ಮೋದಿ ಎಲೆಕ್ಷನ್ ಗೇಮ್.

ದೇಶದಲ್ಲಿ ಈಗ ಚುನಾವಣಾ ಪರ್ವ ಕಾಲ.. ಹಲವು ರಾಜ್ಯಗಳಲ್ಲಿ ಈ ವರ್ಷ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಈ ಹೊತ್ತಲ್ಲೇ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನ ಇಟ್ಟಿದೆ. ಕೇಂದ್ರ ಸರ್ಕಾರದ ಕ್ಯಾಬಿನೆಟ್‌ಗೆ ಸರ್ಜರಿ ಮಾಡಲು ಮುಂದಾಗಿದೆ. ಹಾಗಾದ್ರೆ ಕೇಂದ್ರದಲ್ಲಿ ಆಗೋದು ಸಂಪುಟ ವಿಸ್ತರಣೆಯೋ? ಪುನಾರಚನೆಯೋ? ಯಾರಿಗೆ ಕೊಕ್‌ ಅನ್ನೋದ್ರ ವಿವರ ಇಲ್ಲಿದೆ. ಕೇಂದ್ರ ಸಚಿವ ಸಂಪುಟ ಪುನಾ​ರಚನೆಗೆ ಪ್ಲ್ಯಾನ್ಈ  ವರ್ಷ ದೇಶದ ಸುಮಾರು 9 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೀತಿವೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಈ ಹೊತ್ತಲ್ಲಿ ಕೇಂದ್ರ ಸರ್ಕಾರ ಸಚಿವ ಸಂಪುಟ ಪುನಾರಚನೆಗೆ ಮುಂದಾಗಿ ಎಂಬ ಮಾಹಿತಿ ಹೊರಬಿದ್ದಿದೆ. ಈ ತಿಂಗಳಲ್ಲಿ ಧನುರ್ಮಾಸ ಮುಗಿದ ಬಳಿಕ ಕೇಂದ್ರ ಸಚಿವ ಸಂಪುಟ ರೀ ಶಫಲ್ ಆಗಲಿದೆ ಎಂದು ತಿಳಿದುಬಂದಿದೆ. ಚುನಾವಣಾ ಪರ್ವ ಕಾಲದಲ್ಲೇ ರೀ ಶಫಲ್‌ಗೆ ಪ್ರಧಾನಿ ಮೋದಿ ಸರ್ಕಾರ ನಿರ್ಧಾರ ಮಾಡಿದೆ ಎನ್ನಲಾಗಿದೆ.

ಕೇಂದ್ರ ಸಂಪುಟ ಸರ್ಜರಿ?

  • ಕರ್ನಾಟಕ, ತೆಲಂಗಾಣ ಸೇರಿ 9 ರಾಜ್ಯಗಳಿಗೆ ಎಲೆಕ್ಷನ್
  • ಹೀಗಾಗಿ ಚುನಾವಣೆ ನಡೆಯುವ ರಾಜ್ಯಗಳಿಗೆ ಪ್ರಾಶಸ್ತ್ಯ
  • 2024ರಲ್ಲಿ ಲೋಕಸಭೆಗೂ ಚುನಾವಣೆ ನಡೆಯಲಿದೆ
  • ಇದಕ್ಕೂ ಮೊದಲೇ ಕ್ಯಾಬಿನೆಟ್ ಪುನಾರಚನೆ ಪ್ಲ್ಯಾನ್
  • ಸದ್ಯ ಕೆಲ ಸಚಿವರ ಬಳಿ ಎರಡೆರಡು ಖಾತೆಗಳು ಇವೆ
  • ಹೆಚ್ಚುವರಿ ಖಾತೆಗಳನ್ನ ಹೊಸ ಸಚಿವರಿಗೆ ಹಂಚುವುದು
  • ಸಕ್ರಿಯ ಕೆಲಸ ಮಾಡುವ ಸಂಸದರಿಗೆ ಕ್ಯಾಬಿನೆಟ್ ಸ್ಥಾನ
  • ಒಂದಷ್ಟು ಸಚಿವರಿಗೆ ಕ್ಯಾಬಿನೆಟ್​ನಿಂದ ಕೊಕ್ ಸಾಧ್ಯತೆಸಂಪುಟ ಪುನಾರಚನೆಯಲ್ಲಿ ಕರ್ನಾಟಕದ ಮತ್ತೊಬ್ಬ ಸಂಸದನಿಗೆ ಲಕ್ ಖುಲಾಯಿಸಲಿದೆ. ರಾಜ್ಯ ವಿಧಾನಸಭಾ ಚುನಾವಣೆ ಹೊತ್ತಲ್ಲೇ ರಾಜ್ಯದ ಮತ್ತೊಬ್ಬ ಸಂಸದನಿಗೆ ಕೇಂದ್ರ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿದೆ. ಕರ್ನಾಟಕದ ಲಿಂಗಾಯತ ಸಮುದಾಯದ ಒಬ್ಬರಿಗೆ ಕೇಂದ್ರ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕರ್ನಾಟಕದಿಂದ ಸದ್ಯ ನಾಲ್ವರು ಸಚಿವರು ಕೇಂದ್ರದಲ್ಲಿ ಕಾರ್ಯ ನಿರ್ವಹಿಸ್ತಿದ್ದಾರೆ. ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಭಗವಂತ ಖೂಬಾ ಹಾಲಿ ಸಚಿವರಾಗಿ ಕಾರ್ಯ ನಿರ್ವಹಿಸ್ತಿದ್ದಾರೆ. ಇದೀಗ ಲಿಂಗಾಯತ ಸಮುದಾಯದ ಮತ್ತೊಬ್ಬ ಸಂಸದರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ. ಒಟ್ಟಾರೆ, ಚುನಾವಣೆ ವೇಳೆಯೇ ಲಿಂಗಾಯತ ಮತಗಳನ್ನ ಸೆಳೆಯಲು ಬಿಜೆಪಿ ಸರ್ಕಾರ ಸಚಿವ ಸಂಪುಟ ಪುನಾರಚನೆ ಅಸ್ತ್ರ ಪ್ರಯೋಗಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪುಟ್ಟೇನಹಳ್ಳಿ ಪೊಲೀಸ್ರಿಂದ ಕುಖ್ಯಾತ ರೌಡಿಶೀಟರ್ ಬಂಧನ.

Thu Jan 12 , 2023
ಪುಟ್ಟೇನಹಳ್ಳಿ ಪೊಲೀಸ್ರಿಂದ ಕುಖ್ಯಾತ ರೌಡಿಶೀಟರ್ ಬಂಧನ ಮುನೇಲ್ ಬಂಧಿತ ರೌಡಿಶೀಟರ್ ಎರಡು ವರ್ಷದಿಂದ‌ ತಲೆ‌ಮರೆಸಿಕೊಂಡಿದ್ದ ರೌಡಿ‌ ಮುನೇಲ್ ಬೆಂಗಳೂರು ದಕ್ಷಿಣ ವಿಭಾಗದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು ಕೊಲೆಯತ್ನ, ರಾಬರಿ , ಜೀವಬೆದರಿಕೆ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಆದರೆ ಎರಡು ವರ್ಷದಿಂದ ನಾಪತ್ತೆಯಾಗಿದ್ದ ಮುನೇಲ್ ಇಂದು ಖಚಿತ ಮಾಹಿತಿ ಅಧರಿಸಿ ಆರೋಪಿ ಬಂಧನ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like […]

Advertisement

Wordpress Social Share Plugin powered by Ultimatelysocial