ಸಿರವಾರ ಆಸ್ಪತ್ರೆ ಅವ್ಯವಸ್ಥೆ ಕಂಡು ದಲಿತಪರ ಸಂಘಟನೆಗಳಿಂದ ತಾಲ್ಲೂಕು ಆರೋಗ್ಯಾಧಿಕಾರಿಗೆ ಮನವಿ

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಸವಲತ್ತುಗಳು ದೊರಕದ ಕಾರಣ ಕನ್ನಡಪರ ಸಂಘಟನೆಗಳು ಹಾಗೂ ದಲಿತ ಪರ ಸಂಘಟನೆಗಳಿಂದ ತಾಲ್ಲೂಕು ಆರೋಗ್ಯಾಧಿಕಾರಿ ಮಲ್ಲಿಕಾರ್ಜುನ ಸ್ವಾಮಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರಕ್ಕೆ ಸ್ಪಂದಿಸಿ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದ ತಾಲ್ಲೂಕು ಆರೋಗ್ಯಾಧಿಕಾರಿ ಮಲ್ಲಿಕಾರ್ಜುನ್ ಸ್ವಾಮಿಯವರು ಕನ್ನಡಪರ ಹಾಗೂ ದಲಿತಪರ ಸಂಘಟನೆಗಳ ಕರೆ ಮಾಡಿ ಇಲ್ಲಿನ ಸ್ಥಿತಿಗತಿ ಬಗ್ಗೆ ಅವರಿಂದ ಮಾಹಿತಿ ಕಲೆ ಹಾಕಿದರು ಹಾಗೂ ನಮ್ಮ ಕಡೆಯಿಂದ ಏನು ಹೇಳಿ ಎಂದು ಹೇಳಿದಾಗ ಆರೋಪಗಳ ಸುರಿಮಳೆಯೇ ಹರಿದು ಬಂತು ಇವೆಲ್ಲವನ್ನು ಪರಿಶೀಲಿಸಿ ಇನ್ನು ಹತ್ತು ದಿನದಲ್ಲಿ ಸಂಪೂರ್ಣವಾಗಿ ಜನರ ಸೇವೆಗಾಗಿ ನಾವು ಹಾಗೂ ನಮ್ಮ ಎಲ್ಲ ಸಿಬ್ಬಂದಿ ವರ್ಗದವರು ಜನರ ಆರೋಗ್ಯದ ದೃಷ್ಟಿಯಿಂದ ಕೆಲಸ ಮಾಡುತ್ತೇವೆ ಇನ್ನು ಮುಂದೆ ಇಂತಹ ಘಟನೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ತದನಂತರ H K D S ಜಿಲ್ಲಾ ಅಧ್ಯಕ್ಷ ನಾಗರಾಜ್ ರವರು ಮಾತನಾಡಿ ನಮ್ಮ ಮನವಿಗೆ ಸ್ಪಂದಿಸಿ ಬಂದಂತಹ ಆರೋಗ್ಯ ಅಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತಾ ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸದಿದ್ದಲ್ಲಿ ಮುಂದಿನ ದಿನದಲ್ಲಿ ಮೇಲಾಧಿಕಾರಿಗಳಿಗೆ ಮುಟ್ಟಿಸುವ ಕೆಲಸ ನಾವು ಕನ್ನಡಪರ ಸಂಘಟನೆಗಳು ದಲಿತಪರ ಸಂಘಟನೆಗಳ ಎಲ್ಲರೂ ಒಗ್ಗೂಡಿ ಹೋರಾಡುತ್ತೇವೆ ಎಂದು ತಿಳಿಸಿದರು.
ತದನಂತರ ಮಾತನಾಡಿದ k r s ತಾಲ್ಲೂಕು ಅಧ್ಯಕ್ಷ ನಾಗರಾಜ್ ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಇನ್ನೂ ಹೋರಾಟ ಮಾಡುತ್ತೇವೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಇದು ನಮ್ಮ ತಾಲ್ಲೂಕಿನ ಒಳಿತಿಗಾಗಿ ಹೊರತು ಬೇರೇನೂ ಇಲ್ಲ ಜನರ ಆರೋಗ್ಯವೇ ನಮಗೆ ಶ್ರೀರಕ್ಷೆಯಾಗಲಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಇದೇ ಸಂದರ್ಭದಲ್ಲಿ .

ತಿಮ್ಮಣ್ಣ ಮರಾಠ .
ಹುಲಿಗೆಪ್ಪ ಮಡಿವಾಳ .
ಇನ್ನಿತರ ಸಂಘಟನೆಗಳ ಮುಖಂಡರುಗಳು ಉಪಸ್ಥಿತರಿದ್ದರು .

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನವರಂಗ್ ಥಿಯೇಟರ್ ಬಳಿ ರಾರಾಜಿಸ್ತಿರೋ ಅಪ್ಪು ಕಿಚ್ಚ ಕಟೌಟ್

Tue Jul 26 , 2022
ಅಪ್ಪು- ಕಿಚ್ಚನ ಸ್ನೇಹಕ್ಕೆ ಸಾಕ್ಷಿಯಾದ ” ವಿಕ್ರಾಂತ್ ರೋಣ” ವಿಕ್ರಾಂತ್ ರೋಣ ರಿಲೀಸ್ ವೇಳೆ ಪವರ್ ಸ್ಟಾರ್ ಗೆ ವಿಶೇಷ ಗೌರವ ಸಲ್ಲಿಸ್ತಿರೋ ಕಿಚ್ಚನ ಫ್ಯಾನ್ಸ್ ಜು.28 ಕ್ಕೆ ವಿಶ್ವದಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗ್ತಿರುವ ವಿಕ್ರಾಂತ್ ರೋಣ ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial