ಕ್ವಾರಂಟೈನ್ ಜಿಹಾದಿಗಳಿಗೆ ಜೀವಾವಧಿ ಶಿಕ್ಷೆ

ದೇಶದಲ್ಲಿ ಕೊರೊನಾ ಜಿಹಾದ್ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ. ಇಂದು ಉಡುಪಿಯಲ್ಲಿ ಮಾತನಾಡಿದ ಅವರು, ಕರೋನಾ ಸೋಂಕಿತ ವ್ಯಕ್ತಿ ವೈದ್ಯರನ್ನು ತಬ್ಬಿಕೊಳ್ಳುತ್ತಾನೆ. ನರ್ಸ್ ಗಳಿಗೆ ರೋಗ ಹಬ್ಬಿಸುವ ಬೆದರಿಕೆ ಹಾಕತ್ತಾನೆ. ಇದು ಭಯೋತ್ಪಾದನೆ ಮುಂದುವರಿದ ಭಾಗವಾಗಿದೆ.

ಕ್ವಾರಂಟೈನ್ ಜಿಹಾದಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು. ಇಂತಹವರನ್ನು ದೇಶದ್ರೋಹಿಗಳೆಂದು ಘೋಷಿಸಬೇಕು ಅವರಿಗೆ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದರು. ಇನ್ನೂ ಕೇರಳ ಕೊರೊನಾ ರೆಡ್ ಜೋನ್ ಕುರಿತು ಮಾತನಾಡಿದ ಅವರು, ಕೇರಳದವರು ಕೊರೊನಾ ಹಬ್ಬಿಸುತ್ತಿದ್ದಾರೆ. ಕೊರೊನಾ ಹಬ್ಬಿಸುವರನ್ನು ನಾವು ಸಹಿಸಲ್ಲ. ಅಗತ್ಯವಿದ್ರೆ ವೈದ್ಯರನ್ನು ಕಳಿಸಲು ಸಿದ್ಧ ಆದ್ರೆ ಕೇರಳ ಜನ ರಾಜ್ಯಕ್ಕೆ ಬರೋದು ಬೇಡ ಎಂದು ಹೇಳಿದರು.

ವರದಿ: ಪೊಲಿಟಿಕಲ್ ಬ್ಯೂರೊ ಸ್ಪೀಡ್ ನ್ಯೂಸ್ ಕನ್ನಡ

Please follow and like us:

Leave a Reply

Your email address will not be published. Required fields are marked *

Next Post

ಮಾಸ್ಕ್ ಕೊಟ್ಟಿದ್ದಾರೆ. ಮಾಸ್ಕ್ ಬಳಸಿಕೊಂಡು ವರ್ಕ್ ಮಾಡಿ

Sun Apr 5 , 2020
ದೇಶದಲ್ಲಿ ಈವರೆಗೆ ಶ್ರೀಮಂತರಿಗೆ ಮಾತ್ರವೇ ಕೊರೊನಾ ಬಂದಿರೋದು. ಅದು ವಿಮಾನ ಯಾನ ಮಾಡಿದವರಿಗೆ, ನಮ್ಮಂತ ರಾಜಕಾರಣಿಗಳಿಗೆ ಹೊರತು, ಪೌರ ಕಾರ್ಮಿಕರಿಗೆ, ಬಡವರಿಗೆ ಯಾರಿಗೂ ಬಂದಿಲ್ಲ ಎಂಬುದಾಗಿ ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ. ಮಂಗಳೂರನಲ್ಲಿ ಮಾತನಾಡಿದ ಅವರು, ಕೊರೊನಾ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ಇಡೀ ದೇಶದಲ್ಲಿ ಬಡವರಿಗೆ, ಪೌರ ಕಾರ್ಮಿಕರಿಗೆ ಯಾರಿಗೂ ಇದುವರೆಗೆ ಕರೋನಾ ಬಂದಿಲ್ಲ. ವಿಮಾನಯಾನದಲ್ಲಿ ಪ್ರಯಾಣ ಮಾಡಿದವರಿಗೆ, ನಮ್ಮಂತ ರಾಜಕಾರಣಿಗಳಿಗೆ ಮಾತ್ರವೇ. ಬಡವರಿಗೆ ಇದುವರೆಗೆ ಎಲ್ಲಿಯೂ […]
ut khadar

Advertisement

Wordpress Social Share Plugin powered by Ultimatelysocial