ಡಿ.ಕೆ ಸುರೇಶ್ ನ ನಾನು ಸೋಲಿಸುತ್ತಿದ್ದೆ..
ಮಾಜಿ ಶಾಸಕ ಸುರೇಶ್ ಗೌಡ ಉವಾಚ..
ಊರ್ಡಿಗೆರೆಯಲ್ಲಿ ನಡೆದ ಸಮಾವೇಶದಲ್ಲಿ ಹೇಳಿಕೆ..
ತುಮಕೂರು ಊರ್ಡಿಗೆರೆ ಗ್ರಾಮ..
ನನಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಬಿಜೆಪಿ ಟಿಕೆಟ್ ಸಿಕ್ಕಿತ್ತು..
ನಾನು ತುಮಕೂರು ಗ್ರಾಮಾಂತರ ಬಿಟ್ಟು ರಾಷ್ಟ್ರ ಜಾರಕಾರಣಕ್ಕೆ ಹೋಗುವುದಕ್ಕೆ ಮನಸಿರಿರ್ಲಿಲ್ಲ..
ಒಂದು ವೇಳೆ ನಾನು ಹೋಗಿದ್ರೆ ಡಿ.ಕೆ ಸುರೇಶ್ ವಿರುದ್ಧ ಗೆಲ್ತಿದ್ದೆ..
ಬಿ ಫಾರ್ಮ್ ನನ್ನ ಕೈಗೆ ಕೊಟ್ಟಿದ್ರು ಆದ್ರೆ ರಾತ್ರಿ 12ಗಂಟೆಗೆ ನಾನು ಬೇಡ ಅಂತ ವಾಪಸ್ ಕೊಟ್ಟೆ..
ಯಾಕಂದ್ರೆ ತುಮಕೂರು ಗ್ರಾಮಾಂತರದ ಜನತೆ ನನ್ನ ಹೃದಯದಲ್ಲಿದ್ದಾರೆ.
ಈ ಕ್ಷೇತ್ರದ ಕನಿಷ್ಠ ಹತ್ತು ಸಾವಿರ ಜನರ ಹೆಸರೇಳಬಲ್ಲೆ..
ಪ್ರತಿಯೊಬ್ಬರ ಮದುವೆ, ಸಾವು, ಹೊಸಿಗೆ ಕಾರ್ಯಕ್ರಮಗಳಿಗೆ ಹೋಗಿದ್ದೇನೆ..
ಒಂದನೇ ಕ್ಲಾಸ್ ಮಕ್ಕಳಿಗೆ ಓಟ್ ಹಾಕೋ ಪವರ್ ಇದ್ದಿದ್ದರೆ ನಾನು 50 ಸಾವಿರ ಮತಗಳ ಲೀಡ್ ನಲ್ಲಿ ಗೆಲ್ಲುತ್ತಿದ್ದೆ..
ಗ್ರಾಮಾಂತರದಲ್ಲಿ ಅಷ್ಟರ ಮಟ್ಟಿಗೆ ಶಾಲೆಗಳನ್ನ ಕಟ್ಟಿಸಿದ್ದೇನೆ..
ದೇವವರ ಹಣವನ್ನೂ ಬಿಟ್ಟಿಲ್ಲ ಗ್ರಾಮಾಂತರ ಶಾಸಕ ಗೌರಿಶಂಕರ್
ಊರ್ಡಿಗೆರೆಯ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದ ಕಾಮಗಾರಿಯಲ್ಲೂ ಕಮಿಷನ್ ಪಡೆದಿದ್ದಾರೆ..
ನನ್ನ ಕಾಲದಲ್ಲಿ 50 ಲಕ್ಷ ಬಿಡುಗಡೆ ಮಾಡಿದ್ದೆ..
ಸೋತ ನಂತರವೂ 25ಲಕ್ಷ ಹಣ ಕೊಡುಸ್ದೆ
ಐದು ಪೈಸೆ ಖರ್ಚು ಮಾಡಿಲ್ಲ, ಮೂರು ವರ್ಷದಿಂದ ಆ ಹಣವನ್ನ ಹಾಗೆ ಇಟ್ಟುಕೊಂಡಿದ್ದಾರೆ..
ಆ ದುಡ್ಡಿನಲ್ಲೂ ಕಮಿಷನ್ ಕೇಳಿದ್ದಾರೆ, ಕಮಿಷನ್ ಕೊಟ್ಟಿಲ್ಲ ಅಂತ ಕಾಮಗಾರಿ ಮಾಡಿಲ್ಲ..
ಗೆಲುವಿಗಾಗಿ ಆಂಜನೇಯನ ಅಫರ್ ನೀಡಿದ ಸುರೇಶ್ ಗೌಡ
ನಿನ್ನಲ್ಲಿ ಶಕ್ತಿ ಇದ್ದರೆ, ಭಕ್ತಿ ಇದ್ದರೆ, ಪ್ರಮಾಣಿಕತೆ ಇದ್ದರೆ ನನ್ನನ್ನ 50 ಸಾವಿರ ಮತಗಳಿಂದ ನನ್ನನ್ನ ಗೆಲ್ಲಿಸು..
ದೇವ ನಿನ್ನ ಕಾಮಗಾರಿಯಲ್ಲಿ ಕಮಿಷನ್ ತಿನ್ನುವ ಶಾಸಕ ಗೌರಿಶಂಕರ್ ನ ಸೋಲಿಸು
ಕೇವಲ 6 ತಿಂಗಳಲ್ಲಿ ನಿನ್ನ ಗೋಪುರ ಕಟ್ಟಿಸುತ್ತೇನೆ, ನಿನ್ನನ್ನ ಜಗತ್ ಪ್ರಸಿದ್ಧಿ ಮಾಡಿಸುತ್ತೇನೆ..
ಬೆಳಗುಂಬ ಸಿದ್ದರಾಮೇಶ್ವರ ದೇವಾಲಯದ ಕಾಮಗಾರಿಯೂ ಕಮಿಷನ್ ಆಸೆಯಿಂದ ಪೂರ್ಣ ಆಗಿಲ್ಲ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada