ರಾಜ್ಯ ರಾಜಕಾರಣದಲ್ಲಿ ತಲ್ಲಣ ಹುಟ್ಟಿಸಿದ ಲಕ್ಷ್ಮಣ ಸವದಿ ಕಾಂಗ್ರೇಸ್ ಪಕ್ಷ ಸೇರ್ಪಡೆ ಯಾಗುತ್ತಿದಂತೆಯೇ ರಾಜ್ಯ ಬಿಜೆಪಿಯಲ್ಲಿ ಸಂಚಲನ ಉಂಟಾಗಿದೆ, ಈ ಬೇಳವಣಿಗೆಯ ಮಧ್ಯೆ ದಿಢೀರ ಎಂದು ಇತ್ತ ರಮೇಶ ಜಾರಕಿಹೊಳಿ ಅವರು ಅಥಣಿಗೆ ಆಗಮಿಸಿ ಗುಪ್ತ ಸಭೆ ನಡೆಸುತ್ತಿದ್ದು ಕುತೂಹಲ ಮೂಡಿಸಿದೆ.
ಅಥಣಿ ಪಟ್ಟಣದ ಹೊರವಲಯದ ಆಪ್ತರ ಮನೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಅಥಣಿ ಬಿಜೆಪಿ(BJP) ಅಭ್ಯರ್ಥಿ ಮಹೇಶ ಕುಮಠಳ್ಳಿ ಹಾಗೂ ಕಾಗವಾಡ ಶಾಸಕರ ಸುಪುತ್ರ ಶ್ರೀನಿವಾಸ ಪಾಟೀಲ ಅವರು ಭಾಗಿಯಾಗಿದ್ದಾರೆ. ರಮೇಶ ಜಾರಕಿಹೊಳಿ ಅವರ ದಿಢೀರ ಭೇಟಿ ಹಲವು ಆಯಾಮಗಳಿಂದ ಕುತೂಹಲ ಮೂಡಿಸಿದ್ದಂತೂ ಸುಳ್ಳಲ್ಲ.
https://play.google.com/store/apps/details?id=com.speed.newskannada