ಆಂಕರ್: ಚುನಾವಣೆ ಸನಿವಾಗ್ತಿರೋ ಕಾರಣದಿಂದಾಗಿ ರಾಜಧಾನಿ ಬೆಂಗಳೂರಿನ ಮತದಾರರನ್ನ ಸೆಳೆಯಲು ರಾಜಕೀಯ ವ್ಯಕ್ತಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅದೇ ಸಾಲಿನಲ್ಲಿ ನಿನ್ನೆ ಬ್ಯಾಟರಾಯನಪುರ ವಿಧಾನಭಾಕ್ಷೇತ್ರದ ಜನರಿಗೆ ಸಾಕ್ಷಾತ್ ತಿರುಪತಿ ತಿಮ್ಮಪ್ಪನನ್ನೇ ದರ್ಶನ ಮಾಡಿಸುವ ಕೆಲಸ ನಡೆದಿದೆ. ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ತಿರುಪತಿ ಲಡ್ಡು ವಿತರಿಸಲಾಗುತ್ತೆ ಎಂಬ ಕಾರಣ ಇಡೀ ಬ್ಯಾಟರಾಯನಪುರ ಕ್ಷೇತ್ರದ ಜನರೇ ಬಂದು ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಭಾಗಿಯಾಗಿದ್ರು. ಜೊತೆಗೆ ತಿರುಪತಿ ಲಡ್ಡು ವಿತರಣೆ ಇದ್ದ ಕಾರಣ ಮತದಾರರನ್ನ ಸೆಳೆದ ಪ್ಲ್ಯಾನ್ ಸಖತ್ ಕೆಲಸ ಮಾಡಿತ್ತು.
ಇನ್ನು ಬ್ಯಾಟರಾಯನಪುರದಲ್ಲಿ ಜರುಗಿದ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಮಾಜಿ ಸಿಎಂ ಯಡಿಯೂರಪ್ಪ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರೆ, ಹಸಿರು ಫೌಂಡೇಶನ್ ವತಿಯಿಂದ ಬಿಜೆಪಿ ಮುಖಂಡ ತಮ್ಮೇಶ್ ಗೌಡ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ತಿರುಪತಿಯ ಆಸ್ಥಾನ ಗಾಯಕರಿಂದ ಸಂಗೀತೋತ್ಸವ ನೆರವೇರಿಸಲಾತ್ತು. ಕಾರ್ಯಕ್ರಮಕ್ಕೆ ಹರಪೀಠ ವಚನಾನಂದ ಶ್ರೀ, ನಂಜಾವಧೂತ ಸ್ವಾಮೀಜಿ ಭಾಗಿಯಾಗಿ ಆರ್ಶೀವಚನ ನೀಡಿದರು. ಕಾರ್ಯಕ್ರಮಕ್ಕೆ ಬಂದವರಿಗೆ ತಿರುಪತಿ ತಿಮ್ಮಪ್ಪನ ಪ್ರಸಾದ ಲಡ್ಡು ವಿತರಣೆ ಇದ್ದ ಕಾರಣ ನಾ ಮುಂದು ತಾ ಮುಂದು ಎಂದು ಜನ ಕಿಕ್ಕಿರಿದಿದ್ದರು.
https://play.google.com/store/apps/details?id=com.speed.newskannada