ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕ ಪ್ರವಾಸಿ ಮಂದಿರದಲ್ಲಿ ರಾಮದುರ್ಗ ತಾಲೂಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಹಾಗೂ ಬೆಳಗಾವಿ ಜಿಲ್ಲಾಧ್ಯಕ್ಷರಾದ ಲಕ್ಷ್ಮಣ ಕಾಮಣ್ಣವರ್ ಮತ್ತು ಜಿಲ್ಲಾ ಸಂಘಟನೆಯ ಪ್ರಮುಖರಾದ ಮಂಜುನಾಥ ರಾಠೋಡ ನೇತೃತ್ವದಲ್ಲಿ ರಾಮದುರ್ಗ ತಾಲೂಕಿನ ಕಾನಿಪ ಧ್ವನಿ ಸಂಘಟನೆ ತಾಲೂಕ ಪದಾಧಿಕಾರಿಗಳ ಆಯ್ಕೆಮಾಡಿ ಆದೇಶ ಪತ್ರ. ಮತ್ತು ಗುರುತಿನ ಚೀಟಿ ವಿತರಣೆ ಮಾಡಲಾಯಿತು.ತಾಲೂಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಮದುರ್ಗ
ತಾಲೂಕ ಕಾರ್ಯಧ್ಯಕ್ಷರನ್ನಾಗಿ ರಮೇಶ ರಾಯಭಾಗ,ಅಧ್ಯಕ್ಷರನ್ನಾಗಿ ಎಂ ಕೆ ಯಾದವಾಡ ಹಾಗೂ ಪ್ರಧಾನ ಕಾರ್ಯದರ್ಶಿಯನ್ನಾಗಿ ರಾಘವೇಂದ್ರ ದೊಡಮನಿ ಮತ್ತು ಉಪಾಧ್ಯಕ್ಷ, ಖಾಜಾಪರವೇಜ ಫನಿಬಂಧ ರವರನ್ನು ಸೇರಿದಂತೆ ಪದಾಧಿಕಾರಿಗಳ ಆಯ್ಕೆ ಮಾಡಿ ಮಾಡಲಾಯಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada