ದಿನಾಂಕ:24-03-2021
ಪೂರ್ವಭಾವಿ ಶಾಂತಿ ಸಭೆ
- ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ನಿಮಿತ್ಯವಾಗಿ ಶಾಂತಿ ಸಭೆ ನಡೆಯಿತು. ಸಭೆಯನ್ನುದ್ದೇಶಿಸಿ ಬಸವನ ಬಾಗೇವಾಡಿ ಡಿವೈಎಸ್ಪಿ ಅರುಣಕುಮಾರ್ ಕೋಳೂರು ಅವರು ಮಾತನಾಡಿ ಇದು ವಿಶ್ವಗುರು ಬಸವಣ್ಣನವರ ಜನ್ಮಸ್ಥಳ ಶಾಂತಿಗೆ ಹೆಸರುವಾಸಿಯಾದ ಸ್ಥಳ ಹೀಗಾಗಿ ಅದಕ್ಕೆ ಪ್ರತಿವರ್ಷದಂತೆ ಹೋಳಿ ಹುಣ್ಣಿಮೆಯನ್ನು ಶಾಂತ ರೀತಿಯಿಂದ ಆಚರಿಸಬೇಕು ಅದಕ್ಕೆ ಪಟ್ಟಣದ ಎಲ್ಲ ಹಿರಿಯರು ಹಾಗೂ ಸಾರ್ವಜನಿಕರ ಸಹಕಾರ ಕೊಡಬೇಕು ಜೊತೆಗೆ ಪೊಲೀಸ್ ಇಲಾಖೆ ಕೂಡ ಸಹಕಾರ ನೀಡುತ್ತದೆ ಎಂದು ಹೇಳಿದರು. ವಾಸ್ತವಿಕ ಸ್ವಾಗತವನ್ನು ಪಿಎಸ್ಐ ಚಂದ್ರಶೇಖರ್ ಹೆರಕಲ್ ಅವರು ಮಾಡಿದರು. ಅದೇ ರೀತಿ ಸಿಪಿಐ ಸೋಮಶೇಖರ್ ಜುಟ್ಟಲ.ಎಪಿಎಂಸಿ ಅಧ್ಯಕ್ಷರಾದ ಶೇಖರ್ ಗೊಳಸಂಗಿ. ಬಸಣ್ಣ ಕಲ್ಲೂರು.ನಿಲು ನಾಯಕ.ಸಂಗನಗೌಡ ಚಿಕ್ಕೊಂಡ.ಅಶೋಕ ಹಾರಿವಾಳ. ಸುರೇಶ ಮಣ್ಣೂರ. ಅರವಿಂದ ಸಾಲವಾಡಗಿ. ಇತರರು ಭಾಗವಹಿಸಿದ್ದರು.
ವರದಿ:ಸಿದ್ದು ಜಮ್ಮಲದಿನ್ನಿ ಸ್ಪೀಡ್ ನ್ಯೂಸ್ ಜಿಲ್ಲಾ ವರದಿಗಾರರು ವಿಜಯಪುರ.
Please follow and like us: