ಲಾಕ್‌ಡೌನ್‌ನಿಂದ ಇಷ್ಟು ದಿನ ಎಲ್ಲ ಉದ್ಯಮಗಳು ಸ್ಥಗೀತಗೊಂಡಿದ್ದು, ಮೇ ೩೧ರನಂತರ ಅಂತ್ಯವಾಗಲಿದ್ದು, ಜೂ. ೧ರಿಂದ ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ಬರುವ ಸಾಧ್ಯತೆಗಳಿವೆ.  ಬಸ್ ಸಂಚಾರಕ್ಕೆ ಅನುಮತಿ ನೀಡಿದ್ದು, ಮೆಟ್ರೋ ಸಂಚಾರಕ್ಕೆ ಇನ್ನು ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಜೂ. ೧ರಿಂದ ಈ ಸೇವೆಗೆ ಚಾಲನೆ ಸಿಗುವ ಸಂಭವವಿದ್ದು, ಅದಕ್ಕಾಗಿ ಬಿಎಂ ಆರ್‌ಸಿಎಲ್ ಸಿದ್ಧತೆ ಮಾಡಿಕೊಳ್ತಿದೆ.

ಸಂವಿಧಾನದ ಪರಿಚ್ಛೇದ ೧೦ಕ್ಕೆ ತಿದ್ದುಪಡಿ ತರುವ ವಿಚಾರವಾಗಿ ವಿಧಾನಸೌಧದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ವಿಶೇಷ ಚರ್ಚಾ ಸಭೆ ನಡೆಯಲಿದೆ. ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರು ಸೇರಿ ೨೫ಗಣ್ಯರೊಂದಿಗೆ ಸಂವಿದಾನದ ಶೆಡ್ಯೂಲ್-೧೦ಗೆ ತಿದ್ದುಪಡಿ ತರುವ ಬಗ್ಗೆ ಸ್ಪೀಕರ್ ಕಾಗೇರಿ ಚರ್ಚೆ ನಡೆಸ್ತಿದಾರೆ. ಸಭೆಯಲ್ಲಿ ಸಿ.ಎಂ ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಸಿಎಂ ಕಾರಜೋಳ, ಜಗದೀಶ್ ಶೆಟ್ಟರ್, ಸಿ.ಟಿ ರವಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಲವು […]

ಮಿಡತೆಗಳ ಹಾವಳಿ ಹಿನ್ನಲೆ ಕೃಷಿ ಇಲಾಖೆ ಹಾಗೂ ಜಲ ಸಂಪನ್ಮೂಲ ಇಲಾಖೆಗಳು ಒಟ್ಟಿಗೆ ಸಭೆ ನಡೆಸಲಿವೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.  ಮಾಧ್ಯಮಗಳೊಂದಿಗೆ ಮಾತನಾಡಿದ ಜಾರಕಿಹೊಳಿ ಕರ್ನಾಟಕ ರಕ್ಕಸ ಮಿಡತೆಗಳ ಭೀತಿ ಹಿನ್ನಲೆ ಕೃಷಿ ಇಲಾಖೆ ಮತ್ತು ಜಲ ಸಂಪನ್ಮೂಲ ಇಲಾಖೆಗಳು ಇದರ ನಿಯಂತ್ರಣಕ್ಕೆ ಪ್ರಯತ್ನ ನಡೆಸಲಿವೆ ಎಂದರು.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ತನಿಖೆ, ಸ್ಥಳಪರಿಶೀಲನೆಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಡೆಯಾಜ್ಞೆ ನೀಡಿದ್ದು, ಯಾವುದೇ ಅಧ್ಯಯನ ಪ್ರವಾಸ ಕೈಗೊಳ್ಳದಿರಲು ಆದೇಶ ಹೊರಡಿಸಿದ್ದಾರೆ.   ಸ್ಪೀಕರ್ ಆದೇಶಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದು, ಭ್ರಷ್ಟಾಚಾರ ಕುರಿತು ತನಿಖೆ ಮಾಡಲು ಸ್ಪೀಕರ್ ನೀಡಿರುವ ತಡೆ ಸಂವಿಧಾನ ಮತ್ತು ಕಾನೂನಾತ್ಮಕ ವ್ಯವಸ್ಥೆಯನ್ನ ಬುಡಮೇಲು ಮಾಡುತ್ತದೆ. ವಿಧಾನಮಂಡಲ ಸಮಿತಿಗಳ ಅಧಿಕಾರ ಮೊಟಕುಮಾಡುವ ಪ್ರಯತ್ನ ತಕ್ಷಣ ಕೈಬಿಡಿ ಎಂದು ಮನವಿ ಮಾಡಿದ್ದಾರೆ.

ಕೊರೊನಾ ಬಂದಾಗಿನಿAದ ಲಾಕ್‌ಡೌನ್ ಅನ್ನೋ ಪದ ಜನಸಾಮಾನ್ಯರಿಗೂ ತಲುಪಿ ಬಿಟ್ಟಿದೆ. ಕೇಂದ್ರ ಸರ್ಕಾರ ದೇಶಾದ್ಯಂತ್ ಲಾಕ್‌ಡೌನ್ ವಿಧಿಸಿತ್ತು. ಇದೀಗ ಲಾಕ್‌ಡೌನ್ ಹೆಸರಿನಲ್ಲಿಯೆ ಸ್ಯಾಮಡಲ್‌ವುಡ್‌ನಲ್ಲಿ ಸಿನಿಮಾವೊಂದು ರೆಡಿಯಾಗ್ತಿದೆ. ನಟ,ಸಂಕಲನಕಾರ, ನಾಗೇಂದ್ರ ಅರಸ್ ಅವರೆ ಸ್ವತಃ ಚಿತ್ರದಲ್ಲಿ ನಟಿಸುತ್ತಿದ್ದು, ಕಥೆ, ಚಿತ್ರಕಥೆ, ನಿರ್ದೇಶನದ ಹೊಣೆಯನ್ನು ಅವರೆ ಹೊತ್ತಿದ್ದಾರೆ. ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ಒಬ್ಬರೇ ಪಾತ್ರಧಾರಿ ಇರಲಿದ್ದಾರೆ. ಫೀಚರ್ ಮೂವಿ ಆಗಿದ್ದು, ಒಂದೂವರೆ ಗಂಟೆ ಅವಧಿಯಲ್ಲಿ ಸಿನಿಮಾ ಇರಲಿದೆ. ಸಿನಿಮಾ ಪೂರ್ತಿ ಒಂದು […]

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡಾ 20-30 ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಆಮ್ ಆದ್ಮಿ ಪಕ್ಷ ಖಂಡಿಸಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಅವರು ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಬೆನ್ನಲ್ಲೇ ಭುಗಿಲೆದ್ದಿರುವ ಆರ್ಥಿಕ ಬಿಕ್ಕಟ್ಟಿಗೆ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಇದರ ಜೊತೆಗೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡಾ 20-30 ರಷ್ಟು […]

ರೈತರಿಗೆ ಬ್ಯಾಂಕುಗಳು ಕಹಿಸುದ್ದಿಯನ್ನ ನೀಡಿದ್ದು, ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆಯಲು ಹಿಂದಿನ ಬಾಕಿಯನ್ನ ಮೇ ೩೧ರೊಳಗಾಗಿಯೇ ಮರುಪಾವತಿಸಬೇಕೆಂದು ಸಹಕಾರಿ ಬ್ಯಾಂಕುಗಳು ರೈತರಿಗೆ ತಿಳಿಸಿವೆ. ಲಾಕ್ ಡೌನ್ ಅವಧಿಯಲ್ಲಿ ಬಹುತೇಕ ರೈತರು ಕೃಷಿ ಸಾಲವನ್ನು ಕಟ್ಟಿಲ್ಲ. ಹೀಗಾಗಿ ಶೂನ್ಯ ಬಡ್ಡಿ ದರದಲ್ಲಿ ಕೇಂದ್ರ ಸರಕಾರದ ಪಾಲನ್ನು ರಾಜ್ಯ ಸರಕಾರ ಪಾವತಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ರೈತಪರ ಸಂಘಟನೆಗಳು ಸರಕಾರಕ್ಕೆ ಮನವಿ ಸಲ್ಲಿಸಿವೆ.

ಕೊರೊನಾ ಲಾಕ್‌ಡೌನ್ ಹಿನ್ನಲೆ ಕೇಂದ್ರ ಸರ್ಕಾರ ಎಲ್ಲ ಉದ್ಯಮಗಳಿಗೂ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಚಮ್ಮಾರರಿಗೂ ಸಹ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ವಿಧಾನಸೌಧದಲ್ಲಿ ಮಾತನಾಡಿದ ಡಿಸಿಎಂ ಕಾರಜೋಳ ೧೧,೭೨೨ ಫಲಾನುಭವಿಗಳಿಗೆ ತಲಾ ೫ಸಾವಿರ ರೂಪಾಯಿ ಹಣವನ್ನು ಎಂದು ನೀಡಲಾಗುತ್ತಿದೆ ಎಂದರು.

ಹೊಸದಿಲ್ಲಿ: ಕೊರೊನಾ ಸೋಂಕಿತರ ಇರುವಿಕೆಯನ್ನು ಗುರುತಿಸಬಲ್ಲ ಆರೋಗ್ಯ ಸೇತು ಮೊಬೈಲ್‌ ಅಪ್ಲಿಕೇಶನ್‌ ಏಪ್ರಿಲ್‌ನಲ್ಲಿ ಬಿಡುಗಡೆಯಾದಾಗಿನಿಂದ ಅನೇಕ ತಂತ್ರಜ್ಞಾನ ಪರಿಣಿತರು, ಆಯಪ್‌ ಡೆವಲಪರ್‌ಗಳು ಆ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಲ್ಪಡುವವರ ಮಾಹಿತಿಯು ಸುರಕ್ಷಿತವಾಗಿಲ್ಲ ಎಂಬ ಆತಂಕ ವ್ಯಕ್ತಪಡಿಸಿದ್ದರು. ಈ ಆತಂಕಗಳಿಗೆ ಇತಿಶ್ರೀ ಹಾಡಲು ನಿರ್ಧರಿಸಿರುವ ಕೇಂದ್ರ ಸರಕಾರ, ಆರೋಗ್ಯ ಸೇತು ಮೊಬೈಲ್‌ ಆಯಪ್‌ನ ಓಪನ್‌ ಸೋರ್ಸ್‌ ಲಿಂಕ್‌ ಅನ್ನು ಬಿಡುಗಡೆ ಮಾಡಿದೆ. https://github.com/nic-delhi/AarogyaSetu_Android.git ಎಂಬ ಲಿಂಕ್‌ ಅನ್ನು ಬಳಸಿಕೊಂಡು ಆರೋಗ್ಯ ಸೇತುವಿನ ಬಗ್ಗೆ ಇರುವ […]

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವವರ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮ ವಹಿಸಿ, ಕಾರ್ಯಸೂಚಿ ರೂಪಿಸಲು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ಸೂಚಿಸಿದ್ದಾರೆ. ಕರ್ನಾಟಕ ರಾಜ್ಯ ಮಟ್ಟದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ತರಬೇತಿ ಕಾರ್ಯಕ್ರಮಕ್ಕೆ ಆನ್‌ಲೈನ್ ಮೂಲಕ ಇಂದು ನಡೆದ ಸಮಾರೋಪದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಡಿಸಿಎಂ, ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವವರ ಪ್ರಮಾಣ ಹೆಚ್ಚಿಸುವಲ್ಲಿ ಮುಕ್ತ ವಿಶ್ವವಿದ್ಯಾಲಯ ಅತಿ […]

Advertisement

Wordpress Social Share Plugin powered by Ultimatelysocial