ಮೈಸೂರು ಹುಡುಗ ರಾಖಿ ಸಾವಂತ್ ಹೊಸ ಬಾಯ್ ಫ್ರೆಂಡ್ ಆಗಿದ್ದೇಗೆ?

 

ಬಾಲಿವುಡ್ ನಟಿ ರಾಖಿ ಸಾವಂತ್ ತಮ್ಮ ಸಿನಿಮಾ ಮತ್ತು ಅಭಿನಯಕ್ಕಿಂತ ಹೆಚ್ಚಾಗಿ ಕಾಂಟ್ರವರ್ಸಿಗಳಿಂದಲೆ ಸುದ್ದಿ ಆಗುತ್ತಾರೆ. ಈಕೆಯನ್ನು ಬಾಲಿವುಡ್ ವಿವಾದಗಳ ರಾಣಿ ಅಂತಲೇ ಕರೆಯಲಾಗುತ್ತದೆ. ಅಷ್ಟರ ಮಟ್ಟಿಗೆ ಈಕೆ ವಿವಾದಗಳಲ್ಲಿ ಸಿಲುಕಿ ಹಾಕಿಕೊಳ್ಳುತ್ತಾರೆ.

ಅದರಲ್ಲೂ ಮದುವೆ, ಲವ್, ಬಾಯ್ ಫ್ರೆಂಡ್ ವಿಚಾರದಲ್ಲಂತೂ ಆಗಾಗ್ಗೆ ಸುದ್ದಿ ಆಗುತ್ತಲೇ ಇರುತ್ತಾರೆ.

ಸದಾ ಮದುವೆ ವಿಚಾರಲ್ಲಿ ಸುದ್ದಿ ಆಗುತ್ತಾ ಇರುತ್ತಾರೆ. ಇತ್ತೀಚೆಗೆ ರಾಖಿ ಸಾವಂತ್ ತಮ್ಮ ಮಾಜಿ ಪತಿ ರಿತೇಶ್ ಸಿಂಗ್ ವಿಚಾರದಲ್ಲಿ ಸಿಕ್ಕಾಪಟ್ಟೆ ಸುದ್ದಿ ಆಗಿದ್ದರು. ಮದುವೆ ಆಗಿರುವ ವಿಚಾರವನ್ನು ಹಲವು ದಿನಗಳ ಕಾಲ ಗುಟ್ಟಾಗಿ ಇಟ್ಟಿದ್ದರು. ಬಿಗ್ ಬಾಸ್‌ನಿಂದ ಬಂದ ಬಳಿಕ ಮದುವೆ ಆಗಿಲ್ಲ ಎಂದಿದ್ದರು. ಈಗ ಮತ್ತೆ ರಾಖಿ ಸಾವಂತ್ ತಮ್ಮ ಲವ್ ವಿಚಾರದಲ್ಲಿ ಸುದ್ದಿ ಆಗುತ್ತಾ ಇದ್ದಾರೆ.

ಹೌದು ರಾಖಿ ಸಾವಂತ್‌ಗೆ ಈಗ ಹೊಸ ಬಾಯ್ ಫ್ರೆಂಡ್ ಸಿಕ್ಕಿದ್ದಾರೆ. ರಾಖಿ ಸಾವಂತ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದರೆ ನೀವೂ ನಂಬಲೇ ಬೇಕು. ಇತ್ತೀಚೆಗೆ ತಮ್ಮ ಬಾಯ್ ಫ್ರೆಂಡ್ ಕೊಡಿಸಿದ್ದ ದುಬಾರಿ ಬಿಎಂಡಬ್ಲ್ಯೂ ಕಾರಿನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗ ಆ ದುಬಾರಿ ಹುಡುಗ ಯಾರು ಎನ್ನುವುದನ್ನು ಪರಿಚಯಿಸಿದ್ದಾರೆ.

ರಾಖಿ ಸಾವಂತ್ ತಮ್ಮ ಹೊಸ ಸಂಗಾತಿ ಆದಿಲ್ ಖಾನ್ ದುರಾನಿ ಅವ್ರನ್ನು ಮಾಧ್ಯಮದ ಮುಂದೆ ಪರಿಚಯಿಸಿದ್ದಾರೆ. ಈತ ಮೈಸೂರಿನ ಹುಡುಗ ಎನ್ನುವುದನ್ನೂ ರಾಖಿ ಸಾವಂತ್ ಹೇಳಿಕೊಂಡಿದ್ದಾರೆ. ಆದಿಲ್ ಖಾನ್, ರಾಖಿ ಸಾವಂತ್ ಜೊತೆಗೆ ಕೊನೆಯ ತನಕ ಇರುವುದಾಗಿ ಹೇಳಿದ್ದಾರಂತೆ. ಹಾಗಾಗಿ ಈತನೆ ತನ್ನ ಬಾಳ ಸಂಗಾತಿ ಎನ್ನುತ್ತಿದ್ದಾಳೆ ರಾಖಿ ಸಾವಂತ್.

ಇತ್ತೀಚೆಗೆ ಪ್ರಶಸ್ತಿ ಸಮಾರಂಭ ಒಂದರಲ್ಲಿ ರಾಖಿ ಸಾವಂತ್ ಭಾಗಿ ಆಗಿದ್ದರು. ಆಗ ಮಾಧ್ಯದ ಕ್ಯಾಮೆರಾ ಮುಂದೆ ಆದಿಲ್ ಖಾನ್‌ಗೆ ವಿಡಿಯೋ ಕಾಲ್ ಮಾಡಿ ಎಲ್ಲರಿಗೂ ರಾಖಿ ಸಾವಂತ್ ತಮ್ಮ ಹೊಸ ಸಂಗಾತಿಯನ್ನು ಪರಿಚಯಿಸಿದ್ದಾರೆ. ಈ ಹಿಂದೆ ಬಿಎಂಡಬ್ಲ್ಯು ಕಾರು ಉಡುಗೊರೆಯಾಗಿ ನೀಡಿದ್ದಕ್ಕೆ, ಧನ್ಯವಾದ ತಿಳಿಸಿದ್ದರು ರಾಖಿ ಸಾವಂತ್.

ಇವರು ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ, ಪ್ರೀತಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಇವರ ಲವ್ ಸ್ಟೋರಿಯನ್ನು ಇವರೇ ರಿವೀಲ್ ಮಾಡಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನನ್ನ ಸ್ನೇಹಿತರಾಗಲೂ ಬಾಲಿವುಡ್‌ನಲ್ಲಿ ಯಾರಿಗೂ ಯೋಗ್ಯತೆ ಇಲ್ಲ:ಕಂಗನಾ ರನೌತ್

Wed May 18 , 2022
  ಬಾಲಿವುಡ್‌ನ ಕಾಂಟ್ರವರ್ಸಿ ಕ್ವೀನ್‌ ಎಂದೇ ಫೇಮಸ್ ಆಗಿರುವ ನಟಿ ಕಂಗನಾ ರನೌತ್ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಅದೇ ರೀತಿ ಈ ಬಾರಿಯೂ ಕೂಡ ನಟಿ ಕಂಗನಾ ಬಾಲಿವುಡ್‌ ಮಂದಿ ವಿರುದ್ಧ ಕೆಂಡಕಾರಿದ್ದಾರೆ. ನಟಿ ಕಂಗನಾ ರನೌತ್ ಬಹುನೀರಿಕ್ಷಿತ ಚಿತ್ರ ‘ಧಾಕಡ್’ ಸಿನಿಮಾದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ಪ್ರಚಾರದ ವೇಳೆಯೇ ಖಾಸಗಿ ಸಂದರ್ಶನದ ಸಂದರ್ಭದಲ್ಲಿ ಬಾಲಿವುಡ್‌ ಮಂದಿ ವಿರುದ್ಧ ತಮ್ಮ ಅಕ್ರೋಶ ಭರಿತ ಮಾತುಗಳನ್ನಾಡಿದ್ದಾರೆ. […]

Advertisement

Wordpress Social Share Plugin powered by Ultimatelysocial