ಶಾಸಕರಾದವರು, ಮಂತ್ರಿಯವರು ಈ ರೀತಿ ಮಾಡೋದು ಸರಿಯಲ್ಲ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅತೃಪ್ತಿ.
ಈ ವಿಚಾರ ನನಗೆ ಎಳ್ಳಷ್ಟು ಒಪ್ಪಿಗೆಯಾಗಿಲ್ಲ.
ಜನಪ್ರತಿನಿಧಿಗಳೇ ಈ ರೀತಿ ಕಚ್ಚಾಡಿದರೆ ಹೇಗೆ.
ಜನಪ್ರತಿನಿಧಿಗಳು ಇನ್ನೊಬ್ಬರಿಗೆ ಮಾದರಿಯಾಗಿರಬೇಕು.
ಯಾರೇ ಮಾಡಿದ್ರು ಅದು ಸರಿಯಾದುದಲ್ಲ.
ಸಾರ್ವಜನಿಕರ ಮೇಲೆ ಇದು ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನ ವಿಚಾರ ಮಾಡಬೇಕು.
ಶಾಸಕರು ಹೇಳಿದಾಗ ಮಂತ್ರಿಯಾದವರು ಒಂದಷ್ಟು ತಡೆದುಕೊಳ್ಳಬೇಕು.
ಸಿಡಿ ಇತ್ಯಾದಿ ಮಾಡ್ತೀನಿ ಅಂತಾರೆ, ಏನಿದರ ಅರ್ಥ.
ಈ ಘಟನೆಯಿಂದ ನನಗೆ ತುಂಬಾ ನೋವಾಗಿದೆ.
ಎಲ್ಲ ಸರ್ಕಾರದಲ್ಲೂ ಸಿಡಿ ರಾಜಕಾರಣಗಳಿದ್ದವು.
ಆದರೆ ಈ ಸರ್ಕಾರದಲ್ಲಿ ಅದು ಹೆಚ್ಚಾಗಿದೆ.
ಶಿಸ್ತು ಇಲ್ಲ ಅಂದ್ರೆ ಹೀಗಾಗುತ್ತೆ,
ಬಿಜೆಪಿಗೆ ಪಕ್ಷಾಂತರ ಮಾಡಿದ್ದಕ್ಕೆ ತನಗೇನು ಬೇಸರವಿಲ್ಲ.
ಶಿಕ್ಷಕರು ಮತ್ತು ಇತರರು ಒತ್ತಾಯ ಮಾಡಿದ್ದಾರೆ ಮೇರೆಗೆ ಬಿಜೆಪಿ ಸೇರಿದ್ದೇನೆ.
ಜೆಡಿಎಸ್ ಮುಖಂಡರ ಮನವಲಿಕೆ ಮಾಡಿಯೇ ನಾನು ಬಿಜೆಪಿಗೆ ಹೋಗಿದ್ದೇನೆ.
ಸಭಾಪತಿ ಆಗಿರೋದ್ರಿಂದ ನಾನು ಯಾರ ಮೇಲೂ ಕೆಸರು ಎರಚೋಕೆ ಹೋಗಿಲ್ಲ.
ಹುಬ್ಬಳ್ಳಿಯಲ್ಲಿ ಬಸವರಾಜ ಹೊರಟ್ಟಿ ಹೇಳಿಕೆ.
https://play.google.com/store/apps/details?id=com.speed.newskannada