ಚಡಚಣ ಪಟ್ಟಣದ ಅವರಾತ್ರಿ ಅಮಾವಾಸ್ಯೆಯ ದಿನ ಸಂಗಮೇಶ್ವರ ಜಾತ್ರೆಯು ಆರಂಭಗೊಳ್ಳುತ್ತಿದ್ದುಶನಿವಾರ 21ರಿಂದ 25 ರವರೆಗೆ ಐದು ದಿನಗಳ ಕಾಲ ಜಾತ್ರೆ ಜರಗಲಿರುವ ಜಾತ್ರೆಯಲ್ಲಿ ಜಾನುವಾರಗಳಿಗೆ ಭಯಾನಕ ಚರ್ಮರೋಗ ಬಂದ ಕಾರಣಈ ವರ್ಷ ಜಾನುವಾರ ಜಾತ್ರೆ ನಡೆಯುವುದಿಲ್ಲವೆಂದು ತಹಶೀಲ್ದಾರ್ ಹನುಮಂತ್ ಶಿರಟ್ಟಿ ಹೇಳಿದರು.ಚಡಚಣ ಪಿಎಸ್ಐ ಸಂಜಯ ತಿಪ್ಪಾರೆಡ್ಡಿ ಅವರು ಮಾತನಾಡಿಎಲ್ಲರೂ ಕಾನೂನು ಸುವೆವಸ್ಥೆಯನ್ನು ಕಾಪಾಡಿಕೊಂಡು ಜಾತ್ರೆ ಮಾಡಬೇಕೆಂದು ಹೇಳಿದರು.ಇದೇ ಸಂದರ್ಭದಲ್ಲಿ ಪ.ಪಂ. ಮುಖ್ಯ ಅಧಿಕಾರಿ ಬಾಬುಸಾಹೇಬ ಅವರು ಜಾತ್ರೆಗೆ ನಮ್ಮ ಪ.ಪಂ. ವತಿಯಿಂದ ಎಲ್ಲಾ ಸೌಕರ್ಯಗಳನ್ನು ಚಡಚಣ ತಹಶಿಲ್ದಾರ್ ಹನುಮಂತ ಶಿರಹಟ್ಟಿ ಅವರು ಜೊತೆ ಸಮಾಲೋಚನೆ ನಡೆಸಿ ಜಾತ್ರೆಯ ರೂಪರೇಷೆ ಹಾಕಿಕೊಳ್ಳುವದಾಗಿ ಹೇಳಿದರು.
https://play.google.com/store/apps/details?id=com.speed.newskannada