ರಾಜಕೀಯ ಗುರುವಿನ ವಿರುದ್ಧ ಕೋಲಾರದಲ್ಲಿ ಮುನಿರತ್ನ ಸ್ಪರ್ಧೆ.

 

 

ರಾಜಕೀಯ ಎದುರಾಳಿಯಾಗಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಲು ರಾಜ್ಯ ಬಿಜೆಪಿ ಮಾಸ್ಟರ್ ಪ್ಲಾನ್ ನಡೆಸಿದೆ.ಹೌದು, ಕೋಲಾರ ಉಸ್ತುವಾರಿ ಸಚಿವರಾಗಿರೋ ಮುನಿರತ್ನ ಅವರನ್ನ ಕೋಲಾರದಿಂದ ಕಣಕ್ಕಿಳಿಸಲು ಹೈಕಮಾಂಡ್ ಡೈರೆಕ್ಟ್ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್​ ಕೋಲಾರಕ್ಕೆ ಖುದ್ದು ಭೇಟಿ ನೀಡಿದ್ದು, ಸಂತೋಷ್​ ನೇತೃತ್ವದಲ್ಲೇ ಕೋಲಾರ ವಿಧಾನಸಭಾ ಚುನಾವಣೆಗೆ ಸ್ಟ್ರಾಟಜಿ ರೆಡಿಯಾಗಿದೆ. ಕೋಲಾರ ಉಸ್ತುವಾರಿ ಸಚಿವರಾಗಿರೋ ಮುನಿರತ್ನ ಅವರನ್ನ ಕಣಕ್ಕಿಳಿಸಲು ವೇದಿಕೆ ಸಜ್ಜಾಗಿದೆ ಎಂದು ಬಿಜೆಪಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.ಸಿದ್ದರಾಮಯ್ಯ ಅವರನ್ನ ಸೋಲಿಸಲು ಜಾತಿ ವ್ಯೂಹವನ್ನ ಬಿ ಎಲ್ ಸಂತೋಷ್ ಅವರು ರಚನೆ ಮಾಡಿದ್ದಾರೆ. ಕೋಲಾರಕ್ಕೆ ಸೂಕ್ತ ಅಭ್ಯರ್ಥಿಯಾಗಿ ಮುನಿರತ್ನ ಹೊರಹೊಮ್ಮಿದ್ದಾರೆ. ಮುನಿರತ್ನ ಪರ ಕುರುಬ ಮತ ಒಗ್ಗೂಡಿಸಲು ಈಶ್ವರಪ್ಪ, ಬೈರತಿ, ವರ್ತೂರು ಪ್ರಕಾಶ್ , ಎಸ್ ಸಿ ಮತ ಸೆಳೆಯಲು ಮುನಿಸ್ವಾಮಿ, ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಇರಲಿದ್ದಾರೆ ಎಂದು ಹೇಳಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಪಿ ನೂತನ‌ ರಾಜ್ಯಪಾಲರ ಪ್ರಮಾಣವಚನ ಸ್ವೀಕಾರಕ್ಕೆ ದಿನಾಂಕ ಫಿಕ್ಸ್!

Wed Feb 22 , 2023
ಇತ್ತೀಚೆಗಷ್ಟೇ ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಆಂಧ್ರ ರಾಜಭವನ ನೂತನ ರಾಜ್ಯಪಾಲರ ಪ್ರಮಾಣ ವಚನ ಸ್ವೀಕಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ದಿನಾಂಕ ಕೂಡ ಫಿಕ್ಸ್‌ ಮಾಡಿದೆ. ಇದೇ ತಿಂಗಳ 24ರಂದು ನ್ಯಾಯಮೂರ್ತಿ ಅಬ್ದುಲ್ ನಜೀರ್ ಅಧಿಕಾರ ಸ್ವೀಕರಿಸಲಿದ್ದಾರೆ. ಇಲ್ಲಿಯವರೆಗೆ ಎಪಿ ರಾಜ್ಯಪಾಲರಾಗಿದ್ದ ಬಿಸ್ವಭೂಷಣ ಹರಿಚಂದನ್ ಅವರನ್ನು ಛತ್ತೀಸ್ ಗಢದ ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದು, ಇದರೊಂದಿಗೆ […]

Advertisement

Wordpress Social Share Plugin powered by Ultimatelysocial