ನಾನು ಒಂದು ಫೇಸ್ ಮುಗಿಸಿ, ಇನ್ನೊಂದು ಫೇಸ್ಗೆ ಕಾಲಿಡುತ್ತಿದ್ದೇನೆ ಎಂದು ಅನಿಸುತ್ತಿದೆ. ನನಗೆ ಬೇಕಾದಂತೆ ಒಂದು ಸಿನಿಮಾ ಮಾಡಿ ಅದನ್ನು ಭಾರತಾದ್ಯಂತ ಬಿಡುಗಡೆ ಮಾಡಬೇಕು ಎಂಬ ನನ್ನಾಸೆಯನ್ನು ‘ಉಳಿದವರು ಕಂಡಂತೆ’ ಸಿನಿಮಾಗಿಂತ ಮೊದಲು ಸೋಷಿಯಲ್ ಮೀಡಿಯಾದಲ್ಲಿಬರೆದಿದ್ದೆ. ಈಗ ಅದನ್ನು ಮೊದಲ ದಶಕದಲ್ಲಿಮುಗಿಸಿದ್ದೇನೆ ಎಂದು ಅನಿಸುತ್ತದೆ. ನಾನು ಗೆಲ್ಲುತ್ತದೆ ಎಂದುಕೊಂಡಿದ್ದ ಸಿನಿಮಾಗಳು ಗೆದ್ದಿಲ್ಲಎಂಬುದನ್ನು ನಾನು ಒಪ್ಪಿಕೊಂಡಿದ್ದೇನೆ. ಎಲ್ಲಾರೀತಿಯ ಸಿನಿಮಾಗಳಲ್ಲಿಯೂ ನಾನು ನಟಿಸಿದ್ದೇನೆ. ನನ್ನ ಮನಸ್ಸಿಗೆ ತೃಪ್ತಿಯಾಗುವಂತಹ ಸಿನಿಮಾ ಬರೆದು ನಿರ್ದೇಶನ ಮಾಡಿದ್ದೇನೆ.ತುಗ್ಲಕ್ ಸಿನಿಮಾದಲ್ಲಿದ್ದ ರಕ್ಷಿತ್ ಶೆಟ್ಟಿಗೂ ಈಗಿನ ರಕ್ಷಿತ್ ಶೆಟ್ಟಿಗೂ ಎಷ್ಟು ವ್ಯತ್ಯಾಸವಿದೆ ನಟನಾಗಿದ್ದ ರಕ್ಷಿತ್ ಶೆಟ್ಟಿ ಈಗ ನಿಧಾನವಾಗಿ ಬರಹಗಾರ, ನಿರ್ದೇಶಕನಾಗಿದ್ದಾನೆ. ಮುಂದಿನ ದಿನಗಳಲ್ಲಿ ನಟ ನಿವೃತ್ತಿಯಾಗಿ, ನಿರ್ದೇಶಕ ಮಾತ್ರ ಉಳಿಯುತ್ತಾನೆ ಎಂದನಿಸುತ್ತದೆ. ಆಗ ನಾನು ಸಂಭಾಷಣೆಗಳನ್ನು ಉರು ಹೊಡೆದು ನೆನಪಿನಲ್ಲಿಟ್ಟುಕೊಂಡು ಹೇಳುತ್ತಿದ್ದೆ. ಈಗ ಹಾಗಾಗುವುದಿಲ್ಲ. ನನ್ನೊಳಗೆ ಸಾಕಷ್ಟು ಬದಲಾವಣೆಗಳಾಗಿವೆ.ನನಗೆ ಭಾರತೀಯ ಪೌರಾಣಿಕ ಕಥೆಗಳಲ್ಲಿ ಹೆಚ್ಚು ಆಸಕ್ತಿ. ಇದರ ಜತೆಗೆ ಪ್ರಾಚೀನ ವಿಜ್ಞಾನ, ಆಧುನಿಕ ವಿಜ್ಞಾನ ಹೀಗೆ ಒಂದಷ್ಟು ಕಥೆಗಳನ್ನು ಜನರಿಗೆ ಹೇಳಬೇಕೆಂದು ಅನಿಸುತ್ತದೆ. ನನ್ನಲ್ಲಿರುವ ಬರಹಗಾರ ಯಾವತ್ತೂ ನಿವೃತ್ತಿ ಹೊಂದುವುದಿಲ್ಲ.ಕಿರಿಕ್ ಪಾರ್ಟಿ ಸಿನಿಮಾದ ಫಸ್ಟ್ ಹಾಫ್ನಲ್ಲಿ ಬರುವ ಕರ್ಣ ಬಹಳ ಇಷ್ಟವಾಗುತ್ತಾನೆ. ‘ಉಳಿದವರು ಕಂಡಂತೆ’ ಸಿನಿಮಾದ ರಿಚರ್ಡ್ ಆಂಟೋನಿ, ‘ಚಾರ್ಲಿ’ ಚಿತ್ರದ ಧರ್ಮ, ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದ ನಾರಾಯಣ ಇತ್ಯಾದಿ ನನ್ನ ಮನಸ್ಸಿಗೆ ಹತ್ತಿರವಾಗಿರುವ ಪಾತ್ರಗಳು. ಪಾತ್ರ ಇಷ್ಟವಾದರೆ ಮಾತ್ರ ನಾನು ಸಿನಿಮಾ ಒಪ್ಪಿಕೊಳ್ಳುತ್ತೇನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada