ಸಂಕ್ರಾಂತಿ ಬಳಿಕ ಕೇಂದ್ರ ಸಂಪುಟ ವಿಸ್ತರಣೆ? ಸಂಪುಟದಲ್ಲಿ ಬದಲಾವಣೆ ತರಲು ಪ್ರಧಾನಿ ಚಿಂತನೆ..!!

ಕೇಂದ್ರ ಸಚಿವ ಸಂಪುಟದಲ್ಲಿ ಬದಲಾವಣೆ ತರಲು ಪ್ರಧಾನಿ ನರೇಂದ್ರ ಮೋದಿಯವರು ಚಿಂತನೆ ನಡೆಸುತ್ತಿದ್ದು, ಜ.14ರ ಬಳಿಕ ಬದಲಾವಣೆ ಸಾಧ್ಯತೆ ಇದೆ.ಬಿಜೆಪಿ ಸಂಘಟನೆಯನ್ನು ಬಲಪಡಿಸುವುದು ಮತ್ತು ಮುಂದಿನ ವರ್ಷ ನಡೆಯಲಿರುವ ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿರಿಸಿ ಸಂಪುಟದಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.ಬಜೆಟ್‌ ಅಧಿವೇಶನ ಆರಂಭಕ್ಕೂ ಮುನ್ನ, ಅಂದರೆ ಸಂಕ್ರಾಂತಿ ಬಳಿಕ ಈ ವಿಸ್ತರಣೆ ನಡೆ ಯಬಹುದು ಎಂದು ಮೂಲಗಳು ಹೇಳಿವೆ.ಈ ಸರಕಾರದಲ್ಲಿ ಕೇವಲ ಒಮ್ಮೆ ಮಾತ್ರ ಸಂಪುಟ ವಿಸ್ತರಣೆಯಾಗಿದೆ. ಕಳೆದ ಜೂ.8ರಂದು 12 ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಲಾಗಿತ್ತು. ಈ ಬಾರಿ ಕೆಲವರನ್ನು ಕೈಬಿಟ್ಟು, ಕೆಲವರನ್ನು ಸೇರಿಸಿಕೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆನೆ ಸಾಕೋದು ಅಷ್ಟು ಸುಲಭವಲ್ಲ, ಗಜರಾಜನ ಗಾತ್ರದಷ್ಟೇ ದುಡ್ಡು ನಿಮ್ಮ ಹತ್ರಾನೂ ಇರಬೇಕು,.!!

Sat Dec 31 , 2022
ಪ್ರಾಣಿಗಳೇ  ಗುಣದಲ್ಲಿ ಮೇಲು, ಮಾನವ ಅದಕ್ಕಿಂತ ಕೀಳು ಅಂತ ಡಾ. ರಾಜ್​ಕುಮಾರ್ ಸಂಪತ್ತಿಗೆ ಸವಾಲ್​ನಲ್ಲಿ ಹಾಡಿದ್ದಾರೆ. ಇದು ನಿಜಕ್ಕೂ ಸತ್ಯ ರೀ. ಮನುಷ್ಯನ  ಕಂಡರೇ ಮತ್ತೊಬ್ಬ ಮನುಷ್ಯನಿಗೆ ದ್ವೇಷ ಇರುವ ಈ ಕಾಲದಲ್ಲಿ ಪ್ರಾಣಿಗಳು ನಿಜಕ್ಕೂ ಮೇಲು ಅಂದರೆ ತಪ್ಪಾಗಲ್ಲ.ಈಗೆಲ್ಲಾ ಎಲ್ಲರೂ ಮನೆಯಲ್ಲಿ ನಾಯಿ , ಬೆಕ್ಕು  ಸಾಕಲು ಇಷ್ಟ ಪಡುತ್ತಾರೆ. ಇನ್ನೂ ಕೆಲವರು ಇದನ್ನು ಬ್ಯುಸಿನೆಸ್ ರೂಪದಲ್ಲಿ ನೋಡುತ್ತಾರೆ. ಹೌದು, ಪ್ರಾಣಿ, ಪಕ್ಷಿಗಳನ್ನು ಮಾರಾಟ ಮಾಡುವ ಬ್ಯುಸಿನೆಸ್​​ಗೆ ಸಿಕ್ಕಾಪಟ್ಟೆ […]

Advertisement

Wordpress Social Share Plugin powered by Ultimatelysocial