ಇಂದು ಸಂಜೆಯೇ ಮಹಾರಾಷ್ಟ್ರದ ನೂತನ ಸಿಎಂ ಆಗಿ ಫಡ್ನವಿಸ್​​ ಪದಗ್ರಹಣ

 

ಶಿವಸೇನೆ ರೆಬೆಲ್​ ನಾಯಕ ಏಕನಾಥ್​​ ಶಿಂಧೆ ಬಣದ ಸಹಕಾರದೊಂದಿಗೆ ಮಹಾರಾಷ್ಟ್ರ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿದೆ. ಈಗಾಗಲೇ ಸರ್ಕಾರ ರಚನೆಗೆ ಅವಕಾಶ ನೀಡಿ ಎಂದು ಮಹಾರಾಷ್ಟ್ರ ರಾಜ್ಯಪಾಲರಿಗೆ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​​​ ಮನವಿ ಮಾಡಿದ್ದಾರೆ. ಈಗ ರಾಜ್ಯಪಾಲರು ಬಿಜೆಪಿ ಸರ್ಕಾರ ರಚನೆಗೆ ಅವಕಾಶ ನೀಡಿದ್ದು, ಮಹಾರಾಷ್ಟ್ರ ನೂತನ ಸಿಎಂ ಆಗಿ ದೇವೇಂದ್ರ ಫಡ್ನವಿಸ್​​ ಇಂದು ಸಂಜೆ 7 ಗಂಟೆಗೆ ಪದಗ್ರಹಣ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚೆಗೆ ಬುಧವಾರ ರಾತ್ತಿ ಸುಪ್ರೀಂಕೋರ್ಟ್​ ಆದೇಶದ ಬಳಿಕ ಉದ್ಧವ್​ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಈ ಬೆನ್ನಲ್ಲೇ ಫಡ್ನವಿಸ್​​ ಮಹಾರಾಷ್ಟ್ರದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಲು ಮುಂದಾಗಿದ್ದಾರೆ. ಈಗ ಗೋವಾದಿಂದ ಮುಂಬೈಗೆ ಆಗಮಿಸಿರೋ ಶಿವಸೇನೆ ರೆಬೆಲ್​​ ನಾಯಕ ಏಕನಾಥ್​ ಶಿಂಧೆ ಕೂಡ ಫಡ್ನವಿಸ್​ ಜತೆಗೆ ಡಿಸಿಎಂ ಆಗಿ ಪದಗ್ರಹಣ ಮಾಡಲಿದ್ದಾರೆ.

ಈಗ ದೇವೇಂಡ್ರ ಫಡ್ನವಿಸ್​​ ಮತ್ತು ಏಕನಾಥ್​ ಶಿಂಧೆ ಜತೆಗೆ ಹಲವರು ರಾಜ್ಯಪಾಲರ ಭೇಟಿಗೆ ತೆರಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಳೆಯಿಂದ ಜನತಾಮಿತ್ರ ಕಾರ್ಯಕ್ರಮ, ಜೆಡಿಎಸ್ ಚುನಾವಣಾ ಪ್ರಚಾರ ಆರಂಭ

Thu Jun 30 , 2022
  ಬೆಂಗಳೂರು, ಜೂ.30 -ನಾಳೆಯಿಂದ 17 ದಿನಗಳ ಕಾಲ ನಗರದಲ್ಲಿ ಜೆಡಿಎಸ್ ಜನತಾ ಮಿತ್ರ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಚುನಾವಣೆ ಪ್ರಚಾರ ಪ್ರಾರಂಭಿಸಲಿದೆ. ಜನತಾ ಜಲಧಾರೆ ಕಾರ್ಯಕ್ರಮದ ಮೂಲಕ ಒಂದು ಸುತ್ತು ಚುನಾವಣೆ ಪ್ರಚಾರ ನಡೆಸಿರುವ ಜೆಡಿಎಸ್ ಎರಡನೇ ಹಂತದಲ್ಲಿ ಜನತಾಮಿತ್ರ ಕಾರ್ಯಕ್ರಮದ ಮೂಲಕ ನಗರದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದೆ. ಮುಂಬರುವ ಬಿಬಿಎಂಪಿ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಜನತಾಮಿತ್ರ ನಡೆಸಲಾಗುತ್ತಿದೆ. ನಾಳೆ ಜೆಪಿ ಭವನದಲ್ಲಿ ಪ್ರಾರಂಭವಾಗುವ ಈ […]

Advertisement

Wordpress Social Share Plugin powered by Ultimatelysocial