ದ್ವಿತೀಯ ಪಿಯು ಪರೀಕ್ಷೆಗೆ ಸಮವಸ್ತ್ರ ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ. SSLC ಮಾದರಿಯಲ್ಲೇ ದ್ವಿತೀಯ ಪಿಯು ಪರೀಕ್ಷೆಗಳು ನಡೆಯಲಿವೆ ಎಂದು ಹೇಳಿದರು.
ಪರೀಕ್ಷೆಗೆ ನೋಂದಾಯಿಸಿಕೊಂಡಿರುವವರು 66,84,255
ರೆಗ್ಯುಲರ್ ವಿದ್ಯಾರ್ಥಿಗಳು 6,00,519
ಪುನರಾವರ್ತಿತ ವಿದ್ಯಾರ್ಥಿಗಳು- 61,808
ಖಾಸಗಿ ಅಭ್ಯರ್ಥಿಗಳು: 21978
ಲಿಂಗವಾರು ವಿದ್ಯಾರ್ಥಿಗಳು
ಬಾಲಕರು- 3,46,936
ಬಾಲಕಿಯರು – 3,37,319
ಸಂಯೋಜನೆವಾರು ವಿದ್ಯಾರ್ಥಿಗಳ ಸಂಖ್ಯೆ
ಕಲಾ ವಿಭಾಗ: 2,28,167
ವಾಣಿಜ್ಯ ವಿಭಾಗ: 2,45,519
ವಿಜ್ಞಾನ ವಿಭಾಗ- 2,10,569
ಒಟ್ಟು ಪರೀಕ್ಷಾ ಕೇಂದ್ರಗಳ ಸಂಖ್ಯೆ 1,076
ಅತಿ ಹೆಚ್ಚು ಪರೀಕ್ಷಾ ಕೇಂದ್ರಗಳ ಜಿಲ್ಲೆ; ಬೆಂಗಳೂರು ದಕ್ಷಿಣ ಜಿಲ್ಲೆ – 83
ಅತಿ ಕಡಿಮೆ ಪರೀಕ್ಷೆ ಕೇಂದ್ರ ರಾಮನಗರ -13 ಪರೀಕ್ಷಾ ಕೇಂದ್ರಗಳು
ಮದರಸಗಳಿಂದ ಕಲಿತ ಮಕ್ಕಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗ್ತಿಲ್ಲ. ಕಾಂಪಿಟೇಟೀವ್ ಶಿಕ್ಷಣ ಅಲ್ಲಿ ಸಿಗುತ್ತಿಲ್ಲ ಎಂದು ಈ ಬಗ್ಗೆ ಪೋಷಕರೇ ಹೇಳಿದ್ದಾರೆ. ಮದರಸಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗ್ತಿಲ್ಲ. ಮದರಸಗಳಿಂದ ನಿಮ್ಮ ಶಿಕ್ಷಣ ನೀಡಿ ಅಂತ ಬೇಡಿಕೆ ಬಂದಿಲ್ಲ ಆ ರೀತಿ ಮನವಿ ಬಂದರೆ ಮುಂದೆ ನೋಡೋಣ ಎಂದು ಹೇಳಿದರು.
ಪಿಯು ಪರೀಕ್ಷೆ ವೇಳೆ ಉಚಿತ ಪ್ರಯಾಣ
ಪಿಯು ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಸಾರಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಪ್ರಯಾಣದ ವೇಳೆ ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಬೇಕು. ಹಳ್ಳಿಯಿಂದ ಬರುವ ಮಕ್ಕಳಿಗೆ KSRTC ಇರಲಿದೆ.
ಒಟ್ಟು 81 ಮೌಲ್ಯಮಾಪನ ಕೇಂದ್ರ ಇರಲಿದ್ದು. ಎಲ್ಲಾ ಕೇಂದ್ರಗಳಲ್ಲಿ ಸಿಸಿಟಿವಿ ಇರಲಿವೆ. ಪರೀಕ್ಷೆ ಮೌಲ್ಯಮಾಪನ ವೇಳೆ ಮೊಬೈಲ್ ನಿಷೇಧ ಮಾಡಲಾಗಿದೆ. ಎಸ್ ಒಪಿ ಈಗಿನದೇ ಅನ್ವಯವಾಗಲಿದೆ. ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಇರಲಿದೆ . ಹೊಸದಾಗಿ ತುಮಕೂರು, ಹಾಸನ,ಬಳ್ಳಾರಿ ಜಿಲ್ಲೆಗಳಲ್ಲಿ ಮೌಲ್ಯಮಾಪನ ಕೇಂದ್ರ ತೆರೆಯಲಾಗಿದೆ.
ಮುಂದಿನ ವರ್ಷದಿಂದ ನೈತಿಕ ಶಿಕ್ಷಣ
ನೈತಿಕ ಶಿಕ್ಷಣವನ್ನು ಮುಂದಿನ ವರ್ಷ ಪಠ್ಯಕ್ಕೆ ಸೇರಿಸುತ್ತೇವೆ. ನೈತಿಕ ಶಿಕ್ಷಣದಲ್ಲಿ ಪಂಚತಂತ್ರ, ರಾಮಾಯಣ, ಮಹಾಭಾರತ, ಭಗವದ್ಗೀತೆ ಎಲ್ಲವೂ ಒಂದು ಭಾಗವಾಗಬಹುದು. ಈ ಶೈಕ್ಷಣಿಕ ವರ್ಷದಿಂದಲೇ ಭಗವದ್ಗೀತೆ ತರುತ್ತೇವೆ. ಯಾವುದೇ ಧರ್ಮಕ್ಕೆ ಸೀಮಿತ ಮಾಡಲ್ಲಯಾವ ಧರ್ಮದಲ್ಲಿ ಒಳ್ಳೆಯದಿದೆ ಎಲ್ಲವನ್ನು ತಿಳಿಸ್ತೇವೆ. ಹೆಚ್ಚು ಯಾವ ಮಕ್ಕಳು ಬರ್ತಾರೆ. ಅದನ್ನೇ ಹೆಚ್ಚಿನ ಪ್ರಮಾಣದಲ್ಲಿ ಇರಿಸುತ್ತೇವೆ ಎಂದು ತಿಳಿಸಿದರು.
ಟಿಪ್ಪು ಪಾಠ ತೆಗೆದಿಲ್ಲ
ಟಿಪ್ಪು ಬಗ್ಗೆ ಶಾಸಕರಾದ ಅಪ್ಪಚ್ಚು ರಂಜನ್ ಅವರ ಡಿಮ್ಯಾಂಡ್ ಇದೆ. ಟಿಪ್ಪು ಪಾಠವನ್ನ ಕೈಬಿಡಿ ಎಂದು ಹೇಳಿದ್ದಾರೆ. ಕೈಬಿಡದೇ ಹೋದರೆ ಅವರ ಎಲ್ಲ ಮುಖ ತೋರಿಸಿ ಎಂದು ಹೇಳಿದ್ದಾರೆ. ಕೂರ್ಗ್ ದೌರ್ಜನ್ಯದ ಬಗ್ಗೆ ತಿಳಿಸಿ ಎಂದಿದ್ದಾರೆ. ಕನ್ನಡ ವಿರೋಧಿತನವನ್ನ ತೋರಿಸಿ ಎಂದಿದ್ದಾರೆನಾವು ಪಠ್ಯದಲ್ಲಿ ಕೆಲವು ಅಂಶಗಳನ್ನ ತೆಗೆದಿದ್ದೇವೆ. ಆದರೆ ಟಿಪ್ಪು ಪಾಠವನ್ನ ನಾವು ತೆಗೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada