ರಾಜ್ಯದಲ್ಲಿ ಮತ್ತೆ ಮಹಾಮಾರಿ ಕೊರೋನಾ ಆತಂಕ ಶುರು

ರಾಜ್ಯದಲ್ಲಿ ಮತ್ತೆ ಮಹಾಮಾರಿ ಕೊರೋನಾ ಆತಂಕ ಶುರುವಾಗಿದ್ದು, ರಾಜ್ಯದಲ್ಲಿ ಇಂದು 2298 ಕೊರೋನಾ ಕೇಸ್ ದಾಖಲಾಗಿವೆ. ಇಂದು 2298 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 975,955ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ ಬುಲೆಟಿನ್‌ನಿಂದ ತಿಳಿದು ಬಂದಿದೆ.

ಕಿಲ್ಲರ್ ಕೊರೋನಾ ಸೋಂಕಿಗೆ ರಾಜ್ಯದಲ್ಲಿ ಇಂದು 12 ಜನ ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ ಮೃತಪಟ್ಟವರ ಸಂಖ್ಯೆ 12,461 ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 995 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ 9,46,589 ಜನ ಗುಣಮುಖರಾಗಿ ಡಿಸ್ಸಾರ್ಜ್ ಆಗಿದ್ದಾರೆ.ರಾಜ್ಯದಲ್ಲಿ ಸದ್ಯ 16,886 ಸಕ್ರಿಯ ಪ್ರಕರಣಗಳಿದ್ದು, 143 ಜನ ಐಸಿಯುನಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ.ಬೆಂಗಳೂರಿನಲ್ಲಿ ಇಂದು 1,398 ಜನರಿಗೆ ಸೋಂಕು ತಗಲಿದ್ದು, ಇಂದು 7 ಮಂದಿ ಮೃತಪಟ್ಟಿದ್ದಾರೆ

Please follow and like us:

Leave a Reply

Your email address will not be published. Required fields are marked *

Next Post

ಜೈ ಜವಾನ್ ಎಂದ ಚೆನ್ನೈ ಸೂಪರ್ ಕಿಂಗ್ಸ್

Wed Mar 24 , 2021
ಐಪಿಎಲ್ 14ನೇ ಸೀಸನ್ ಗೆ ಇನ್ನೇನು ಕೆಲ ದಿನಗಳಷ್ಟೇ ಬಾಕಿ ಇವೆ,  ಇಂದು  ಚೆನ್ನೈ ಸೂಪರ್ ಕಿಂಗ್ಸ್ ತನ್ನ ನೂತನ ಜೆರ್ಸಿ ಅನಾವರಣ ಮಾಡಿದೆ, ಈ ಜರ್ಸಿಯ ವಿಶೇಷವೇನೆಂದರೆ , ಭುಜ ಭಾಗದಲ್ಲಿ ಇಂಡಿಯನ್ ಆರ್ಮಿ ಸಮವಸ್ತ್ರದ ಬಣ್ಣವಿದ್ದು , ದೇಶ ಕಾಯುವ ವೀರ ಸೈನಿಕರಿಗೆ ಗೌರವ ಸಲ್ಲಿಸಿದ್ದಾರೆ.ಹಾಗೂ ಇಲ್ಲಿವರೆಗೂ ಮೂರು ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ನ ಚಾಂಪಿಯನ್  ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ , ತನ್ನ ಲೋಗೋ […]

Advertisement

Wordpress Social Share Plugin powered by Ultimatelysocial