ಉತ್ತರ ಕರ್ನಾಟಕ ಪ್ರಸಿದ್ದ ಕೂಟ್ಟೂರು ಮಹಾ ರಥೋತ್ಸವ ನಾಳೆ ನಡೆಯಲಿದೆ. ಪ್ರತಿ ವರ್ಷವೂ ನಡೆಯುವ ಜಾತ್ರೆಗೆ ರಾಜ್ಯ ಹೊರ ರಾಜ್ಯದ ಲಕ್ಷಾಂತರ ಭಕ್ತರ ಭಾಗಿಯಾಗ್ತಾರೆ. ಕೂಟ್ಟೂರು ಜಾತ್ರೆ ಹಿನ್ನಲೆ ಈಗಾಗಲೇ ವಿಜಯನಗರ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದ್ದು,
ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಶ್ರೀ ಗುರು ಬಸವೇಶ್ವರ ಸ್ವಾಮಿಯ ಮಹಾರಥೋತ್ಸವಕ್ಕೆ ಪಾದಯಾತ್ರೆ ಮೂಲಕ ಆಗಮಿಸ್ತಿರೋ ದೃಶ್ಯಗಳು ಕಂಡು ಬರುತ್ತಿವೆ. ಇನ್ನೂ ರಥೋತ್ಸವ ವೇಳೆ ಯಾವ್ದೆ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.
ತೇರು ಎಳೆಯೋಕೆ ಈಗಾಗಲೇ ಸಕಲ ಸಿದ್ಧತೆ ಕಾರ್ಯ ಭರದಿಂದ ಸಾಗುತ್ತಿವೆ. ಬಸವೇಶ್ವರ ರಥೋತ್ಸವ ಹಿನ್ನೆಲೆಯಲ್ಲಿ ಅಂಕಣ ಕಟ್ಟೋ ಕಾರ್ಯ ಆರಂಭಗೊಂಡಿದ್ದು ಲಕ್ಷಾಂತರ ಭಕ್ತ ಬಸವೇಶ್ವರ ಸ್ವಾಮಿ ದರ್ಶನಕ್ಕಾಗಿ ಆಗಮಿಸ್ತಿದ್ದಾರೆ..
ಅಮವಾಸ್ಯೆ ಆದ ಐದು ದಿನಗಳ ನಂತರ ತೇರು ಗಡ್ಡಿಯ ತಗಡಿನ ಸೆಡ್ಡಿನಿಂದ ಧಾರ್ಮಿಕ ವಿಧಿವಿಧಾನಳಿಂದ ಪೂಜೆ ಸಲ್ಲಿಸಿ ಹೊರಗೆ ಹಾಕಿ ನಂತರ ಇಲ್ಲಿನ ಆಯಾಗಾರ ಬಳಗದವರು ರಥದ ನಿರ್ಮಾಣ ಕಾಮಗಾರಿ ನಡೆಸಲಾಗ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada