ಆಂಧ್ರಪ್ರದೇಶ : ಪಲ್ನಾಡು ಜಿಲ್ಲೆಯ ಸಟ್ಟೇನಪಲ್ಲಿ ತಾಲೂಕಿನ ರಾಮಕೃಷ್ಣಾಪುರಂ ಗುರುಕಲ ಶಾಲೆಯಲ್ಲಿ ವಿಷಾಹಾರ ಸೇವಿಸಿ ನೂರಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಘಟನೆ ಬೆಳಕಿಗೆ ಬಂದಿದೆ.
ಶಾಲೆಯಲ್ಲಿ ಟೋಮೆಟೊ ರೈಸ್, ಕಡಲೆಚಟ್ನಿ ಮಧ್ಯಾಹ್ನ ಚಿಕನ್ ಊಟ ಸೇವನೆ ಮಾಡಿದ್ದರು ಬಳಿಕ ತೀವ್ರ ಹೊಟ್ಟೆ ನೋವು, ತಲೆಸುತ್ತು, ಭೇದಿ ಕಾಣಿಸಿಕೊಂಡಿದ್ದು, ಕೂಡಲೇ ಚಿಕಿತ್ಸೆಗಾಗಿ ಸಟ್ಟೇನಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗಿತ್ತು.
ಫುಡ್ ಪಾಯಿಸನ್ನಿಂದ ಮಕ್ಕಳು ಬಳಲುತ್ತಿದ್ದಾರೆ, ಪ್ರಾಣಕ್ಕೆ ಯಾವುದೇ ತೊಂದ್ರೆ ಇಲ್ಲ ಎಂದು ಸಟ್ಟೇನಪಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಇಂತಹದ್ದೇ ಘಟನೆ ಶ್ರೀಕಾಕುಲಂ ಜಿಲ್ಲೆಯ ಎಟ್ಚೇರ್ಲಾ ಎಂಬಲ್ಲಿನ ಮುನ್ನೂರಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದರು. ಇನ್ಮುಂದೆಯಾದರೂ ಮಕ್ಕಳಿಗೆ ನೀಡುವ ಆಹಾರ ಬಗ್ಗೆ ಸುರಕ್ಷತೆ ವಹಿಸುವಂತೆ ಸ್ಥಳೀಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
https://play.google.com/store/apps/details?id=com.speed.newskannada