ಅಕ್ಷಯ ತೃತೀಯಕ್ಕೆ ಮುಸ್ಲಿಂ ಅಂಗಡಿಯಲ್ಲಿ ಬಂಗಾರ ಖರೀದಿಗೆ ನಿಷೇಧ;

ಬಾಗಲಕೋಟೆ: ಹಿಜಾಬ್, ಹಲಾಲ್, ಆಜಾನ್ ವಿವಾದ ಬಳಿಕ ಇದೀಗ ಹೊಸದೊಂದು ವಿವಾದ ಆರಂಭವಾಗಿದ್ದು, ಅಕ್ಷಯ ತೃತೀಯದಂದು ಮುಸ್ಲಿಂ ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ಖರೀದಿ ಮಾಡಬೇಡಿ ಎಂಬ ಹೊಸ ಅಭಿಯಾನವನ್ನು ಹಿಂದೂ ಪರ ಸಂಘಟನೆಗಳು ಆರಂಭಿಸಿವೆ.

ಅಕ್ಷಯ ತೃತೀಯಕ್ಕೆ ಹಿಂದೂಗಳ ಜ್ಯುವೆಲ್ಲರಿ ಅಂಗಡಿಯಲ್ಲಿ ಬಂಗಾರ ಖರೀದಿಸಿ ಎಂದು ಟ್ವಿಟರ್ ನಲ್ಲಿ ಅಭಿಯಾನ ಆರಂಭವಾಗಿದ್ದು, ಈ ಅಭಿಯಾನಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬೆಂಬಲ ನೀಡಿದ್ದಾರೆ.

ರಾಜ್ಯದಲ್ಲಿ ಕೇರಳ ಮೂಲದ ಮುಸ್ಲಿಂ ಮಾಲಿಕತ್ವದ ಜ್ಯುವೆಲ್ಲರಿ ಮಳಿಗೆಗಳಿದ್ದು ಅದರಲ್ಲಿ ಚಿನ್ನ ಖರೀದಿಸಬಾರದು ಎಂದು ಮುತಾಲಿಕ್ ಕರೆ ನೀಡಿದ್ದಾರೆ. ಕೇರಳದಲ್ಲಿ 800 ಹಿಂದೂಗಳ ಕೊಲೆಯಾಗಿದೆ. ಚಿನ್ನದ ಅಭರಣ ಖರೀದಿಸುವಾಗ ಈ ಅಂಶಗಳನ್ನು ಹಿಂದೂಗಳು ಗಮನದಲ್ಲಿ ಇರಿಸಿಕೊಳ್ಳಬೇಕು. ಮಾಲಿಕತ್ವ ಯಾರದ್ದೆಂದು ತಿಳಿಯದೇ ಚಿನ್ನ ಖರೀದಿಸಿದರೆ ಅದರ ಲಾಭ ಕೇರಳ ಮುಸ್ಲಿಂ ಸಂಘಟನೆಗಳಿಗೆ ಹೋಗುತ್ತದೆ. ಅಕ್ಷಯ ತೃತೀಯದಂದು ಹಿಂದೂ ಮಾಲೀಕತ್ವದ ಜ್ಯುವೆಲ್ಲರಿ ಅಂಗಡಿಗಳಲ್ಲಿ ಚಿನ್ನ ಖರೀದಿಸುವಂತೆ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಯುದ್ಧದಿಂದ ಓಡಿಹೋದ ಉಕ್ರೇನಿಯನ್ ಹುಡುಗ ಇಂಗ್ಲೆಂಡ್ನಲ್ಲಿ ನಡೆದ ಫುಟ್ಬಾಲ್ ಪಂದ್ಯಕ್ಕೆ ಅತಿಥಿಯಾಗಿದ್ದಾನೆ!

Sun Apr 24 , 2022
ಉಕ್ರೇನ್‌ನಲ್ಲಿ ಯುದ್ಧದಿಂದ ಪಲಾಯನ ಮಾಡಿದ 11 ವರ್ಷದ ಹುಡುಗನನ್ನು ಯುಕೆ ವೃತ್ತಿಪರ ಫುಟ್‌ಬಾಲ್ ಪಂದ್ಯವೊಂದರಲ್ಲಿ ಗೌರವ ಅತಿಥಿ ಎಂದು ಘೋಷಿಸಲಾಯಿತು. ಕಳೆದ ಸೋಮವಾರ ಫ್ಲೀಟ್‌ವುಡ್ ಟೌನ್‌ನೊಂದಿಗಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ಗಿಲ್ಲಿಂಗ್‌ಹ್ಯಾಮ್ ಫುಟ್‌ಬಾಲ್ ಕ್ಲಬ್‌ನಲ್ಲಿ ಡೇನಿಯಲ್ ಲೈಸಾಕ್ ಅವರನ್ನು ತಂಡ ಮತ್ತು ಬೆಂಬಲಿಗರು ಆಚರಿಸಿದರು ಎಂದು ಬಿಬಿಸಿ ವರದಿ ಮಾಡಿದೆ. ಮಗು ಮತ್ತು ಅವನ ತಾಯಿ ಯಾನಾ ರಷ್ಯಾದ ಆಕ್ರಮಣದಿಂದ ಪಶ್ಚಿಮ ಉಕ್ರೇನ್‌ನ ಎಲ್ವಿವ್ ಬಳಿಯ ತಮ್ಮ ಮನೆಯಿಂದ ಓಡಿಹೋಗಿದ್ದರು ಮತ್ತು […]

Advertisement

Wordpress Social Share Plugin powered by Ultimatelysocial