ಮೋಲಿಯೆರ್ 17ನೆಯ ಶತಮಾನದ ಫ್ರೆಂಚ್ ರಂಗಭೂಮಿಯ ಪ್ರತಿಭಾವಂತ ನಾಟಕಕಾರ.

 

ಮೋಲಿಯೆರ್ 17ನೆಯ ಶತಮಾನದ ಫ್ರೆಂಚ್ ರಂಗಭೂಮಿಯ ಪ್ರತಿಭಾವಂತ ನಾಟಕಕಾರ. ನಟ ಹಾಗೂ ನಿರ್ದೇಶಕ. ಇವನ ನಿಜವಾದ ಹೆಸರು ಜಾನ್ ಬ್ಯಾಸ್ಟಿಸ್ಟ್ ಪೋಕ್ಲಾನ್. ಮೋಲಿಯೆರ್ ಇವನ ಕಾವ್ಯನಾಮ.ಮೋನ್ ಚೆಸುಯಿಟ್ ಕಾಲೇಜಿನಲ್ಲಿ ಐದು ವರ್ಷ ಓದಿ ಮಾನವಿಕ ವಿಷಯಗಳಲ್ಲಿ ಪದವಿ ಪಡೆದ. ಪ್ರಖ್ಯಾತ ಪ್ರಾಧ್ಯಾಪಕ ಗ್ಯಾಸೆಮಡಿ ಬಳಿ ತತ್ತ್ವಶಾಸ್ತ್ರಧ್ಯಯನ ಮಾಡಿದ. ಎಪಿಕ್ಯೂರಸ್ನ ತತ್ತ್ವಗಳು, ಟೆರೆನ್ಸ್, ಪ್ಲಾಟಿಸ್, ಸೆನಕ ಅವರುಗಳ ನಾಟಕಗಳು, ಕಾಲೇಜು ನಾಟಕಗಳಲ್ಲಿ ಅಭಿನಯಿಸುವ ಅವಕಾಶಗಳು, ಕೆಪ್ಲರ್, ಗೆಲಿಲಿಯೊ ಇವರ ವೈಜ್ಞಾನಿಕ ಸಿದ್ಧಾಂತಗಳು ಈತನ ಮನೋಧರ್ಮವನ್ನು ಖಚಿತವಾಗಿ ರೂಪಿಸಿದವು. ಒಳ್ಳೆಯ ಕಲಾಭಿರುಚಿ, ವಿಚಾರವಂತಿಕೆ, ಅಂಧ ಸಂಪ್ರದಾಯ ಶರಣತೆಯನ್ನು ಪರಿಹಾಸಮಾಡುವ ಧೈರ್ಯ, ಪೊಳ್ಳು ಶಿಷ್ಟಾಚಾರದ ಬಗ್ಗೆ ಅಸಹನೆ ಇವನ ಮನೋಧರ್ಮದಲ್ಲಿ ಸೇರಿಕೊಂಡವು. 1641ರಲ್ಲಿ ಕಾನೂನು ಪದವಿಯನ್ನೂ ಪಡೆದ. ಆದರೆ ತಂದೆ ಆಶಿಸಿದಂತೆ ವಕೀಲನಾಗಲಿಲ್ಲ. ಕುಲಕಸುಬಿಗೂ ಬರಲಿಲ್ಲ. 1643ರಲ್ಲಿ ಭೆಟ್ಟಿಯಾದ ಮಾದಲೆನ ಬೆಜಾರ್ ಎಂಬ ತನಗಿಂತ ನಾಲ್ಕು ವರ್ಷಕ್ಕೆ ದೊಡ್ಡವಳಾದ ನಟಿಯ ಆಕರ್ಷಣೆಗೂ ಪ್ರಭಾವಕ್ಕೂ ಸಿಕ್ಕು ಬಣ್ಣದ ಬದುಕನ್ನು ಆರಿಸಿಕೊಂಡ. ಆಕೆ ನಡೆಸುತ್ತಿದ್ದ ಇಲ್ಲುಸ್ತ್ರೆತಿಯೇತರ್ ಎಂಬ ನಾಟಕ ಕಂಪನಿಗೆ ಪಾಲುದಾರನಾಗಿ ಸೇರಿಕೊಂಡು ಮುಖ್ಯ ನಟನಾದ. ಹಣಕಾಸಿನ ವ್ಯವಹಾರ, ಆಡಳಿತಗಳ ಹೊಣೆಯನ್ನೂ ಹೊತ್ತು ಕಂಪನಿಯ ಸಾಲದ ದೆಸೆಯಿಂದ ಎರಡು ಬಾರಿ ಸೆರೆಮನೆಗೂ ಹೋಗಿ ಬಂದ. ಆ ಕಾಲದಲ್ಲಿ ನಾಟಕದವರು ನೀತಿಗೆಟ್ಟವರೆಂಬ ತುಚ್ಛ ಭಾವನೆಯಿದ್ದದರಿಂದ ತನ್ನಿಂದ ತನ್ನ ಮನೆತನದವರಿಗೆ ಕೆಟ್ಟ ಹೆಸರು ಬರದಿರಲೆಂದು ಮೋಲಿಯೆರ್ ಎಂಬ ಗುಪ್ತ ನಾಮವಿರಿಸಿಕೊಂಡ. ಅನಂತರ ಇದೇ ಹೆಸರಿನಲ್ಲಿ ನಟನಾಗಿ, ನಾಟಕಕಾರನಾಗಿ ಪ್ರಸಿದ್ಧನಾದ ಮೋಲಿಯೆರ್ನ ಪ್ರತಿಭೆಯನ್ನು ಮೊದಲು ಗುರುತಿಸಿದ ದ್ಯೂಕ್ಡಿ ಇ ಪೆರ್ನಾ ಮತ್ತು ಹಳೆಯ ಕಾಲೇಜು ಸಹಪಾಠಿ ಪ್ರಿನ್ಸ್ಡಿ ಕೋಂಟಿ ಇವನಿಗೆ ಪೋಷಕರಾಗಿ ಪ್ರೋತ್ಸಾಹಕೊಟ್ಟರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜನರಿಗೆ ಅಸುರ ಯಾರು, ದೇವತೆ ಯಾರು ಎಂಬುದು ಗೊತ್ತಿದೆ.

Sun Feb 19 , 2023
ಜನರಿಗೆ ಅಸುರ ಯಾರು, ದೇವತೆ ಯಾರು ಎಂಬುದು ಗೊತ್ತಿದೆ. ಕಾಂಗ್ರೆಸ್​​ ಪಕ್ಷದಲ್ಲಿ ಇರುವ ಅಸುರರ ಪಟ್ಟಿ ಬಹಳ ದೊಡ್ಡದಿದೆ. ಕಾಂಗ್ರೆಸ್​​ ಜನರನ್ನು ನರಕದಲ್ಲಿ ಇಟ್ಟಿದ್ದಕ್ಕೆ ಮನೆಗೆ ಕಳಿಸಿದ್ದಾರೆ. 70 ವರ್ಷ ಆಡಳಿತ ಮಾಡಿದ ಪಕ್ಷವನ್ನು ಜನರು ಕಿತ್ತೊಗೆದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹುಬ್ಬಳ್ಳಿ: ಜನರಿಗೆ ಅಸುರ ಯಾರು, ದೇವತೆ ಯಾರು ಎಂಬುದು ಗೊತ್ತಿದೆ. ಕಾಂಗ್ರೆಸ್​​ ಪಕ್ಷದಲ್ಲಿ ಇರುವ ಅಸುರರ ಪಟ್ಟಿ ಬಹಳ ದೊಡ್ಡದಿದೆ. ಕಾಂಗ್ರೆಸ್​​ ಜನರನ್ನು ನರಕದಲ್ಲಿ […]

Advertisement

Wordpress Social Share Plugin powered by Ultimatelysocial