“ಕ್ರಾಂತಿ’ ಟ್ರೈಲರ್ ಲಾಂಚ್‌ನಲ್ಲಿ ಸುದೀಪ್ ಗೆಸ್ಟ್ ಆಗಿ ಬರಬೇಕು” ದರ್ಶನ್ ಟ್ವೀಟ್ ಬಳಿಕ ಹೊಸ ಬೇಡಿಕೆ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣ ಇನ್ನೂ ಹಾಟ್ ಟಾಪಿಕ್ ಆಗಿಯೇ ಇದೆ. ಈ ಮಧ್ಯೆ ದರ್ಶನ್ ತನ್ನ ಬೆಂಬಲಕ್ಕೆ ನಿಂತಿರೋ ಎಲ್ಲಾ ತಾರೆಯರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಕಿಚ್ಚಸುದೀಪ್‌ಗೂ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದರು.ನಿನ್ನೆ (ಡಿಸೆಂಬರ್ 21) ಯಿಂದ ಇದೇ ವಿಚಾರವಾಗಿ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ದರ್ಶನ್ ಹಾಗೂ ಕಿಚ್ಚ ಸುದೀಪ್ ಮತ್ತೆ ಒಂದಾಗೇ ಬಿಟ್ರು ಅನ್ನೋ ಲೆವೆಲ್‌ಗೆ ಇಬ್ಬರ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.

ಸುದೀಪ್ ಬೆಂಬಲಕ್ಕೆ ದರ್ಶನ್ ಧನ್ಯವಾದ: ಹಳೆಯದನ್ನು ಮರೆತು ಇಬ್ಬರು ಅಪ್ಪಿಕೊಳ್ಳಿ ಎಂದ ಜಗ್ಗೇಶ ಕಿಚ್ಚ ಸುದೀಪ್‌ಗೆ ಧನ್ಯವಾದ ಹೇಳಿ ದರ್ಶನ್ ಮಾಡಿದ ಟ್ವೀಟ್ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಏನಾಗುತ್ತಿದೆ? ಇಬ್ಬರ ಅಭಿಮಾನಿಗಳು ಏನು ಹೇಳುತ್ತಿದ್ದಾರೆ? ಕುಚಿಕು ಅಭಿಮಾನಿಗಳ ಸಂಭ್ರಮ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ  ಓದಿ ಕಳೆದ ಐದು ವರ್ಷಗಳಿಂದ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ಕಿತ್ತಾಡುವುದನ್ನೇ ನೋಡುವುದಕ್ಕೆ ಸಿಗುತ್ತಿತ್ತು. ಇಬ್ಬರೂ ಕಿತ್ತಾಟಗಳನ್ನು ನೋಡಿ, ಈ ಜೋಡಿ ಇನ್ಮುಂದೆ ಒಂದಾಗುವುದೇ ಇಲ್ಲವೇನೋ ಅನ್ನೋ ನಿರ್ಧಾರಕ್ಕೆ ಅದೆಷ್ಟೋ ಮಂದಿ ಬಂದಿದ್ದರು. ಆದ್ರೀಗ ಅದೇ ಅಭಿಮಾನಿಗಳು ದರ್ಶನ್ ಮಾಡಿದ ಒಂದೇ ಒಂದು ಟ್ವೀಟ್‌ಗೆ ಒಂದಾಗಿದ್ದಾರೆ. ಪೋಸ್ಟರ್, ಕಟ್‌ಔಟ್‌ಗಳೆಲ್ಲಾ ರಾರಾಜಿಸುತ್ತಿದೆ. ಕುಚಿಕು ಗೆಳೆಯರ ಬಗ್ಗೆ ಪಾಸಿಟಿವ್ ಆಗಿ ಮಾತಾಡುತ್ತಿದ್ದಾರೆ. ಹೊಸ ಬೇಡಿಕೆಗಳನ್ನು ಇಡುತ್ತಿದ್ದಾರೆ.’ಕ್ರಾಂತಿ’ ಟ್ವೀಟ್‌ಗೆ ಸುದೀಪ್ ಬರಲಿ’ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ಖುಷಿಗೆ ಪಾರವೇ ಇಲ್ಲ. ಇಬ್ಬರು ಒಂದಾಗೇ ಬಿಟ್ಟರು ಅಂತಲೇ ಡಿ ಬಾಸ್ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳು ಭಾವಿಸಿದ್ದಾರೆ. ಇದೇ ಜೋಷ್‌ನಲ್ಲಿ ದರ್ಶನ್ ಅಭಿಮಾನಿಗಳು ‘ಕ್ರಾಂತಿ’ ಸಿನಿಮಾದ ಟ್ರೈಲರ್‌ ಲಾಂಚ್‌ಗೆ ಕಿಚ್ಚ ಸುದೀಪ್‌ರನ್ನು ಅತಿಥಿಯಾಗಿ ಕರೆಸಿ ಅಂತ ಟ್ವೀಟ್ ಮಾಡುತ್ತಿದ್ದಾರೆ. ಕುಚಿಕುಗಳ ಪುನರ್‌ಸಮ್ಮಿಲನಕ್ಕೆ ದೊಡ್ಡ ವೇದಿಕೆಯಲ್ಲಿಯೇ ಆಗಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ವಿಜಯನಗರ ಪೊಲೀಸರ ಕಾರ್ಯಾಚರಣೆ.

Thu Dec 22 , 2022
ಬೈಕ್ ಖರೀದಿಯ ನೆಪದಲ್ಲಿ ಬಂದು ಬೆಲೆಬಾಳೋ ಬೈಕ್ ದೋಚಿದ ಕಳ್ಳರು ಅಂದರ್. ವಿಶ್ವಾಸ್,ಜಗನ್ನಾಥ,ಗಜೇಂದ್ರ,ಲಿಖಿತ್,ಶಶಾಂಕ್,ಪವನ್ ಬಂಧಿತರು. ನ.10 ರಂದು ಮಹಮ್ಮದ್ ಆಸಿಫ್ ಎಂಬವರಿಂದ ಬಿಎಂಡಬ್ಲ್ಯು ಬೈಕ್ ದೋಚಿದ್ದ ಕಳ್ಳರು. ಬೈಕನ್ನ ನೊಡೋ ನೆಪದಲ್ಲಿ ಬಂದು ಮಹಮ್ಮದ್ ಆಸಿಫ್ ಗೆ ಹಲ್ಲೆಯನ್ನ ಮಾಡಿದ್ದಾರೆ. ನಂತರ 16 ಲಕ್ಷ ಬೆಲೆಬಾಳೋ ಬಿಎಂಡಬ್ಲ್ಯು ಬೈಕನ್ನ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ವಿಜಯನಗರ ಪೊಲೀಸರಿಂದ ಆರೋಪಿಗಳ ಬಂಧನ. ಬಂಧಿತರಿಂದ […]

Advertisement

Wordpress Social Share Plugin powered by Ultimatelysocial