ನಟಿ ರಮ್ಯಾ ಕೃಷ್ಣ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ತಮ್ಮದೇ ಛಾಪು ಮೂಡಿಸಿದವರು. ಅನೇಕ ಕನ್ನಡ ಸಿನಿಮಾಗಳಲ್ಲಿಯೂ ಅವರು ಕೆಲಸ ಮಾಡಿದ್ದಾರೆ. 90 ರ ದಶಕದಿಂದಲೂ ತಮ್ಮ ನಟನೆ ಮತ್ತು ಅಂದಕ್ಕೆ ಹೆಸರುವಾಸಿ. ಆದರೆ ರಮ್ಯಾ ಕೃಷ್ಣ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ವದಂತಿಗಳಿವೆ.
ನಿರ್ದೇಶಕ ಕೆ.ಎಸ್.ರವಿಕುಮಾರ್ ಅವರ ಅಫೇರ್ ಬಗ್ಗೆ ಸೃಷ್ಟಿಯಾಗಿದ್ದ ವಿವಾದ ದೊಡ್ಡ ಚರ್ಚೆಗೆ ಗರಾಸವಾಗಿತ್ತು.
ರಮ್ಯಾ ಕೃಷ್ಣ ಅವರು ನಿರ್ದೇಶಕ ಕೆ.ಎಸ್.ರವಿಕುಮಾರ್ ಜೊತೆಗೆ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 1999 ರಲ್ಲಿ, ರಮ್ಯಾ ಕೃಷ್ಣ ಅಭಿನಯದ ‘ಪಡೆಯಪ್ಪ’ ಮತ್ತು ‘ಪಾಟಲಿ’ ಚಿತ್ರದಲ್ಲಿ ನಿರ್ದೇಶಕ ಕೆ.ಎಸ್.ರವಿಕುಮಾರ್ ಜೊತೆಗೆ ಕೆಲಸ ಮಾಡಿದರು. ಈ ಚಿತ್ರಗಳಿಂದ ನಟಿಗೆ ಸಾಕಷ್ಟು ಪ್ರಸಿದ್ಧಿ ದೊರೆಯಿತು. 2002ರಲ್ಲಿ ಪಂಚತಂತ್ರ ಸಿನಿಮಾದಲ್ಲಿ ರಮ್ಯಾ ಕೃಷ್ಣ ಅವರನ್ನು ವಿಭಿನ್ನ ಪಾತ್ರದಲ್ಲಿ ತೋರಿಸಿದರು ನಿರ್ದೇಶಕ ಕೆ.ಎಸ್.ರವಿಕುಮಾರ್. ವರದಿಗಳ ಪ್ರಕಾರ, ಸಿನಿಮಾಗಳ ಕೆಲಸದ ಜೊತೆಗೆ ಇಬ್ಬರ ನಡುವೆ ಸ್ನೇಹ ಗಾಢವಾಯಿತು.
ಇಬ್ಬರೂ ಪರಸ್ಪರ ಸಂಬಂಧವನ್ನು ಹೊಂದಿದ್ದರು ಎಂದು ವದಂತಿ ಶುರುವಾಗಿತ್ತು. ಡೇಟಿಂಗ್ ಮಾಡಲು ಪ್ರಾರಂಭಿಸಿದರು ಎಂಬ ಊಹಾಪೋಹಳು ಕೇಳಿಬರಲು ಆರಂಭಿಸಿದವು. ನಿರ್ದೇಶಕ ರವಿಕುಮಾರ್ ಈಗಾಗಲೇ ಮದುವೆಯಾಗಿದ್ದರು. ಅದೇ ವೇಳೆ ರಮ್ಯಾ ಕೂಡ ಆತನನ್ನು ಪ್ರೀತಿಸುತ್ತಿದ್ದರು ಎಂಬ ವಿಚಾರಗಳು ಹರಿದಾಡಿದವು. ಇದರೊಂದಿಗೆ ನಟಿ ಮದುವೆಯಾಗದೆ ನಿರ್ದೇಶಕರಿಂದ ಗರ್ಭಿಣಿಯಾಗಿದ್ದಾರೆ ಎಂಬ ವದಂತಿ ಎಲ್ಲೆಡೆ ಸಂಚಲನ ಸೃಷ್ಟಿಸಿತು.
ಕೆಎಸ್ ರವಿಕುಮಾರ್ ಪತ್ನಿಗೆ ತನ್ನ ಪತಿ ಮತ್ತು ರಮ್ಯಾ ಬಗ್ಗೆ ತಿಳಿದಾಗ ಅವರು ನಟಿಗೆ ಬೆದರಿಕೆ ಹಾಕಿದ್ದರು ಎಂದು ಸಹ ಹೇಳಲಾಗುತ್ತದೆ. ಅದೇ ಹೊತ್ತಿಗೆ ಈ ಸುದ್ದಿಗಳಿಂದಾಗಿ ರವಿಕುಮಾರ್ ಮತ್ತು ಹೆಂಡತಿಯ ನಡುವಿನ ಸಂಬಂಧವು ಹದಗೆಡಲು ಪ್ರಾರಂಭಿಸಿತು. ಇದಾದ ನಂತರ ನಿರ್ದೇಶಕ ಕೆ.ಎಸ್.ರವಿಕುಮಾರ್ ಈ ಆರೋಪ ಮತ್ತು ಸಂಬಂಧವನ್ನು ಕೊನೆಗೊಳಿಸಲು ಡಿಸೈಡ್ ಮಾಡಿದರಂತೆ. ಆದರೆ ನಟಿ ರಮ್ಯಾ ಕೃಷ್ಣ ಗರ್ಭಪಾತಕ್ಕೆ 75 ಲಕ್ಷ ರೂಪಾಯಿ ಬೇಡಿಕೆ ಇಟ್ಟರೆಂಬ ವದಂತಿಗಳು ಇವೆ.
ಆದರೆ, ನಂತರದ ದಿನಗಳಲ್ಲಿ ರಮ್ಯಾ ಮತ್ತು ರವಿಕುಮಾರ್ ಅವರಿಗೆ ಈ ವಿವಾದಗಳ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಅವರು ಈ ವರದಿಗಳನ್ನು ನಿರಾಕರಿಸಿದರು. ಆ ಬಳಿಕ ಜೂನ್ 12, 2003 ರಂದು ರಮ್ಯಾ ಕೃಷ್ಣ ತೆಲುಗು ಚಲನಚಿತ್ರ ನಿರ್ಮಾಪಕ ಕೃಷ್ಣ ವಂಶಿ ಅವರನ್ನು ಮದುವೆಯಾದರು. ಮದುವೆಯಾದ ಕೆಲವೇ ದಿನಗಳಲ್ಲಿ ರಮ್ಯಾ ಗಂಡು ಮಗುವಿಗೆ ಜನ್ಮ ನೀಡಿದರು. ಋತ್ವಿಕ್ ಕೃಷ್ಣ ಎಂದು ಹೆಸರಿಟ್ಟರು. ರಮ್ಯಾ ಮತ್ತು ಕೃಷ್ಣ ಒಟ್ಟಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada