ಕೊಪ್ಪಳ:ಜಿಲ್ಲೆಯ ಕನಕಗಿರಿ ಶಾಸಕ ಬಸವರಾಜ ದಡೇಸಗೂರು ಸಂಚರಿಸುತ್ತಿದ್ದ ಕಾರ್ ವೃದ್ದೆಗೆ ಡಿಕ್ಕಿ ಪರಿಣಾಮ ವೃದ್ದೆಯೊಬ್ಬಳು ಸಾವನ್ನಪ್ಪಿದ ಘಟನೆ ಕಾರಟಗಿ ಬಳಿಯ ಮೈಲಾಪುರ ಕ್ರಾಸ್ ಬಳಿ ನಡೆದಿದೆ.
ಮಂಗಳವಾರದಂದು (ಜ. 10) ಚಳ್ಳೂರು ಕ್ಯಾಂಪಿನ ಮರಿಯಮ್ಮ ನಾಯಕ ಎಂಬ 70 ವರ್ಷದ ವೃದ್ದೆಯೊಬ್ಬರು ತಮ್ಮ ಗ್ರಾಮದಿಂದ ಕಾರಟಗಿಗೆ ಆಗಮಿಸಿ ತನ್ನ ವೃದ್ಯಾಪ್ಯ ವೇತನ ವಿಳಂಬವಾಗಿರುವದರಿಂದ ವಿಚಾರಿಸಲು ಬಂದಿದ್ದಳು. ವಿಚಾರಿಸಿ ವಾಪಸ್ಸು ತನ್ನ ಗ್ರಾಮಕ್ಕೆ ಹೋಗುವ ಹಿನ್ನೆಲೆಯಲ್ಲಿ ಮೈಲಾಪುರ ಕ್ರಾಸ್ ಬಳಿ ನಿಂತಿದ್ದಳು. ಇದೇ ಸಮಯಕ್ಕೆ ಕಾರಟಗಿಯತ್ತ ಹೊರಟಿದ್ದ ಕನಕಗಿರಿ ಶಾಸಕ ಬಸವರಾಜ ದಡೇಸಗೂರು ಕಾರು ಚಾಲಕನ ಅಜಾಗರೂಕತೆಯಿಂದ ರಸ್ತೆಯ ಪಕ್ಕ ನಿಂತಿದ್ದ ವೃದ್ದೆಗೆ ಡಿಕ್ಕಿ ಹೊಡೆದಿದೆ.
ಶಾಸಕರಿರುವ ಕಾರು ಮೈಲಾಪುರ ಕ್ರಾಸ್ ಬಳಿಯಲ್ಲಿ ಬರುತ್ತಿರುವಾಗ ಕಾರಿಗೆ ಅಡ್ಡವಾಗಿ ನಾಯಿಯೊಂದ ಬಂದಿದೆ. ನಾಯಿಯ ಜೀವ ಉಳಿಸಲು ಹೋದ ಚಾಲಕ ಪಕ್ಕದಲ್ಲಿದ್ದ ವೃದ್ದೆಗೆ ಡಿಕ್ಕಿ ಹೊಡೆದ ಪರಿಣಾಮ ವೃದ್ದೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಶಾಸಕ ಬಸವರಾಜ ದಡೇಸಗೂರು ತಾವೇ ನಿಂತು ಆಕೆಯನ್ನು ಕಾರಟಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.
ಆಸ್ಪತ್ರೆಗೆ ದಾಖಲಿಸಿದ ನಂತರ ಅಲ್ಲಿಂದ ಹೊರಟು ಹೋಗಿದ್ದಾರೆ. ಆದರೆ ತಲೆಗೆ ಪೆಟ್ಟು ಬಿದ್ದಿದ್ದರಿಂದ ಆಕೆಯನ್ನು ಬಳ್ಳಾರಿ ವಿಮ್ಸ್ ಗೆ ದಾಖಲಿಸಲು ಕಾರಟಗಿ ವೈದ್ಯರು ಸೂಚಿಸಿದ ಹಿನ್ನೆಲೆ ಆಕೆಯನ್ನು ಬಳ್ಳಾರಿಗೆ ಕರೆದಿಕೊಂಡು ಹೋಗುತ್ತಿದ್ದರು. ಆದರೆ ದಾರಿ ಮಧ್ಯೆದಲ್ಲಿ ತೀವ್ರ ಸ್ರಾವವಾಗಿ ವೃದ್ದೆ ಸಾವನ್ನಪ್ಪಿದ್ದಾಳೆ.
https://play.google.com/store/apps/details?id=com.speed.newskannada