ಬೆಂಗಳೂರು ಬನಶಂಕರಿ ಪೊಲೀಸರಿಂದ ಖತರ್ನಾಕ್ ಆರೋಪಿ ಬಂಧನ.
ನವನೀತ್ ಪಾಂಡೆ(34) ಬಂಧಿತ ಆರೋಪಿ.
ಕ್ರೆಡಿಟ್ ಗ್ರಾಹಕರನ್ನ ಟಾರ್ಗೇಟ್ ಮಾಡಿ ವಂಚನೆ ಮಾಡುತ್ತಿದ್ದ ಆರೋಪಿ.
ಆರೋಪಿ ಕಾನ್ಪುರದಲ್ಲಿ ಸಿವಿಲ್ ಇಂಜಿನಿಯರ್ ಮುಗಿಸಿದ್ದ.
ಪಾಂಡೆ ಐ ಐ ಟಿ ಯಲ್ಲಿ ವ್ಯಾಸಾಂಗ ಮಾಡಿದ್ದ.
ಇದ್ದ ಕೆಲಸವನ್ನೂ ಬಿಟ್ಟು, ಬುದ್ಧಿವಂತಿಕೆ ಇಂದ ವಂಚನೆ ಮಾಡ್ತಿದ್ದ.
ತಿಂಗಳಿಗೆ 3 ರಿಂದ ನಾಲ್ಕು ಲಕ್ಷ ದುಡಿಯುತ್ತಿದ್ದ ಆರೋಪಿ.
ಕ್ರೆಡಿಟ್ ಕಾರ್ಡ್ ಗ್ರಾಹಕರ ದುಡ್ಡಿನಲ್ಲೇ ಇವನ ಆಟ.
ಆದ್ರೆ ಗ್ರಾಹಕರಿಗೆ ಮಾತ್ರ ಇವನ ವಂಚನೆ ಗೊತ್ತಾಗುತ್ತಿರಲಿಲ್ಲ.
ಕ್ರೆಡಿಟ್ ಕಾರ್ಡ್ ಮೂಲಕ ಲೋನ್ ಕೊಡಿಸಿ ಕ್ರೆಡಿಟ್ ರಿವಾರ್ಡ್ ಪಾಯಿಂಟ್ಸ್ ಗಳಿಸ್ತಿದ್ದ.
ಈತನ ಬುದ್ದಿವಂತಿಕೆ ಮಾರುಹೋಗಿದ್ದ 185 ಮಂದಿ ಕ್ರೆಡಿಟ್ ಕಾರ್ಡನ್ನೇ ಆರೋಪಿಗೆ ಕೊಟ್ಟಿದ್ದರು.
ಮೊದಲ ಗ್ರಾಹಕರ ಬಿಲ್ಲನ್ನ ಎರಡನೆಯ ಗ್ರಾಹಕರ ಕ್ರೆಡಿಟ್ ಕಾರ್ಡ್ ಮೂಲಕ ಪೇಮೆಂಟ್ ಮಾಡಿಸುತ್ತಿದ್ದ ಪಾಂಡೆ.
ಎರಡನೆಯ ಗ್ರಾಹಕನ ಕ್ರೆಡಿಟ್ ಬಿಲ್ಲನ್ನ ಮೂರನೆ ಗ್ರಾಹಕನ ಬಳಿ ಮಾಡಿಸುತ್ತಿದ್ದ ಆರೋಪಿ.
ಇದೇ ರೀತಿ ಹಲವರ ಬಿಲ್ ಪೇಮೆಂಟ್ ಮಾಡಿಸಿ ನಂಬಿಕೆ ಗಳಿಸುತ್ತಿದ್ದ.
ಆದ್ರೆ ಆರೋಪಿ ಬಡ್ಡಿ ಹಣ ಜೊತೆಗೆ ರಿವಾರ್ಡ್ ಹಣ ಹೊಡೆಯುತ್ತಿದ್ದದ್ದು ಯಾರಿಗೂ ಗೊತ್ತಾಗುತ್ತಿರಲಿಲ್ಲ.
ಹೀಗಾಗಿ ಆರೋಪಿಯನ್ನ ನಂಬಿ ಕ್ರೆಡಿಟ್ ಕಾರ್ಡ್ ಕೊಟ್ಟು ಹೋಗುತ್ತಿದ್ದ ಗ್ರಾಹಕರು.
ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದ ಆರೋಪಿ.
ಅದರಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಟಿಕಟ್ ಬುಕ್ ಮಾಡುತ್ತಿದ್ದ ಆರೋಪಿ.
ಅದರಲ್ಲಿ ಬರುವ ರಿವಾರ್ಡ್ ಪಾಯಿಂಟ್ಸ್ ರೀಡಿಮ್ ಮಾಡಿ ಹಣ ಹೊಡೆಯುತ್ತಿದ್ದ.
ಹೋಟೆಲ್ ಒಂದರ ಹೆಸರಲ್ಲಿ ಸ್ವೈಪ್ ಮುಶಿನ್ ಖರೀದಿಸಿದ್ದ ಆರೋಪಿ.
ಪ್ರಕರಣ ಬೆಳಕಿಗೆ ಬಂದಿದ್ದೇ ಹೋಟೆಲ್ ಮಾಲೀಕರು ದೂರು ಕೊಟ್ಟಮೇಲೆ.
ಸದ್ಯ ಆರೋಪಿ ಬಂಧಿಸಿ ಬ್ಯಾಂಕ್ ಅಕೌಂಟ್ ಫ್ರೀಜ್ ಮಾಡಿರುವ ಪೊಲೀಸರು.
ಪಾಂಡೆ ಅಕೌಂಟ್ ನಲ್ಲಿದ್ದ 12 ಲಕ್ಷ ಹಣ ಫ್ರೀಜ್.
ಪ್ರಾರಂಭದಲ್ಲೇ ಪೊಲೀಸರ ಬಲೆಗೆ ಬಿದ್ದ ಆರೋಪಿ.
ಇಷ್ಟು ಕ್ರೆಡಿಟ್ ಕಾರ್ಡ್ ಹಣವನ್ಬ ಒಟ್ಟಿಗೆ ಡ್ರಾ ಮಾಡಿ ಕೋಟಿ ಹಣ ಎಗರಿಸಲು ಪ್ಲಾನ್.
ಆದ್ರೆ ಅಷ್ಟರಲ್ಲಿ ಪೊಲೀಸ್ರ ಬಲೆಗೆ ಬಿದ್ದ ಆರೋಪಿ.
ಬಂಧಿತನಿಂದ 110 ಕ್ರೆಡಿಟ್ ಕಾರ್ಡ್,110 ಡೆಬಿಟ್ ಕಾರ್ಡ್, 3 ಲ್ಯಾಪ್ ಟಾಪ್, 6 ಮೊಬೈಲ್ 14 ಸ್ವೈಪಿಂಗ್ ಮಶಿನ್ ವಶಕ್ಕೆ.
ಸದ್ಯ ತನಿಖೆ ಮುಂದುವರೆಸಿರುವ ಬನಶಂಕರಿ ಪೊಲೀಸ್ರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada