ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಬಾಲಿವುಡ್ ವರ್ಸಸ್ ಸೌತ್ ಸಿನಿಮಾ ಇಂಡಸ್ಟ್ರಿ ನಡುವೆ ನಡೆಯುತ್ತಿರುವ ಫೈಟ್ ಬಗ್ಗೆ ಮಾತಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತಾಡಿದ ನಟ ಯಶ್, ಎಲ್ಲಾ ಚಿತ್ರರಂಗಕ್ಕೂ ಗೌರವ ನೀಡಬೇಕು ಎಂದು ಹೇಳಿದ್ದಾರೆ. ಕನ್ನಡಿಗರು ಬೇರೆ ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತಾಡಬಾರದು ಎಂದು ಯಶ್ ಹೇಳಿದ್ದಾರೆ.ಕನ್ನಡ ಜನರು ಯಾರನ್ನು ಕೀಳಾಗಿ ಕಾಣಬಾರದುಫಿಲ್ಮ್ ಕಂಪ್ಯಾನಿಯನ್ಗೆ ನೀಡಿದ ಸಂದರ್ಶನದಲ್ಲಿ ನಟ ಯಶ್ ಅನೇಕ ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ಕರ್ನಾಟಕದ ಜನರು ಬೇರೆ ಯಾವುದೇ ಚಿತ್ರರಂಗದ ಬಗ್ಗೆ ಕೀಳಾಗಿ ಮಾತಾಡಬಾರದು. ನಾವು ಕೂಡ ಆ ಸಮಸ್ಯೆಯನ್ನು ಎದುರಿಸಿದ್ದೇವೆ. ಈ ಗೌರವ ಪಡೆಯಲು ಸಾಕಷ್ಟು ಶ್ರಮಿಸಿದ್ದೇವೆ. ಈಗ ನಾವು ಯಾರನ್ನು ಕೆಟ್ಟದಾಗಿ ನಡೆಸಿಕೊಳ್ಳಬಾರದು ಎಲ್ಲರನ್ನು ಗೌರವಿಸಬೇಕು ಎಂದು ನಟ ಯಶ್ ಹೇಳಿದ್ದಾರೆ.ಬಾಲಿವುಡ್ನನ್ನು ಗೌರವಿಸಬೇಕುಬಾಲಿವುಡ್ ಬಗ್ಗೆ ಗೌರವ ಇರಲಿ. ಉತ್ತರ ಮತ್ತು ದಕ್ಷಿಣ ಅನ್ನುವುದನ್ನು ಮರೆತುಬಿಡಿ. ಎಲ್ಲರನ್ನು ಗೌರವಿಸಿ ಎಂದು ಯಶ್ ಕನ್ನಡಿಗರಿಗೆ ಮೆಸೇಜ್ ನೀಡಿದ್ದಾರೆ. ಯಾರನ್ನೂ ಮೂಲೆಗುಂಪು ಮಾಡುವುದು ಒಳ್ಳೆಯದಲ್ಲ, ಯಾರೋ ಒಬ್ಬರು ಬಾಲಿವುಡ್ನಲ್ಲಿ ಏನೂ ಅಲ್ಲ ಎಂದು ಅಪಹಾಸ್ಯ ಮಾಡುವುದು ಉತ್ತಮ ಬೆಳವಣಿಗೆಯಲ್ಲ ಎಂದು ಯಶ್ ಹೇಳಿದ್ದಾರೆ.ನಾವೆಲ್ಲಾ ಒಂದೇ ಎಂದು ಕೆಲಸ ಮಾಡಬೇಕಿದೆ.ಒಂದು ದೇಶದಲ್ಲಿ ನಾವೆಲ್ಲಾ ಒಂದೇ ಎಂದು ಕೆಲಸ ಮಾಡೋಣ ನಾವು, ಇನ್ನೂ ಉತ್ತಮ ಚಲನಚಿತ್ರಗಳನ್ನು ನೀಡಬೇಕಿದೆ. ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು, ಚಿತ್ರಮಂದಿರಗಳನ್ನು ನಿರ್ಮಿಸಬೇಕು, ಮಾಡಲು ತುಂಬಾ ಇದೆ. ನಮ್ಮ ನಮ್ಮಲ್ಲಿ ಜಗಳವಾಡಿಕೊಳ್ಳೋದನ್ನು ನಿಲ್ಲಿಸಿ ಹೊರಹೋಗಿ ಪ್ರಪಂಚದ ಇತರರೊಂದಿಗೆ ಸ್ಪರ್ಧಿಸಿ, ಸ್ಪರ್ಧೆಗೆ ಭಾರತ ಬಂದಿದೆ ಎಂದು ಹೇಳ್ಬೇಕು ಹಾಗೇ ನಾವು ಬೆಳೆಯಬೇಕು ಎಂದು ಯಶ್ ಹೇಳಿದ್ದಾರೆ.ಈ ವರ್ಷದ ಸೂಪರ್ ಹಿಟ್ ಮೂವಿ ಕೆಜಿಎಫ್ ಚಾಪ್ಟರ್ 2, ಅನೇಕ ಸಿನಿಮಾಗಳ ದಾಖಲೆ ಮುರಿದ ಚಿತ್ರ ಕನ್ನಡ ಕೆಜಿಎಫ್, ಈ ಸಿನಿಮಾ ಮೂಲಕವೇ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು. ಇಡೀ ಸಿನಿಮಾ ಇಂಡಸ್ಟ್ರಿ ಸ್ಯಾಂಡಲ್ವುಡ್ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್, ಬಾಲಿವುಡ್ನಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ಮೂಲಕ ರಾಕಿ ಭಾಯ್ ಸೈ ಎನಿಸಿಕೊಂಡಿದ್ರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
Please follow and like us: