Kichcha Sudeep: ಕಿಚ್ಚನಿಗೂ ಇತ್ತು ಮೋದಿ ಭೇಟಿಗೆ ಆಹ್ವಾನ! ಸುದೀಪ್ ಯಾಕೆ ಹೋಗಿಲ್ಲ?

 

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಟ ರಿಷಬ್ ಶೆಟ್ಟಿ, ಯಶ್, ಅಯ್ಯೋ ಶ್ರದ್ಧಾ, ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಭೇಟಿ ಮಾಡಿಬಂದಿದ್ದಾರೆ.

ಅದರ ಫೋಟೋಸ್ ವೈರಲ್ ಆಗಿದ್ದವು.

ಆದರೆ ಈ ಫೋಟೋಗಳನ್ನು ನೋಡಿ ಎಲ್ಲರಿಗೂ ಅಚ್ಚರಿಯಾಗಿತ್ತು. ಕಿಚ್ಚ ಸುದೀಪ್, ಶಿವರಾಜ್​ಕುಮಾರ್ ಅವರನ್ನು ಯಾಕೆ ಆಹ್ವಾನಿಸಲಿಲ್ಲ ಎಂದು ಎಲ್ಲರೂ ಅಚ್ಚರಿಪಟ್ಟಿದ್ದರು. ಹಾಗಾದರೆ ಕಿಚ್ಚನಿಗೆ ಆಹ್ವಾನ ಇರಲಿಲ್ಲವಾ?

ಇದಕ್ಕೆ ನಟ, ನಿರೂಪಕ ಕಿಚ್ಚ ಸುದೀಪ್ ಅವರೇ ಪ್ರತಿಕ್ರಿಯಿಸಿದ್ದಾರೆ. ಮೋದಿ ಭೇಟಿಗೆ ತಮಗೂ ಆಹ್ವಾನ ಇತ್ತು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಆದರೆ ಯಾಕೆ ಹೋಗಿಲ್ಲ ಎನ್ನುವುದು ನಿಮಗೆ ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ ಅವರು ತಮಗೂ ಆಹ್ವಾನ ನೀಡಿದ್ದರು. ಆದರೆ, ಜ್ವರದ ಕಾರಣದಿಂದಾಗಿ ನಾನು ಹೋಗಲಿಲ್ಲ ಎಂದಿದ್ದಾರೆ.

ಪ್ರಧಾನಿ ಅವರನ್ನು ಭೇಟಿ ಮಾಡಲು ಹಲವು ಪ್ರೊಟೊಕಾಲ್ ಇರುತ್ತವೆ. ಶೀತ ಮತ್ತು ಜ್ವರ ಇದ್ದ ಕಾರಣದಿಂದಾಗಿ ಅವರನ್ನು ಭೇಟಿ ಮಾಡಲಿಲ್ಲ. ಆರ್.ಟಿ.ಪಿ.ಸಿ.ಆರ್ ಮಾಡಿಸಬೇಕಿತ್ತು. ಜ್ವರ ಇದ್ದರಿಂದ ಭೇಟಿ ಸಾಧ್ಯವಾಗಲ್ಲ ಅನಿಸಿ ಹೋಗುವುದನ್ನು ಬಿಟ್ಟೆ ಎಂದು ಸುದೀಪ್ ಹೇಳಿದ್ದಾರೆ.

ಈ ನಡುವೆ ಕಿಚ್ಚ ಅವರು ಮುಂಬರುವ ಕ್ರಿಕೆಟ್​ಗೂ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಪ್ರತಿನಿತ್ಯ ಮಿಸ್ ಮಾಡದೆ ಪ್ರಾಕ್ಟೀಸ್ ಮಾಡುತ್ತಿದ್ದಾರೆ.

ಕಿಚ್ಚ ಸುದೀಪ್ ಕ್ರಿಕೆಟ್ ಪಂದ್ಯ ಇರುವ ಕಾರಣ ಹೆಚ್ಚು ಗಮನ ಹರಿಸಿ ಸಿದ್ಧತೆ ನಡೆಸುತ್ತಿದ್ದಾರೆ. ಯಾವುದೇ ದಿನವೂ ಮಿಸ್ ಮಾಡದೆ ಪ್ರತಿದಿನ ಪ್ರಾಕ್ಟೀಸ್ ಮಾಡುತ್ತಿದ್ದಾರೆ.

ಕಿಚ್ಚ ಅವರು ಉಪೇಂದ್ರ ಅವರ ಕಬ್ಜಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಫೆಬ್ರವರಿ 17ರಂದು ರಿಲೀಸ್ ಆಗಲಿದೆ. ಇದರಲ್ಲಿ ಶ್ರಿಯಾ ಶರಣ್ ಕೂಡಾ ನಟಿಸಿದ್ದಾರೆ.

ಒಂದು ದಿನ ಮೊದಲೇ ಕಬ್ಜ ಚಿತ್ರದ ಪ್ರೀಮಿಯರ್ ಶೋ ಕೂಡಾ ನಡೆಯಲಿದೆ. ಇದರಲ್ಲಿ ಉಪ್ಪಿಗೆ ಸಾಥ್ ಕೊಟ್ಟಿರುವ ಸುದೀಪ್ ಅವರು ಖಡಕ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ದರಲ್ಲಿ ನಟಿ ಶ್ರಿಯಾ ಅವರ ಕ್ವೀನ್ ಲುಕ್​ನಲ್ಲಿ ಕಾಣಿಸಿದ್ದಾರೆ. ಉಪೇಂದ್ರ ಅವರು ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದು ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಾಲೆಯಲ್ಲೇ 2ನೇ ಮದ್ವೆಯಾದ ಹೆಡ್​ ಮಾಸ್ಟರ್​ಗೆ ಮರುಕ್ಷಣವೇ ಮೊದಲ ಪತ್ನಿಯಿಂದ ಬಿಗ್​ ಶಾಕ್!​​

Thu Feb 16 , 2023
ಭುವನೇಶ್ವರ್​: ಮೊದಲ ಪತ್ನಿಯ ಜತೆಗಿನ ಡಿವೋರ್ಸ್​ ಕೇಸ್​ ಇತ್ಯರ್ಥವಾಗುವ ಮುನ್ನವೇ ಶಾಲೆಯಲ್ಲೇ ಎರಡನೇ ವಿವಾಹದ ಹೆಡ್​ ಮಾಸ್ಟರ್​ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಘಟನೆ ಒಡಿಶಾದ ಕಂಧಮಾಲ್​ ಜಿಲ್ಲೆಯ ದರಿಗಿನಿಬಾದಿ ಬ್ಲಾಕ್​ ಅಡಿಯಲ್ಲಿ ಬರುವ ಸುಜಮಾಜು ಹೈಸ್ಕೂಲ್​ನಲ್ಲಿ ನಡೆದಿದೆ. ಶಾಲೆಯ ಆವರಣದಲ್ಲಿ ಸಹ ಶಿಕ್ಷಕರ ಸಮ್ಮುಖದಲ್ಲಿ ಹೆಡ್​ ಮಾಸ್ಟರ್​ ಮದುವೆಯಾದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಹೆಡ್​ಮಾಸ್ಟರ್​ ಅನ್ನು ಶ್ರೀಪಾಠಿ ನಾಯಕ್​ ಎಂದು […]

Advertisement

Wordpress Social Share Plugin powered by Ultimatelysocial