಕೋಳಿ ಸಾಗಾಣಿಕೆಯನ್ನ ನಿಷೇಧಿಸಲಾಗಿದೆ ಎಂದು ಪಶುಪಾಲನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de….