ದೊಡ್ಡ ದೊಡ್ಡ ಮಾರುಕಟ್ಟೆಗಳು ಸ್ಥಳಾಂತರ
ಇನ್ನು ನಿನ್ನೆ ತಜ್ಞರ ಹಾಗೂ ಅಧಿಕಾರಿಗಳ ಸಿಎಂ ಸಭೆ ಬಳಿಕ ಮಾರುಕಟ್ಟೆಗಳನ್ನು ವಿಶಾಲವಾದ ಜಾಗಗಳಿಗೆ ಸ್ಥಳಾಂತರಿಸಲು ಅಧಿಕೃತ ಸೂಚನೆ ನೀಡಲಾಗಿದೆ. ಈ ಬಗ್ಗೆ ಆದೇಶ ಹೊರಡಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ನಗರದ ಎಲ್ಲಾ ಮಾರುಕಟ್ಟೆಗಳನ್ನು ತೆರೆದ ಜಾಗಗಳಿಗೆ ಶಿಫ್ಟ್ ಮಾಡಲು ಸೂಚನೆ ನೀಡಿದ್ದಾರೆ. ಅಗಲವಾದ ರಸ್ತೆ, ತೆರೆದ ಮೈದಾನ ಮುಂತಾದ ಕಡೆಗೆ ಸ್ಥಳಾಂತರಿಸಲು ಆದೇಶಿದಲಾಗಿದೆ.
ಕೋವಿಡ್ಗಾಗಿ ಪ್ರತ್ಯೇಕ ಚಿತಾಗಾರಗಳು ನಿಗದಿ
ಮೂರನೇ ಅಲೆ ಆರಂಭದಲ್ಲೇ ಪಾಲಿಕೆಯಿಂದ ವಿದ್ಯುತ್ ಚಿತಾಗಾರ ಕೂಗ ನಿಗದಿಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನಾದಿಂದ ಮರಣ ಹೊಂದುವವರಿಗೆ ಒಟ್ಟು 8 ಚಿತಾಗಾರಗಳನ್ನು ಪಾಲಿಕೆ ನಿಗದಿ ಮಾಡಿದೆ. ಪಾಲಿಕೆಯ 12 ರುದ್ರಭೂಮಿಗಳ ಪೈಕಿ 7 ಚಿತಾಗಾರ ಕೊರೋನಾಗೆ ಮೀಸಲಿಸಲಾಗಿದೆ. ಎಮ್ಎಸ್ ಪಾಳ್ಯ ಚಿತಾಗಾರ, ಕೂಡ್ಲು ಕೇಂದ್ರ ಚಿತಾಗಾರ, ಪಣತ್ತೂರು ಚಿತಾಗಾರ, ಕೆಂಗೇರಿ ಹಿಂದೂ ರುಧ್ರಭೂಮಿ, ಸುಮ್ಮನಹಳ್ಳಿ ಚಿತಾಗಾರ, ಪೀಣ್ಯ ಚಿತಾಗಾರ ಹಾಗೂ ಬನಶಂಕರಿ ಚಿತಾಗಾರ ಕೋವಿಡ್ ಗೆ ಮೀಸಲಿರಲಿವೆ.
ಮೆಟ್ರೋದಲ್ಲೂ ನಿಂತು ಪ್ರಯಾಣಿಸುವಂತಿಲ್ಲ..
ಬಿಎಂಟಿಸಿ ಮಾದರಿಯನ್ನೇ ನಮ್ಮ ಮೆಟ್ರೋ ಕೂಡ ಅನುಸರಿಸಿದೆ. ಮೆಟ್ರೋ ರೈಲಿನಲ್ಲಿ ಎಷ್ಟು ಆಸನ ವ್ಯವಸ್ಥೆ ಇದೆಯೋ ಅಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ. ಅಂದರೆ ಮೆಟ್ರೋದಲ್ಲೂ ಯಾರೂ ನಿಂತು ಪ್ರಯಾಣಿಸುವಂತಿಲ್ಲ ನಮ್ಮ ಮೆಟ್ರೋ ಅಧಿಕೃತ ಆದೇಶ ಹೊರಡಿಸಿದೆ. ಜನರು ನಿಂತುಕೊಂಡು ಪ್ರಯಾಣ ಮಾಡಲು ಅವಕಾಶವಿಲ್ಲ. ವೀಕೆಂಡ್ ಕರ್ಫ್ಯೂ ವೇಳೆ ರೈಲು ಸೇವೆ ಅವಧಿ ವಿಸ್ತರಣೆ ಮಾಡಲಾಗಿದೆ. ಈ ಹಿಂದೆ ವೀಕೆಂಡ್ ಕರ್ಫ್ಯೂ ವೇಳೆ 20 ನಿಮಿಷಕ್ಕೊಂದು ಮೆಟ್ರೋ ಸೇವೆ ಇರುತ್ತಿತ್ತು. ಇದೀಗ ವೀಕೆಂಡ್ ಕರ್ಫ್ಯೂ ವೇಳೆ ಪ್ರತಿ 30 ನಿಮಿಷಕ್ಕೊಂದು ಸೇವೆ ಒದಗಿಸಲು ನಿರ್ಧಾರಿಸಲಾಗಿದೆ ಎಂದು ನಮ್ಮ ಮೆಟ್ರೋ ಅಧಿಕೃತ ಆದೇಶದಲ್ಲಿ ತಿಳಿಸಿದೆ.
ಕೊರೊನಾ ಕೈಪಿಡಿ ತರಲಿರುವ ಬಿಬಿಎಂಪಿ
ಕೊರೊನಾ ಮೂರನೇ ಅಲೆಯಲ್ಲಿ ಸೋಂಕು ಹೆಚ್ಚಳ ಆಗುತ್ತಿರುವ ಹಿನ್ನೆಲೆ, ಜನರಲ್ಲಿ ಅರಿವು ಮೂಡಿಸಲು ಬಿಬಿಎಂಪಿ ಇಂದು ವಿಭಿನ್ನ ಪ್ರಯೋಗಕ್ಕೆ ಮುಂದಾಗಿದೆ. ಸೋಂಕಿನ ರೀತಿ ರಿವಾಜುಗಳ ಬಗ್ಗೆ ಕೈಪಿಡಿ ತಯಾರಿಸಲಿದೆ. ಜನರಿಗೆ ಅರಿವು ಮೂಡಿಸುವ ಸಲುವಾಗಿ ಕೈಪಿಡಿಯನ್ನು ತರಲು ಪಾಲಿಕೆ ಮುಂದಾಗಿದೆ. ಗುಣ ಲಕ್ಷಣಗಳು, ಟೆಸ್ಟಿಂಗ್, ಹೋಮ್ ಐಸೋಲೇಷನ್ ಇತ್ಯಾದಿ ವಿಚಾರಗಳನ್ನು ಒಳಗೊಂಡಿರುವ ಹ್ಯಾಂಡ್ ಬುಕ್ ರೆಡಿಯಾಗುತ್ತಿದೆ. ಒಟ್ಟು 14 ಪುಟಗಳನ್ನು ಹೊಂದಿರುವ ಕೈಪಿಡಿಯಲ್ಲಿ ಕೊರೊನಾ ಬಗ್ಗೆ ಸಂಪೂರ್ಣ ಮಾಹಿತಿ ಇರಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವ ಜನರಿಗೆ ಕೈಪಿಡಿ ಬಿಬಿಎಂಪಿ ಹಂಚಲಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada