ಗಾಂಜಾ ಮತ್ತಲ್ಲಿ ದರೋಡೆ ಮಾಡಿದವ್ರು..ಗೋವಾಗೆ ಹೋಗಿ ಮೋಜು ಮಸ್ತಿ
ಕ್ರಿಮಿಗಳ ಕೆಲಸಕ್ಕೆ ದೇವರು ಮುನಿಸು,ಆರೋಪಿಗಳು ಅಂದರ್
ಇಬ್ಬರು ಬಾಲಾಪರಾಧಿ ಸೇರಿ ನಾಲ್ವರು ಅಂದರ್
ಶ್ರೀಧರ್ (29),ನಿತಿನ್ ರಾಜ್ @ ಲೊಡ್ಡೆ (18) ಬಂಧಿತ ಆರೋಪಿಗಳು
ಆರೋಪಿ ಶ್ರೀಧರ್ ಎಂಬಿಎ ಪದವೀಧರ
ಕೈತುಂಬ ಸಂಬಳ,ಮುದ್ದಾದ ಹೆಂಡತಿ ,ಪುಟ್ಟ ಮಗು ಇದ್ರು ರಾಬರಿಗೆ ಇಳಿದಿದ್ದ
ಬೆಟ್ಟಿಂಗ್ ಆಡಿ ಅಡ್ಡದಾರಿ ಹಿಡಿದು ಜೈಲು ಸೇರಿದ ಕ್ರಿಮಿ
ಬೆಟ್ಟಿಂಗ್ ಆಡಿ ಮೈ ತುಂಬ ಸಾಲ ಮಾಡಿಕೊಂಡಿದ್ದ ಆರೋಪಿ
ಸಾಲಗಾರರ ಕಾಟಕ್ಕೆ ಮನೆ ತೊರೆದು ಕಂಡ ಕಂಡ ಕಡೆ ಠಿಕಾಣಿ ಹೂಡ್ತಿದ್ದ
ಪುಂಡರ ಜೊತೆಗೆ ಸೇರಿ ರಾಬರಿ ಮಾಡೊ ಕೆಲಸಕ್ಕೆ ಕೈ ಹಾಕಿದ್ದ
ಮಾಡಿದ್ದ ತಪ್ಪಿಗೆ ಜೈಲು ಸೇರಿದ ವಿದ್ಯಾವಂತ ವ್ಯಕ್ತಿ
ಗಾಗಾದ್ರೆ ಈ ಕ್ರಿಮಿಗಳು ಮಾಡಿದ್ದ ಖತರ್ನಾಕ್ ಕೆಲಸ ಏನು?
ಗಿರಿನಗರದ ಬ್ಯಾಂಕ್ ಕಾಲೋನಿ ಬಳಿ ಬಾರ್ ನಲ್ಲಿ ಕುಡಿದು ಹೊರಗೆ ಕುಳಿತಿದ್ದ ಲೋಕೆಶ್ (47)ಎಂಬ ವ್ಯಕ್ತಿ
ಮಧ್ಯರಾತ್ರಿ 12.45 ರಂದು ಕುಡಿದ ಬಳಿಕ ಬಾರ್ ಹೊರೆಗೆ ಕುಳಿತಿದ್ರು
ಈ ವೇಳೆ ಒಂದೇ ಬೈಕ್ ನಲ್ಲಿ ಆಗಮಿಸಿದ್ದ ಶ್ರೀಧರ್,ನಿತಿನ್ ರಾಜ್ ಸೇರಿ ಮೂವರು
ಲಾಂಗ್ ನಿಂದ ಹಲ್ಲೆ ಮಾಡಿ ರಾಬರಿ ಮಾಡಿದ್ದ ಕಿರಾತಕರು
ಲಾಂಗ್ ತೋರಿಸಿ 50 ಸಾವಿರ ಮೌಲ್ಯದ ಎರಡು ಚಿನ್ನದ ಉಂಗುರ
1.40 ಲಕ್ಷ ಮೌಲ್ಯದ 28 ಗ್ರಾಂ ಚಿನ್ನದ ಸರ
ಪರ್ಸ್ ನಲ್ಲಿದ್ದ ೨೦ ಸಾವಿರ ನಗದು ಹಾಗೂ ಮೊಬೈಲ್ ಕಸಿದು ಪರಾರಿ
ಮೊಬೈಲ್ ಪಾಸ್ ವರ್ಡ್ ಹೇಳದಿದ್ದಾಗ ಮಂಡಿ ಸೇರಿ ಭುಜಕ್ಕೆ ಲಾಂಗ್ ನಿಂದ ಹಲ್ಲೆ
ನಂತರ ಲೋಕೇಶ್ ನದ್ದೇ ಬುಲೆಟ್ ಬೈಕ್ ಜೊತೆಗೆ ಪರಾರಿ
ಜೂನ್ 2 ರ ರಾತ್ರಿ ನಡೆದಿದ್ದ ಘಟನೆ
ರಾಬರಿ ಮಾಡಿದ್ದ ಬೈಕ್ ನಲ್ಲಿಯೇ ಚಾಮರಾಜನಗರ ಜಿಲ್ಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ
ನಂತರ ಮತ್ತೆ ಬೆಂಗಳೂರಿಗೆ ವಾಪಸ್ ಆಗಿ ಚೈನ್,ಉಂಗುರ ಮಾರಾಟ ಮಾಡಿದ್ದಾರೆ
ಬಂದ ಹಣದೊಂದಿಗೆ ಗೋವಾಗೆ ಹೋಗಿ ಮೋಜು ಮಸ್ತಿ ಮಾಡಿದ್ದಾರೆ
ಮತ್ತೆ ಬೆಂಗಳೂರಿಗೆ ವಾಪಸ್ ಆಗಿ ಬುಲೆಟ್ ಬೈಕ್ ನಲ್ಲೇ ಸುತ್ತಾಟ
ಈ ವೇಳೆ ಗಿರಿನಗರ ಪೊಲೀಸರ ಕೈಗೆ ಲಾಕ್ ಆದ ಆರೋಪಿಗಳು
ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಗಿರಿನಗರ ಪೊಲೀಸರು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: