ಬಿಗ್ ಬಾಸ್ ವಿರುದ್ಧ ಸಾನ್ಯಾ ಆರೋಪ – ಸಾನ್ಯಾ ಕೊಟ್ಟ ಕಾಸ್ಟ್ಯೂಮ್ ರೂಪೇಶ್ಗೆ ಸಿಕ್ತಾ ಇಲ್ಲ

ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಇವರಿಬ್ಬರ ಜೋಡಿಯ ಸ್ನೇಹ-ಪ್ರೀತಿಯ ಬಗ್ಗೆ ಬಿಗ್ ಬಾಸ್ ನೋಡುವ ಪ್ರತಿಯೊಬ್ಬರಿಗೂ ಗೊತ್ತೆ ಇದೆ. ಬಿಬಿಕೆ ಓಟಿಟಿ ಕನ್ನಡ 1ನೇ ಸೀಸನ್ ಅಲ್ಲಿ ವಿನ್ ಆದ ಈ ಜೋಡಿ ಜೊತೆಜೊತೆಯಾಗಿ  ಬಿಗ್ ಬಾಸ್ ಕನ್ನಡ ಸೀಸನ್ ಒಂಭತ್ತಕ್ಕೆ ಗ್ರಾಂಡ್ ಆಗಿ ಎಂಟ್ರಿ ಕೊಟ್ಟಿತ್ತು. ಓಟಿಟಿಯಲ್ಲಿ ವಿನ್ ಆದ ಹಾಗೆಯೇ ಬಿಬಿಕೆ ಸೀಸನ್ 9 ರ ಫಿನಾಲೆವರೆಗೂ ಇವರಿಬ್ಬರೂ ಒಟ್ಟಿಗೆ ಇರ್ತಾರೆ ಅಂದುಕೊಂಡಿದ್ರು ವೀಕ್ಷಕರು. ಆದರೆ ಬಿಗ್ಬಾಸ್ 6ನೇ ವಾರಕ್ಕೆ ಸಾನ್ಯಾ ಬಿಗ್ ಮನೆಯಿಂದ ಎಲಿಮಿನೇಟ್ ಆಗಿ ಹೊರಗಡೆ ಬಂದ್ರು.

ಮನೆಯಿಂದ ಹೊರಬರುವಾಗ ಸಾನ್ಯಾ  ರೂಪೇಶ್ಗೆ ಪ್ರತಿವಾರವೂ ನಿನಗೆ ನಾನು ಬಟ್ಟೆ ಕಳುಹಿಸುತ್ತೇನ ಎಂದು ಹೇಳಿದ್ದರು. ಅದೇ ರೀತಿ ಮನೆಯಿಂದ ಹೊರಗಡೆ ಬಂದ ವಾರವೇ  ಸಾನ್ಯಾ ಹಾರ್ಟ್ ಮಾರ್ಕ್ ಇರುವ ಎರಡು ರೆಡ್ ಕಲರ್ ಶರ್ಟ್ಗಳನ್ನ ಪ್ರೀತಿಯ ರೂಪಿಗಾಗಿ ಪ್ರೀತಿಯಿಂದ ಕಳುಹಿಸಿದ್ದರು. ರೂಪು ಕೂಡ ಅಷ್ಟೇ ಪ್ರೀತಿಯಿಂದ ವೀಕೆಂಡ್ನ ಕಿಚ್ಚ ಸುದೀಪ್ ಅವರ ಎರಡೂ ಸ್ಪೆಷಲ್ ಎಪಿಸೋಡ್ಗಳಲ್ಲಿ  ಆ ಶರ್ಟ್ ಧರಿಸಿಯೇ ಕೂತಿದ್ದನ್ನ ನೋಡಿದೀವಿ. ಸುದೀಪ್ ಅವರೂ ಕೂಡ ಆ ಶರ್ಟ್ ಬಗ್ಗೆ ಮಾತನಾಡಿದಾಗ ರೂಪೇಶ್ ನಾಚಿಕೊಂಡಿದ್ದನ್ನ ಕೂಡ ಗಮನಿಸಿದ್ದೇವೆ.

ಹೀಗಿರುವಾಗ ಸಾನ್ಯಾ ಇದೀಗ ಬಿಗ್ಬಾಸ್ ಮೇಲೆಯೇ ದೊಡ್ಡದಾಗಿರುವ ಆರೋಪ ಮಾಡಿದ್ದು, ತಮ್ಮ ಇನ್ಸಟಾಗ್ರಾಂನಲ್ಲಿ ಹೀಗಂತ ಬರೆದುಕೊಂಡಿದ್ದಾರೆ- “ರೂಪಿ ನೀನು ಸ್ಟ್ರಾಂಗ್ ಆಗಿರಬೇಕು ಆಯ್ತಾ. ನಾನು ಕಳುಹಿಸಿದ ಶರ್ಟ್ ಅನ್ನು ಅವರು ತೆಗೆದುಕೊಂಡಿದ್ದರೂ, ಅದನ್ನು ನಿನ್ನ ಬಳಿಗೆ ತಲುಪಿಸುತ್ತಿಲ್ಲ. ಆದರೆ, ನಾನು ಕಳುಹಿಸೋ ಪಾಸಿಟಿವಿಟಿಯನ್ನು ನಿನಗೆ ತಲುಪಿಸಲು ಯಾರಿಂದಲೂ ಸಾಧ್ಯವಿಲ್ಲ ಆಯ್ತಾ. ನೀನು ಯಾವಾಗಲೂ ಮಿನುಗುತ್ತಿರು.” ಎಂದು ಸಾನ್ಯಾ ಐಯ್ಯರ್ ಪೋಸ್ಟ್ ಮಾಡಿದ್ದಾರೆ.

ಹಾಗಾದ್ರೆ ನಿಜವಾಗಿಯೂ ಸಾನ್ಯಾ ಅಯ್ಯರ್ ಕಳುಹಿಸುತ್ತಿರುವ ಕಾಸ್ಟ್ಯೂಮ್ಗಳನ್ನ ಬಿಗ್ಬಾಸ್ ರೂಪೇಶ್ಗೆ ಕೊಡ್ತಾ ಇಲ್ವಾ? ಅಥವಾ ರೂಪೇಶ್ ಅವರೇ ಆ ಕಾಸ್ಟ್ಯೂಮ್ಗಳನ್ನ ಧರಿಸುತ್ತಿಲ್ಲವಾ ಅನ್ನೋದು ಗೊತ್ತಿಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

https://play.google.com/store/apps/details?id=com.speed.newskannada

 

Please follow and like us:

Please follow and like us:

Leave a Reply

Your email address will not be published. Required fields are marked *

Next Post

ಜನ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ: ಸಿಎಂ ಬಸವರಾಜ ಬೊಮ್ಮಾಯಿ‌!

Sun Dec 4 , 2022
ಹುಬ್ಬಳ್ಳಿ, ಡಿಸೆಂಬರ್‌ 4: ರಾಜ್ಯದಲ್ಲಿ ಬಿಜೆಪಿಯ ಜನ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಇದನ್ನು ಡಿಸೆಂಬರ್ ತಿಂಗಳಲ್ಲಿ ಇನ್ನಷ್ಟು ತೀವ್ರಗೊಳಿಸಿ ಜನರ ವಿಶ್ವಾಸ ಪಡೆಯುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ವರ್ಷ ಇರುವುದರಿಂದ ಪ್ರತಿ ಬಾರಿಯಂತೆ ಜನರ ಬಳಿ ಹೋಗುತ್ತಿದ್ದೇವೆ. ನಮ್ಮ ಜನ ಸಂಕಲ್ಪ ಯಾತ್ರೆ ಈಗಾಗಲೇ ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ […]

Advertisement

Wordpress Social Share Plugin powered by Ultimatelysocial