ಸ್ಯಾಂಡಲ್‌ವುಡ್‌ ಧ್ವಜ ಎತ್ತಿ ಹಿಡಿದ ನಿರ್ದೇಶಕರು

ಪುಟ್ಟಣ್ಣ ಕಣಗಾಲ್‌, ಸಿದ್ಧಲಿಂಗಯ್ಯ ಹೀಗೆ ಕನ್ನಡದ ಹಲವು ನಿರ್ದೇಶಕರ ಹೆಸರುಗಳನ್ನು ಕನ್ನಡಿಗರು ಸದಾ ನೆನಪಿಸಿಕೊಳ್ಳುತ್ತಾರೆ. ಈಗಲೂ ಅಂತಹ ನಿರ್ದೇಶಕರು ಕನ್ನಡ ಚಿತ್ರರಂಗದಲ್ಲಿದ್ದು, ತಮ್ಮ ಹೊಸ ರೀತಿಯ ಪ್ರಯತ್ನಗಳಿಂದಾಗಿ ಜನರಿಂದ ಗುರುತಿಸಲ್ಪಡುತ್ತಿದ್ದಾರೆ. ಇಂತಹ ಪ್ರತಿಭೆಗಳ ಹೊಸ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಪ್ರೇಕ್ಷಕರ ಮನ ಗೆಲ್ಲುತ್ತಿವೆ. ಅದರಲ್ಲೂ 2022ರಲ್ಲಂತೂ ಬಂಗಾರದ ಬೆಳೆ ಬಂದಿದೆ, ಹಲವು ನಿರ್ದೇಶಕರು ಗಮನ ಸೆಳೆದಿದ್ದಾರೆ.ರಿಷಬ್‌ ಶೆಟ್ಟಿ ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ. ರಿಕ್ಕಿ, ಕಿರಿಕ್‌ ಪಾರ್ಟಿಯಂತಹ ಕಮರ್ಷಿಯಲ್‌ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಅವರು ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ಯಂತಹ ಸೂಕ್ಷ್ಮವಾದ ವಿಷಯವಿರುವ ಚಿತ್ರಕ್ಕೂ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಸರ್ಕಾರಿ ಶಾಲೆಗೆ ಅವರು ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದಿದ್ದರು. ಇದಾದ ನಂತರ ಅವರು ‘ಬೆಲ್‌ ಬಾಟಮ್‌’ ಚಿತ್ರದ ಮೂಲ ನಟರಾದರು. ಹಾಗಿದ್ದರೂ ನಿರ್ದೇಶನವನ್ನು ಬಿಡದೆ ‘ಕಾಂತಾರ’ದಂತಹ ಅದ್ಭುತ ಸಿನಿಮಾವನ್ನು ಕೊಟ್ಟರು. ಈ ಸಿನಿಮಾದ ಮೂಲಕ ರಿಷಬ್‌ ಪ್ಯಾನ್‌ ಇಂಡಿಯಾ ನಟ ಮತ್ತು ನಿರ್ದೇಶಕರಾದರು. ಕನ್ನಡದಲ್ಲಿಯೂ ಅದ್ಭುತ ಸಿನಿಮಾಗಳು ಬರುತ್ತವೆ ಎಂಬುದನ್ನು ‘ಕಾಂತಾರ’ ದೇಶಕ್ಕೇ ತೋರಿಸಿಕೊಟ್ಟಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಈ ವಿಚಿತ್ರ ಆಕೃತಿ

Wed Dec 28 , 2022
    ದೆವ್ವ, ಪಿಶಾಚಿ ಇದೆಯಾ? ಇವುಗಳು ಆಗಾಗ ತಮ್ಮ ಇರುವಿಕೆಯನ್ನು ತೋರಿಸುತ್ತಾ ಇರುತ್ತವಾ? ಈ ಪ್ರಶ್ನೆ ಬಹಳ ಹಳೆಯದ್ದು. ಆದರೆ, ಉತ್ತರ ಮಾತ್ರ ಸ್ಪಷ್ಟವಿಲ್ಲ. ಹೀಗಾಗಿ, ಈ ಕ್ಷಣದವರೆಗೂ ಇದು ಉತ್ತರವಿಲ್ಲದ ಪ್ರಶ್ನೆಯಾಗಿಯೇ ಉಳಿದಿದೆ ದೆವ್ವ, ಅನ್ಯಗ್ರಹ ಜೀವಿಗಳ ಭಯ ಬಹುತೇಕ ಯಾವ ದೇಶವನ್ನೂ ಬಿಟ್ಟಿಲ್ಲ. ಸಾಕಷ್ಟು ದೇಶಗಳಲ್ಲಿ ದೆವ್ವಗಳ ಅಸ್ಥಿತ್ವದ ಬಗ್ಗೆ ನಂಬಿಕೆ ಇದೆ. ಪ್ಯಾರಾ ನಾರ್ಮಲ್ ಎಕ್ಸ್‌ಪರ್ಟ್‌ಗಳು ಕೂಡಾ ದೆವ್ವಗಳ ಶೋಧ ನಡೆಸಿ, `ಮಾತುಕತೆ’ ನಡೆಸುವ […]

Advertisement

Wordpress Social Share Plugin powered by Ultimatelysocial