ಮನೆ ಮತ್ತು ಬೀದಿಗೆ ವಿದ್ಯುತ್ ದೀಪವಿಲ್ಲದೆ ಜನರ ಪರದಾಟ. ನಂಜನಗೂಡು ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಹನುಮನಪುರ ಗ್ರಾಮದಲ್ಲಿ ನಿವಾಸಿಗಳ ಅಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಲಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದ ಹನುಮನಪುರ ಗ್ರಾಮ ಕಳೆದ ಎಂಟು ವರ್ಷಗಳಿಂದ ವಿದ್ಯುತ್ ದೀಪ ಇಲ್ಲದೆ ಪರಿತಪಿಸುತ್ತಿರುವ ನಿವಾಸಿಗಳು ಕೋಣನೂರು ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ ಗ್ರಾಪಂ ಮತ್ತು ಚೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ. ಹನುಮನಪುರ ಗ್ರಾಮದ ದಲಿತರ ಬೀದಿಯಲ್ಲಿ ವಿದ್ಯುತ್ ಬೆಳಕನ್ನೇ ಕಾಣದ ನಿವಾಸಿಗಳು ಬೀದಿಗೆ ವಿದ್ಯುತ್ ಕಂಬಗಳು ಇಲ್ಲ ಮನೆಗೆ ವಿದ್ಯುತ್ ಸಂಪರ್ಕ ಅಂತೂ ಇಲ್ಲವೇ ಇಲ್ಲ ರಾತ್ರಿಯ ಸಮಯದಲ್ಲಿ ತಿರುಗಾಡಲು ನಿವಾಸಿಗಳಿಗೆ ತೊಂದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯುತ್ ದೀಪ ಇಲ್ಲದೆ ದೀಪದ ಬೆಳಕಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಸರ್ಕಾರ ನೀಡುತ್ತಿದ್ದ ಸೀಮೆಎಣ್ಣೆಯೂ ಸಹ ನಿಲ್ಲಿಸಿದೆ ಸುಮಾರು 15ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ದೀಪವಿಲ್ಲ ಇದರಿಂದ ಬ್ಯಾಟರಿ ಬೆಳಕಲ್ಲಿ ನಾವು ಜೀವನ ಸಾಗಿಸುತ್ತಿದ್ದೇವೆ ವಿದ್ಯುತ್ ಕಂಬ ಅಳವಡಿಸಲು ಹಲವು ಬಾರಿ ಚೆಸ್ಕಾಂ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರು ಕ್ಯಾರೇ ಎಂದಿಲ್ಲಇನ್ನಾದರೂ ನಮಗೆ ವಿದ್ಯುತ್ ಕಂಬ ಹಾಗೂ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿ ಎಂದು ನಿವಾಸಿಗಳ ಒತ್ತಾಯ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada