ನಟ ಶಿವರಾಜ್ ಕುಮಾರ್ ಕನ್ನಡಪರ ಹೋರಾಟದ ನೇತೃತ್ವ ವಹಿಸಲಿ: ಇಂದ್ರಜಿತ್ ಲಂಕೇಶ್

ಮೈಸೂರು: ಶಿವರಾಜ್‍ಕುಮಾರ್ ಅವರು ಕನ್ನಡ ಚಿತ್ರರಂಗದ ನಾಯಕತ್ವವಹಿಸಿಕೊಳ್ಳಲಿ ಎಂದು ನಟ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕನ್ನಡಪರ ಹೋರಾಟ ವಿಚಾರದಲ್ಲಿ ಸಿನಿಮಾ ನಟರು ಕೇವಲ ಟ್ವೀಟ್ ಮಾಡಿ ಸುಮ್ಮನಾಗಬಾರದು.

ಸಿನಿಮಾದವರು ಬೆಳಗಾವಿಗೆ ಹೋಗಿ ಹೋರಾಟಕ್ಕೆ ಬೆಂಬಲ ನೀಡಬೇಕು.

ಸಿನಿಮಾ ರಂಗದಲ್ಲಿ ನಾಯಕತ್ವದ ಕೊರತೆ ಇದೆ ಎಂದಿದ್ದಾರೆ. ಡಾ. ರಾಜ್ ಅಂಬರೀಶ್ ನಂತರ ನಾಯಕತ್ವ ಇಲ್ಲದಂತಾಗಿದೆ. ಹೀಗಾಗಿ ಕನ್ನಡ ಹೋರಾಟಕ್ಕೆ ಬನ್ನಿ ಅಂತಾ ಕರೆಯಬೇಕಾದ ದುಸ್ಥಿತಿ ಇದೆ. ಸಿನಿಮಾ ರಂಗಕ್ಕೆ ಉತ್ತಮ ನಾಯಕತ್ವದ ಅವಶ್ಯಕತೆ ಇದೆ. ಹ್ಯಾಟ್ರಿಕ್ ಹೀರೋ ಡಾ ಶಿವರಾಜ್ ಕುಮಾರ್ ನಾಯಕತ್ವ ವಹಿಸಿಕೊಳ್ಳಬೇಕು.

ಅವರ ನಾಯಕತ್ವದಲ್ಲಿ ಎಲ್ಲರೂ ಹೋರಾಟಕ್ಕೆ ಬೆಂಬಲ ನೀಡಬೇಕು. ನಾನು ಟ್ವಿಟ್ಟರ್‌ ಹೋರಾಟದ ವಿರೋಧಿ. ನಾನು ಬೆಳಗಾವಿಗೆ ಹೋಗುತ್ತೇನೆ. ಹಿಂದೆ ಗೋಕಾಕ್ ಚಳುವಳಿಗೆ ಡಾ ರಾಜ್‍ಕುಮಾರ್ ಅವರನ್ನು ಕರೆ ತಂದಿದ್ದು ನಮ್ಮ ತಂದೆ ಲಂಕೇಶ್. ಡಾ ರಾಜ್ ಅನುಮತಿ ಇಲ್ಲದೆ ಗೋಕಾಕ್ ಹೋರಾಟಕ್ಕೆ ರಾಜ್ ಅಂತಾ ಲೇಖನ ಬರೆದಿದ್ದರು. ನಂತರ ಡಾ ರಾಜ್ ಹೋರಾಟಕ್ಕೆ ಬಂದಿದ್ದರು ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ASIGMA: ಭಾರತೀಯ ಸೇನೆ ಪರಿಚಯಿಸುತ್ತಿದೆ ಹೊಸ ಚಾಟ್ ಆಯಪ್.. ಇದು ವಾಟ್ಸ್‌ಆಯಪ್​ಗಿಂತಲೂ ಸುರಕ್ಷಿತ!

Fri Dec 24 , 2021
ಭಾರತೀಯ ಸೇನೆಯು ASIGMA (ಆರ್ಮಿ ಸೆಕ್ಯೂರ್ ಇಂಡಿಜಿನಿಯಸ್ ಮೆಸೇಜಿಂಗ್ ಅಪ್ಲಿಕೇಶನ್) ಎಂದು ಕರೆಯಲ್ಪಡುವ ಆಂತರಿಕ ಸಂದೇಶ ಕಳುಹಿಸುವ ಅಪ್ಲಿಕೇಶನ್ (Application) ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ, ಇದನ್ನು “ಹೊಸ ತಲೆಮಾರಿನ, ಕಲೆಯ ರಾಜ್ಯ, ವೆಬ್ ಆಧಾರಿತ ಅಪ್ಲಿಕೇಶನ್” ಎಂದು ಪರಿಗಣಿಸಲಾಗಿದೆ. ಆರ್ಮಿ ವೈಡ್ ಏರಿಯಾ ನೆಟ್‌ವರ್ಕ್ (AWAN) ಸಂದೇಶದ ಬದಲಿಯಾಗಿ ಆರ್ಮಿಯ (Army) ಆಂತರಿಕ ನೆಟ್‌ವರ್ಕ್‌ನಲ್ಲಿ ಅಪ್ಲಿಕೇಶನ್ ಅನ್ನು ನಿಯೋಜಿಸಲಾಗುತ್ತಿದೆ ಎಂದು PIB (ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ) ಪೋಸ್ಟ್‌ನಲ್ಲಿ ಹೇಳಲಾಗಿದೆ. […]

Advertisement

Wordpress Social Share Plugin powered by Ultimatelysocial