ಯಳಂದೂರು ತಾಲ್ಲೂಕಿನ ಕೆ.ದೇವರಹಳ್ಳಿ ಗ್ರಾಮದಲ್ಲಿ ಗಾಂಜಾ ವಶ.ಖಚಿತ ಮಾಹಿತಿ ಆದಾರದ ಮೇಲೆ ಮಾನ್ಯ ಅಬಕಾರಿ ಜಂಟಿ ಆಯುಕ್ತರು ಮೈಸೂರು ವಿಭಾಗ ಮೈಸೂರು ರವರ ಆದೇಶದಂತೆ ಹಾಗೂ ಮಾನ್ಯ ಅಬಕಾರಿ ಉಪ, ಆಯುಕ್ತರು ಚಾಮರಾಜ ನಗರ ಜಿಲ್ಲೆ ರವರ ನಿರ್ದೇಶನದಂತೆ ಮತ್ತು ಅಬಕಾರಿ ಉಪ ಅಧೀಕ್ಷಕರು ಚಾಮರಾಜನಗರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಚಾಮರಾಜನಗರ ತಾಲ್ಲೂಕಿನ ಕೆ. ದೇವರಹಳ್ಳಿ ಗ್ರಾಮದ ಮಾದೇಗೌಡ ಬಿನ್ ವೀರೇಗೌಡ ರವರ ಮನೆಯ ಮೇಲೆ ಚಾಮರಾಜನಗರ ಉಪವಿಭಾಗದ ಸಿಬ್ಬಂದಿಗಳು ದಾಳಿ ನಡೆಸಿದರು.ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿ ಇಟ್ಟು ಕೊಂಡಿದ್ದ 0.180 ಗ್ರಾo ಒಣ ಗಾಂಜಾ ವನ್ನು ವಶಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಗೊಳಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.ದಾಳಿಯ ಕಾರ್ಯದಲ್ಲಿ ಚಾಮರಾಜನಗರ ಉಪ ವಿಭಾಗದ ಸಿಬ್ಬಂದಿಗಳಾದ ಅಬಕಾರಿ ನಿರೀಕ್ಷಕ ಉಮಾಶಂಕರ್, ಉಪನಿರೀಕ್ಷಕರಾದ ನಂದಿನಿ,
ಕಾನ್ಸ್ಟೇಬಲ್ ರವಿಕುಮಾರ್ ಹಾಗೂ ವಾಹನ ಚಾಲಕ ವೀರಪ್ಪ ಭಾಗವಹಿಸಿ ಪ್ರಕರಣವನ್ನು ಅಬಕಾರಿ ಉಪ ನಿರೀಕ್ಷಕರಾದ ನಂದಿನಿ ರವರು ದಾಖಲಿಸಿರುತ್ತಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada