ಸ್ಯಾಂಡಲ್ವುಡ್ನ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 49ನೇ ವಸಂತಕ್ಕೆ ಕಾಲಿಟ್ಟಿರುವ ನಟ ಚಿತ್ರರಂಗದಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ. ಕನ್ನಡ ಅಷ್ಟೇ ಅಲ್ಲದೆ, ತೆಲುಗು ಸಿನಿಮಾ ಮೂಲಕವೂ ಗಮನ ಸೆಳೆದಿದ್ದಾರೆ.
‘ಸಲಗ’ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದ ದುನಿಯಾ ವಿಜಯ್ ಮತ್ತೆ ಸಕ್ಸಸ್ ಕಂಡುಕೊಂಡಿದ್ದರು. ಈ ಮೂಲಕ ಕೇವಲ ನಟನಾಗಿ ಅಷ್ಟೇ ಅಲ್ಲದೆ, ನಿರ್ದೇಶಕನಾಗಿಯೂ ಗೆಲುವು ಕಂಡಿದ್ದಾರೆ. ಇದೇ ಜೋಷ್ನಲ್ಲಿ ‘ವೀರ ಸಿಂಹ ರೆಡ್ಡಿ’ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು. ಅಲ್ಲೂ ಸಿನಿ ಪ್ರಿಯರ ಗಮನ ಸೆಳೆದು ಬಂದಿದ್ದಾರೆ.
ಬಾಲಯ್ಯಗೂ ಮುನ್ನ Jr. Ntr ಜೊತೆ ನಟಿಸ್ಬೇಕಿತ್ತು: ಇಷ್ಟು ದೊಡ್ಡ ಆಫರ್ ಬಿಟ್ಟಿದ್ದೇಕೆ ದುನಿಯಾ ವಿಜಯ್?
‘ವೀರ ಸಿಂಹ ರೆಡ್ಡಿ’ ಟಾಲಿವುಡ್ಗ ಎಂಟ್ರಿ ಕೊಟ್ಟಿದ್ದ ದುನಿಯಾ ವಿಜಯ್, ತೆಲುಗು ಸಿನಿಮಾಗಳಲ್ಲಿಯೇ ಹೆಚ್ಚು ನಟಿಸುತ್ತಾರಾ? ಅನ್ನೋ ಪ್ರಶ್ನೆ ಎದ್ದಿತ್ತು. ಅದಕ್ಕೆ ದುನಿಯಾ ವಿಜಯ್ ಭಾವನಾತ್ಮಕವಾಗಿ ಉತ್ತರ ಕೊಟ್ಟಿದ್ದಾರೆ. ಎಂದಿದ್ದರೂ ಕನ್ನಡಕ್ಕೆ ಮೊದಲ ಆದ್ಯತೆ ಎಂದು ಹೇಳಿದ್ದಾರೆ. ಅದರ ಝಲಕ್ ಇಲ್ಲಿದೆ.
‘ಅನ್ನ, ಕೈ ತುತ್ತು ಕೊಟ್ಟಿದ್ದು ಕರ್ನಾಟಕ'”ವೀರ ಸಿಂಹ ರೆಡ್ಡಿ ಬಳಿಕ ಬೇರೆ ಎರಡ್ಮೂರು ದೊಡ್ಡ ದೊಡ್ಡ ಸಿನಿಮಾಗಳು ಬಂತು. ಆದರೆ, ನಾನು ಭೀಮ ಮುಗಿಸಬೇಕು ಅಂತ ಬಂದ್ಬಿಟ್ಟೆ. ಯಾಕಂದ್ರೆ, ಇಲ್ಲಿ ಅನ್ನ ಕೊಟ್ಟು,ನನಗೆ ಕೈ ತುತ್ತು ತಿನ್ನಿಸಿದಂತಹ ಕರ್ನಾಟಕ, ನನ್ನ ಕರ್ನಾಟಕದ ಜನತೆ. ಹೀಗಾಗಿ ಮೊದಲು ನಾನು ಇದಕ್ಕೆ ಪ್ರಾಮುಖ್ಯತೆಯನ್ನು ಕೊಡುತ್ತೇನೆ. ಇದಾದ್ಮೇಲೆ ಕಥೆ ತುಂಬಾ ಚೆನ್ನಾಗಿದ್ದರೆ, ಅಲ್ಲಿ ಹೀಗಿಯೂ ಮಾಡುತ್ತೇನೆ.” ಎಂದು ದುನಿಯಾ ವಿಜಯ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ.
https://play.google.com/store/apps/details?id=com.speed.newskannada