ಆಂಧ್ರದ ಶಾಲೆಯಲ್ಲಿ ‘ವಿಷಾಹಾರ ಸೇವಿಸಿ ನೂರಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ’

ಆಂಧ್ರಪ್ರದೇಶ : ಪಲ್ನಾಡು ಜಿಲ್ಲೆಯ ಸಟ್ಟೇನಪಲ್ಲಿ ತಾಲೂಕಿನ ರಾಮಕೃಷ್ಣಾಪುರಂ ಗುರುಕಲ ಶಾಲೆಯಲ್ಲಿ ವಿಷಾಹಾರ ಸೇವಿಸಿ ನೂರಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಘಟನೆ ಬೆಳಕಿಗೆ ಬಂದಿದೆ.

ಶಾಲೆಯಲ್ಲಿ ಟೋಮೆಟೊ ರೈಸ್‌, ಕಡಲೆಚಟ್ನಿ ಮಧ್ಯಾಹ್ನ ಚಿಕನ್ ಊಟ ಸೇವನೆ ಮಾಡಿದ್ದರು ಬಳಿಕ ತೀವ್ರ ಹೊಟ್ಟೆ ನೋವು, ತಲೆಸುತ್ತು, ಭೇದಿ ಕಾಣಿಸಿಕೊಂಡಿದ್ದು, ಕೂಡಲೇ ಚಿಕಿತ್ಸೆಗಾಗಿ ಸಟ್ಟೇನಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗಿತ್ತು.

ಫುಡ್‌ ಪಾಯಿಸನ್‌ನಿಂದ ಮಕ್ಕಳು ಬಳಲುತ್ತಿದ್ದಾರೆ, ಪ್ರಾಣಕ್ಕೆ ಯಾವುದೇ ತೊಂದ್ರೆ ಇಲ್ಲ ಎಂದು ಸಟ್ಟೇನಪಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಇಂತಹದ್ದೇ ಘಟನೆ ಶ್ರೀಕಾಕುಲಂ ಜಿಲ್ಲೆಯ ಎಟ್ಚೇರ್ಲಾ ಎಂಬಲ್ಲಿನ ಮುನ್ನೂರಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದರು. ಇನ್ಮುಂದೆಯಾದರೂ ಮಕ್ಕಳಿಗೆ ನೀಡುವ ಆಹಾರ ಬಗ್ಗೆ ಸುರಕ್ಷತೆ ವಹಿಸುವಂತೆ ಸ್ಥಳೀಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಸ್ತಾರಾ ವಿಮಾನದಲ್ಲಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಇಟಾಲಿಯನ್ ಮಹಿಳೆ ಬಂಧನ.

Tue Jan 31 , 2023
ನವದೆಹಲಿ: ಅಬುಧಾಬಿಯಿಂದ ಮುಂಬೈಗೆ ತೆರಳುತ್ತಿದ್ದ ಯುಕೆ 256, ಏರ್ ವಿಸ್ತಾರಾ ವಿಮಾನದಲ್ಲಿ ಇಟಾಲಿಯನ್ ಮಹಿಳಾ ಪ್ರಯಾಣಿಕರೊಬ್ಬರನ್ನು ಮುಂಬೈನ ಸಹರ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಎಕಾನಮಿ ಟಿಕೆಟ್ ಹೊಂದಿದ್ದರೂ ಬಿಸಿನೆಸ್ ಕ್ಲಾಸ್ನಲ್ಲಿ ಕುಳಿತುಕೊಳ್ಳುವಂತೆ ವಿಮಾನದ ಸಿಬ್ಬಂದಿಯನ್ನು ಒತ್ತಾಯಿಸಿದರು ಎನ್ನಲಾಗಿದೆ. ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದರು, ಕೆಲವು ಬಟ್ಟೆಗಳನ್ನು ಬಿಚ್ಚಿದರು ಮತ್ತು ಭಾಗಶಃ ನಗ್ನ ಸ್ಥಿತಿಯಲ್ಲಿ ವಿಮಾನದಲ್ಲಿ ಮೇಲಕ್ಕೆ ಮತ್ತು ಕೆಳಗೆ ಎಗರಡಿದರು ಎಂದು ವಿಮಾನದ ಸಿಬ್ಬಂದಿ ಆರೋಪಿಸಿದ ನಂತರ ಇಟಲಿಯ ಮಹಿಳಾ […]

Advertisement

Wordpress Social Share Plugin powered by Ultimatelysocial