ದಯವಿಟ್ಟು ರಜೆ ಕೊಡಿ;

 

ಕ್ನೋ: ಪೊಲೀಸ್‌ ಕೆಲಸದಲ್ಲಿ ನಿರ್ದಿಷ್ಟವಾದ ರಜೆಗಳಿರುತ್ತವೆ. ಹೆಚ್ಚು ರಜೆಗಳು ಸಿಗುವುದು ಕಷ್ಟ. ಇಲ್ಲೊಬ್ಬ ಕಾನ್ಸ್‌ ಸ್ಟೇಬಲ್‌ ರಜೆ ಬೇಕೆಂದು ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.ಕಳೆದ ತಿಂಗಳಷ್ಟೇ ಕಾನ್ಸ್‌ ಸ್ಟೇಬಲ್‌ ಗೆ ಮದುವೆಯಾಗಿದೆ. ಮದುವೆಯಾದ ಬಳಿಕ ಸರಿಯಾದ ರಜೆಯಿಲ್ಲದೆ ಯುಪಿಯ ಮಹಾರಾಜ್‌ಗಂಜ್ ಜಿಲ್ಲೆಯ ನೌತನ್ವಾ ಪೊಲೀಸ್ ಠಾಣೆಯಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ. ಹೆಂಡತಿಯ ಬಳಿ ಸಂಬಂಧಿಕರ ಹುಟ್ಟು ಹಬ್ಬಕ್ಕೆ ಬರುತ್ತೇನೆ ಎಂದು ಭರವಸೆ ಕೊಟ್ಟು ಕೆಲಸಕ್ಕೆ ಬಂದಿರುವ ಕಾನ್ಸ್‌ ಸ್ಟೇಬಲ್‌ ಗೆ ರಜೆ ಸಿಗದ ಕಾರಣ, ಈ ವಿಷಯವನ್ನು ಹೆಂಡತಿಯ ಬಳಿ ಹೇಳಿದ್ದಾನೆ. ಇದೇ ಕಾರಣಕ್ಕೆ ಹೆಂಡತಿ ಗಂಡನ ಬಳಿ ಸಿಟ್ಟಾಗಿ ಮಾತು ಬಿಟ್ಟಿದ್ದಾಳೆ.

ರಜೆಗಾಗಿ ಏನು ಮಾಡುವುದೆಂದು ಯೋಚನೆ ಮಾಡಿ ಕೊನೆಗೆ ಮೇಲಾಧಿಕಾರಿಗೆ ಪತ್ರ ಬರೆದು, ನನಗೆ ರಜೆ ಬೇಕು, ಪತ್ನಿ ಸಿಟ್ಟಾಗಿದ್ದಾಳೆ. ಅವಳ ಬಳಿ ರಜೆ ತೆಗೆದುಕೊಂಡು ಬರುತ್ತೇನೆ ಎಂದಿದ್ದೆ. ರಜೆ ಸಿಗದ ಕಾರಣ ಅವಳು ನನ್ನ ಫೋನಿಗೂ ಪ್ರತಿಕ್ರಿಯಿಸುತ್ತಿಲ್ಲ. ನನ್ನ ಬಳಿ ಮಾತು ಬಿಟ್ಟಿದ್ದಾಳೆ. ನನಗೆ ರಜೆ ಕೊಡಿ ಎಂದು ಪತ್ರ ಬರೆದಿದ್ದಾರೆ. ಮೇಲಾಧಿಕಾರಿ ಈದನ್ನು ನೋಡಿ ಜ.10 ರಿಂದ ಕಾನ್ಸ್‌ ಸ್ಟೇಬಲ್‌ ಗೆ 5 ದಿನ ರಜೆಯನ್ನು ಕೊಟ್ಟಿದ್ದಾರೆ.ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಕಾನ್ಸ್‌ ಸ್ಟೇಬಲ್‌ ರಜೆ ಪತ್ರ ವೈರಲ್‌ ಆಗಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಮ ಮಂದಿರದ ಮೇಲೆ ದಾಳಿಗೆ ಸಂಚು

Tue Jan 10 , 2023
ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು  ಈಗ ಅಯೋಧ್ಯೆಯ ರಾಮಜನ್ಮಭೂಮಿ ದೇವಸ್ಥಾನದ ಮೇಲೆ ದಾಳಿ ಮಾಡಲು ಯೋಜಿಸುತ್ತಿವೆ. ಉನ್ನತ ಮಟ್ಟದ ಗುಪ್ತಚರ ಮೂಲಗಳಿಂದ ನ್ಯೂಸ್ 18 ಗೆ ಬಂದ ಮಾಹಿತಿಯ ಪ್ರಕಾರ, ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳು ಈ ಬಾರಿ ಅಯೋಧ್ಯೆಯ ರಾಮಜನ್ಮಭೂಮಿಯ  ಮೇಲೆ ದೊಡ್ಡ ಮಟ್ಟದ ದಾಳಿ ನಡೆಸಲು ಯೋಜಿಸುತ್ತಿವೆ.ಗುಪ್ತಚರ ಮೂಲಗಳ ಪ್ರಕಾರ, ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್-ಎ-ತೈಬಾ (ಎಲ್‌ಇಟಿ), ಈ ಭಯೋತ್ಪಾದಕ ಸಂಘಟನೆಗಳು ಮುಖ್ಯವಾಗಿ ರಾಮ ಮಂದಿರದ ಮೇಲೆ ಭಯೋತ್ಪಾದಕ […]

Advertisement

Wordpress Social Share Plugin powered by Ultimatelysocial