ಬಹುದಿನಗಳ ಪ್ರಶ್ನೆಗೆ ಮೇಘನಾ ಕೊಟ್ಟೆ ಬಿಟ್ರು ಉತ್ತರ.!

ಪತಿ ಚಿರು ಅಗಲಿಕೆಯ ನೋವಿನಿಂದ ಚೇತರಿಸಿಕೊಂಡ ನಟಿ ಮೇಘನಾ ರಾಜ್ ಅವರು ನಿನ್ನೆ ಕುತೂಹಲಕಾರಿ ಪೋಸ್ಟ್‌ ಒಂದನ್ನು ಶೇರ್‌ ಮಾಡಿದ್ದರು. ಎಲ್ಲರೂ ಬಹಳ ದಿನಗಳಿಂದ ಕೇಳುವ ಆ ಪ್ರಶ್ನೆಗೆ ಉತ್ತರ ಕೊಡುವುದಾಗಿ ಹೇಳಿದ್ದರು.

ಇದೀಗ ಮೇಘನಾ ರಾಜ್‌ ತಮ್ಮ ಜೀವನದ ದೊಡ್ಡ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಮೇಘನಾ ರಾಜ್ ಏನು ಹೇಳ್ತಾರೆ ಎಂದು ಎಲ್ಲರೂ ಕಾಯುತ್ತಿದ್ದರು., ಇಂದು ಬೆಳಗ್ಗೆ 10.35 ಕ್ಕೆ ಮೇಘನಾ ಇದಕ್ಕೆ ಉತ್ತರ ನೀಡಿದ್ದಾರೆ.

ಮತ್ತೆ ಯಾವಾಗಾ ಸಿನಿಮಾ ಮಾಡ್ತೀರಿ? ಎಂಬುದೇ ಮೇಘನಾ ಜೀವನದ ಅತೀ ದೊಡ್ಡ ಪ್ರಶ್ನೆಯಾಗಿತ್ತು. ಇದೀಗ ಮತ್ತೆ ಮೇಘನಾ ಬೆಳ್ಳಿತೆರೆ ಮೇಲೆ ಮಿಂಚಲಿದ್ದಾರೆ. ಮಗನ ಲಾಲನೆ ಪಾಲನೆ ಜೊತೆಗೆ ಸಿನಿಮಾಗಳಲ್ಲಿ ನಟಿಸಲು ನಿರ್ಧರಿಸಿದ್ದಾರೆ. ಮೇಘನಾ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಮೇಘನಾ ರಾಜ್‌ ಸರ್ಜಾ ಅವರು ‘ತತ್ಸಮ ತದ್ಭವ’ ಎಂಬ ಸಿನಿಮಾ ಮೂಲಕ ಮತ್ತೆ ಬಿಗ್‌ಸ್ಕ್ರೀನ್‌ ಮೇಲೆ ಬರಲಿದ್ದಾರೆ. ಇದು ಅವರ ಅಭಿಮಾನಿಗಳ ಸಂತಸ ತಂದಿದೆ.

ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ‘ಆಟಗಾರ’ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಬಹಳ ವರ್ಷಗಳ ಕಾಲ ಪ್ರೀತಿಸಿ, ಕುಟುಂಬದವರನ್ನು ಒಪ್ಪಿಗೆ ಮದುವೆ ಆಗಿದ್ದರು ಈ ಜೋಡಿ. ಆದರೆ ದುರ್ವಿಧಿ ಎಂಬಂತೆ 2020 ರ ಜೂನ್ 7ರಂದು ಚಿರು ಹೃದಯಾಘಾತದಿಂದ ಅಗಲಿದರು. ಆಗ ಮೇಘನಾ ಗರ್ಭಿಣಿಯಾಗಿದ್ದರು. ಕೆಲವೇ ತಿಂಗಳಲ್ಲಿ ಮೇಘನಾ ಬಾಳಲ್ಲಿ ಪುತ್ರ ರಾಯನ್ ಸರ್ಜಾ ಬೆಳಕಾಗಿ ಬಂದರು. ಮಗನನ್ನು ನೋಡುತ್ತಾ ನೋವನ್ನು ಮರೆಯುತ್ತಿರುವ ಮೇಘನಾ ಈಗ ಮತ್ತೆ ಸಿನಿಮಾ ಮಾಡಲು ಸಜ್ಜಾಗಿರುವುದು ಸಂತಸದ ವಿಚಾರವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ಬಾರಿಯ ಚುನಾವಣೆಗೆ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರೆ.

Sun Feb 19 , 2023
ಬೆಂಗಳೂರು, ಫೆಬ್ರವರಿ 19; ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ, ಮಾಜಿ ಸಚಿವ ಜನಾರ್ದನ ರೆಡ್ಡಿಈ ಬಾರಿಯ ಚುನಾವಣೆಗೆ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರೆ. ಹಲವು ಮುಖಂಡರು ಸಹ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಭಾನುವಾರ ಟ್ವೀಟ್ ಮಾಡಿರುವ ಜನಾರ್ದನ ರೆಡ್ಡಿ ಪಕ್ಷದ ಟಿಕೆಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಗಂಗಾವತಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಸಹ ಅವರು […]

Advertisement

Wordpress Social Share Plugin powered by Ultimatelysocial