ಶಾಲೆಯಲ್ಲೇ 2ನೇ ಮದ್ವೆಯಾದ ಹೆಡ್​ ಮಾಸ್ಟರ್​ಗೆ ಮರುಕ್ಷಣವೇ ಮೊದಲ ಪತ್ನಿಯಿಂದ ಬಿಗ್​ ಶಾಕ್!​​

ಭುವನೇಶ್ವರ್​: ಮೊದಲ ಪತ್ನಿಯ ಜತೆಗಿನ ಡಿವೋರ್ಸ್​ ಕೇಸ್​ ಇತ್ಯರ್ಥವಾಗುವ ಮುನ್ನವೇ ಶಾಲೆಯಲ್ಲೇ ಎರಡನೇ ವಿವಾಹದ ಹೆಡ್​ ಮಾಸ್ಟರ್​ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಘಟನೆ ಒಡಿಶಾದ ಕಂಧಮಾಲ್​ ಜಿಲ್ಲೆಯ ದರಿಗಿನಿಬಾದಿ ಬ್ಲಾಕ್​ ಅಡಿಯಲ್ಲಿ ಬರುವ ಸುಜಮಾಜು ಹೈಸ್ಕೂಲ್​ನಲ್ಲಿ ನಡೆದಿದೆ.

ಶಾಲೆಯ ಆವರಣದಲ್ಲಿ ಸಹ ಶಿಕ್ಷಕರ ಸಮ್ಮುಖದಲ್ಲಿ ಹೆಡ್​ ಮಾಸ್ಟರ್​ ಮದುವೆಯಾದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

ಹೆಡ್​ಮಾಸ್ಟರ್​ ಅನ್ನು ಶ್ರೀಪಾಠಿ ನಾಯಕ್​ ಎಂದು ಗುರುತಿಸಲಾಗಿದೆ. ಶಾಲೆಯ ಸ್ಟೋರ್​ ರೂಮ್​ನಲ್ಲಿ ಸಹ ಶಿಕ್ಷಕರ ಉಪಸ್ಥಿತಿಯಲ್ಲಿ ಮತ್ತೊಂದು ಮಹಿಳೆಯ ಜೊತೆ ಹಾರ ಬದಲಾವಣೆ ಮಾಡಿಕೊಂಡು, ಕೇಕ್​ ಕತ್ತರಿಸುತ್ತಿರುವ ದೃಶ್ಯ ಫೋಟೋದಲ್ಲಿದೆ.

ಫೋಟೋ ವೈರಲ್​ ಆಗುತ್ತಿದ್ದಂತೆ ಅದು ಮೊದಲ ಪತ್ನಿ ನಿರುಪಮಾ ದಕುವಾ ಅವರ ಗಮನಕ್ಕೆ ಬಂದಿದ್ದು, ಅವರು ತಕ್ಷಣ ಬಲಿಗುಡ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಡಿವೋರ್ಸ್​ ಪ್ರಕರಣ ಇನ್ನೂ ಇತ್ಯರ್ಥವಾಗದಿರುವಾಗ ಶಾಲೆಯ ಆವರಣದಲ್ಲಿ ಹೆಡ್​ ಮಾಸ್ಟರ್​ ಒಬ್ಬರು ಮರು ಮದುವೆಯಾಗವುದೆಂದರೆ ಏನು ಅರ್ಥ ಎಂಬ ಪ್ರಶ್ನೆ ಕೇಳಿಬಂದಿದೆ. ಮೂಲಗಳ ಪ್ರಕಾರ ನಾಯಕ್​ ಮತ್ತು ನಿರುಪಮಾ 2003ರಲ್ಲಿ ಮದುವೆಯಾದರು. ದಂಪತಿಗೆ 12 ವರ್ಷದ ಹಣ್ಣು ಮಗಳಿದ್ದಾಳೆ.

ಸುಜಮಾಜು ಹೈಸ್ಕೂಲ್​ನಲ್ಲಿ ಹೆಡ್​ ಮಾಸ್ಟರ್​ ಆಗಿರುವ ಶ್ರೀಪಾಠಿ ನಾಯಕ್​ ನನ್ನ ಪತಿ. ಕಳೆದ 7 ವರ್ಷಗಳಿಂದ ಆತ ನನಗೆ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನೀಡಿದ್ದಾರೆ. ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿ, ಆ ನಂತರ ಅದನ್ನು ಹಿಂಪಡೆದುಕೊಂಡಿದ್ದಾರೆ ಎಂದು ನಿರುಪಮಾ ಹೇಳಿದ್ದಾರೆ.

ಫೆ. 6ರಂದು ನನ್ನ ಪತಿ ಬೇರೊಂದು ಮಹಿಳೆಯ ಜೊತೆ ಮರುವಿವಾಹವಾಗಿದ್ದಾರೆ ಮತ್ತು ಶಾಲೆಯ ಸ್ಟೋರ್​ ರೂಮ್​ನಲ್ಲಿ ಆಕೆಯಿಂದ ವಾಸವಿದ್ದಾರೆ ಎಂದು ನಿರುಪಮಾ ಆರೋಪ ಮಾಡಿದ್ದಾರೆ. ಆದರೆ, ಆರೋಪವನ್ನು ನಾಯಕ್​ ತಿರಸ್ಕರಿಸಿದ್ದಾರೆ. ನನ್ನ ಹುಟ್ಟುಹಬ್ಬದ ಆಚರಣೆ ವೇಳೆ ತೆಗೆದ ಫೋಟೋ ಅದು ಎಂದು ಸ್ಪಷ್ಟನೆ ನೀಡಿದ್ದಾರೆ.

ನನ್ನ ಮೇಲಿನ ಆರೋಪಗಳೆಲ್ಲ ಆಧಾರರಹಿತ. ನಾನು ಈಗಾಗಲೇ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದೇನೆ. ಪ್ರಕರಣ ಇನ್ನೂ ಕೋರ್ಟ್​ನಲ್ಲಿ ಇತ್ಯರ್ಥವಾಗಿಲ್ಲ. ನನ್ನ ಹುಟ್ಟುಹಬ್ಬ ಆಚರಣೆ ವೇಳೆ ತೆಗೆದ ಫೋಟೋ ವೈರಲ್​ ಆಗಿದೆ. ಶಾಲೆಯ ಸಮಯದ ನಂತರ ನನ್ನ ಹುಟ್ಟುಹಬ್ಬದಂದು ನಾನು ಸಿಬ್ಬಂದಿಗೆ ಔತಣ ಕೂಟವನ್ನೂ ಏರ್ಪಡಿಸಿದ್ದೆ ಎಂದು ನಾಯಕ್ ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೇಶದ ಜನತೆ ಪ್ರಧಾನಿ ಮೋದಿ ಅವರ ಪರವಾಗಿದ್ದಾರೆ.

Thu Feb 16 , 2023
  ಅಗರ್ತಲಾ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ   ಪ್ರತಿ ಸ್ಪರ್ಧಿಯೇ ಇಲ್ಲ. ದೇಶದ ಜನತೆ ಪೂರ್ಣ ಹೃದಯದಿಂದ ಪ್ರಧಾನಿ ಮೋದಿ ಅವರ ಪರವಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರತಿಕ್ರಿಯಿಸಿದ್ದಾರೆ.ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, 2024 ರ ಚುನಾವಣೆಯಲ್ಲಿ ಬಿಜೆಪಿಗೆ ಪ್ರಮುಖ ವಿರೋಧ ಪಕ್ಷದ ಬಗ್ಗೆ ದೇಶದ ಜನರು ನಿರ್ಧರಿಸುತ್ತಾರೆ. ಅವರು ಯಾವುದೇ ಪಕ್ಷಕ್ಕೆ ವಿರೋಧ ಪಕ್ಷದ ಹಣೆಪಟ್ಟಿ ನೀಡಿಲ್ಲ ಎಂದು ತಿಳಿಸಿದ್ದಾರೆ. ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಮತ್ತು […]

Advertisement

Wordpress Social Share Plugin powered by Ultimatelysocial