ಮದಕರಿ ನಾಯಕರ ವಂಶಸ್ಥೆ ರಾಣಿ ಚೆನ್ನಮ್ಮಾ ನಾಗತಿ ಜಿಲ್ಲಾಸ್ಪತ್ರೆಗೆ ದಾಖಲು, ಆರೋಗ್ಯ ವಿಚಾರಿಸಿದ ಬಸವಾನಂದ ಸ್ವಾಮಿಜಿ
ಆ್ಯಂಕರ್: ಬೆನ್ನುಮೂಳೆ ಸಮಸ್ಯೆ, ಹಾಗೂ ವಯೋಸಹಜ ಖಾಯಿಲೆಯಿಂದ ಬಳಲುತ್ತಿರುವ ರಾಜಾ ಮದಕರಿ ನಾಯಕರ ವಂಶಸ್ಥರಾದ ರಾಣಿ ಚಂದ್ರಮ್ಮಾ ನಾಗತಿ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮುರುಘಾ ಮಠದ ಬಸವಪ್ರಭು ಸ್ವಾಮಿಜಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ಸ್ಥಿತಿ ವಿಚಾರಿಸಿದರು.
ವಿ.ವೊ: ಹೌದು ಸ್ಪೈನಲ್ ಕಾರ್ಡ್ ಆಪರೇಶನ್, ಜೊತೆ ಜೊತೆಗೆ ವಯೋಸಹಜ ಖಾಯಿಲೆಯಿಂದ ಬಳಲುತ್ತಿರುವ ರಾಜಾ ಮದಕರಿ ನಾಯಕರ ವಂಶಸ್ಥರಾದ ರಾಣಿ ಚಂದ್ರಮ್ಮಾ ನಾಗತಿ ರವರು, ಕಳೆದ ಮೂರು ದಿನಗಳ ಹಿಂದೆ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ನಡೆದಾಡಲೂ ಸಾಧ್ಯವಾಗದ ಹಾಗೂ ತೀವೃ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನ ಜಿಲ್ಲಾಸ್ಪತ್ರೆಯ ತೀವೃ ನಿಗಾ ಘಟಕಕ್ಕೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಈ ವಿಷಯ ತಿಳಿದ ಮುರುಘಾ ಮಠದ ಬಸವಪ್ರಭು ಸ್ವಾಮಿಜಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ರಾಣಿ ಚಂದ್ರಮ್ಮಾ ನಾಗತಿ ರವರ ಆರೋಗ್ಯ ವಿಚಾರಿಸಿ, ವೈದ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಮಠಕ್ಕೂ, ಮದಕರಿ ನಾಯಕರ ವಂಶಕ್ಕೂ ಅವಿನಾಭಾವ ಸಂಬಂಧವಿದೆ. ದೇವರು ಅವರ ಆರೋಗ್ಯ ಚೇತರಿಸಿಕೊಳ್ಳುವಂತೆ ಅವರಿಗೆ ಶಕ್ತಿ ನೀಡಲಿ. ಅವಶ್ಯ ಬಿದ್ದರೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ, ಅವರನ್ನು ಹೆಚ್ಚಿನ ಚಿಕಿತ್ಸೆಗೆ ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುವುದು ಎಂದರು.
ಇ.ವೊ: ಈ ಕುರಿತು ಮಾತನಾಡಿರುವ ರಾಣಿ ಚಂದ್ರಮ್ಮಾ ಪುತ್ರ ಪರಶುರಾಮ ನಾಯಕ, ಒಬ್ಬ ರಾಜವಂಶಸ್ಥನಾಗಿ ಇದನ್ನು ಹೇಳಿಕೊಳ್ಳಲು ತುಂಬಾ ಹಿಂಸೆ ಅನೊಸುತ್ತೆ. ನಮ್ಮ ತಾಯಿಯವರಿಗೆ ಸ್ಪೈನಲ್ ಕಾರ್ಡ ಆಪರೇಶನ್ ಆಗಿ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆರ್ಥಿಕ ಸ್ಥಿತಿ ಸರಿಯಾಗಿಲ್ಲದ ಕಾರಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವಿಷಯ ತಿಳಿದ ಸ್ವಾಮಿಜಿ ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಂತೆ ತಿಳಿಸಿದ್ದಾರೆ. ಹಾಗಾಗಿ ಸ್ವಾಮಿಜಿ ಮಾತಿನಂತೆ ಅವರಿಗರ ಹೆಚ್ಚಿನ ಚಿಕಿತ್ಸೆಯನ್ನು ಮುಂದುವರೆಸಲಾಗುತ್ತದೆ ಎಂದರು.
ವಿ.ವೊ: ಆರ್ಥಿಕ ತೊಂದರೆಯಲ್ಲಿರುವ ರಾಣಿ ಚೆನ್ನಮ್ಮಾ ನಾಗತಿ ರವರ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಅವರಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸುವಲ್ಲಿ ಸ್ವಾಮಿಜಿ ಮುಂದಾಗಿದ್ದಾರೆ. ಒಟ್ಟಿನಲ್ಲಿ ಚಿತ್ರದುರ್ಗದ ಹೆಮ್ಮೆಯ ರಾಜಾ ಮದಕರಿ ನಾಯಕರ ವಂಶಸ್ಥೆ ರಾಣಿ ಚಂದ್ರಮ್ಮಾ ನಾಗತಿ ರವರು ಶೀಘ್ರವೇ ಗುಣಮುಖರಾಗಲಿ ಅಂತಾ ನಾಡಿನ ಜನತೆ ಆಶಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada