ಮಾನ್ವಿ ತಾಲ್ಲೂಕಿನಲಿ ನಿಜಶರಣ ಅಂಬಿಗರ ಚೌಡಯ್ಯ ಅವಮಾನ
ಅಧಿಕಾರಿಗಳ ಗೈರಿನಲ್ಲಿಯೆ ಜಯಂತಿ ಆಚರಣೆ
ಅಧಿಕಾರಿಗಳು ಬರಬೇಕು ಎಂದು ಸಮಾಜದವರಿಂದ ಖಂಡನೆ
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಲ್ಲಿ ಘಟನೆ
ಶಾಸಕ ರಾಜಾ ವೆಂಕಟಪ್ಪನಾಯಕ ಗೈರು
ಮಧ್ಯಾಹ್ನ ಎರಡು ಗಂಟೆಯಾದರು ಕಾರ್ಯಕ್ರಮ ಪ್ರಾರಂಭವಿಲ್ಲ
ರಾಯಚೂರು ಜಿಲ್ಲೆಯಲ್ಲಿ ಅಧಿಕಾರಿಗಳ ಗೈರಿನ ನಡುವೆ ಶಿವಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ.
ಮಧ್ಯಾಹ್ನ ಮೂರುಗಂಟೆಯಾದರು ಕಾರ್ಯಕ್ರಮ ವಿಳಂಬ ಘಟನೆ ಖಂಡಿಸಿ ಅಧಿಕಾರಿಗಳು ಬರಬೇಕು ಎಂದು ಪಟ್ಟುಡಿದರು.
33 ಇಲಾಖೆಯ ಅಧಿಕಾರಿಗಳು ಜಯಂತಿಗೆ ಬರಬೇಕು. ಆದರೆ ತಾಲೂಕ ಮಟ್ಟದ ಅಧಿಕಾರಿಗಳು ಒಬ್ಬರು ಇಲ್ಲವೆಂದು ಸಮಾಜದವರು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮ ಹತ್ತು ಗಂಟೆಗೆ ಇತ್ತು, ಆದರೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ಇರುವುದು ನೋಡಿದರೆ ಶಿವಶರಣ ಅಂಬಿಗರ ಚೌಡಯ್ಯನಿಗೆ ಮಾಡಿದ ಅವಮಾನ ಎಂದು ಆರೋಪಿಸಿದರು.
ಶಾಸಕ ರಾಜಾ ವೆಂಕಟಪ್ಪನಾಯಕ ಅವರು ಸಹ ಗೈರಾಗಿದ್ದು, ಸಮಾಜದವರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಶಾಸಕ ರಾಜಾ ವೆಂಕಟಪ್ಪನಾಯಕ ಅವರು ಬೇರೆ ಕಾರ್ಯಕ್ರಮಕ್ಕೆ ಬೇಗ ಬರುತ್ತಾರೆ.ಆದರೆ ನಮ್ಮ ಸಮಾಜದವರ ಕಾರ್ಯಕ್ರಮಕ್ಕೆ ಬಂದಿಲ್ಲದಿರುವುದು ನೋವಿನ ಸಂಗತಿ ಎಂದು ಕಬ್ಬಲಿಗ ಸಮಾಜದವರು ಆಕ್ರೋಶ ವ್ಯಕ್ತಪಡಿಸಿದರು.
https://play.google.com/store/apps/details?id=com.speed.newskannada