ದೇವೇಗೌಡರ ಕುಟುಂಬದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರಕ್ಕೆ ಶುರುವಾಗಿರುವ ಗೊಂದಲಗಳು ಇನ್ನೂ ಮುಗಿಯವ ಲಕ್ಷಣಗಳು ಕಾಣ್ತಿಲ್ಲ. ಇದರ ಮಧ್ಯೆ ಹೆಚ್.ಡಿ.ರೇವಣ್ಣ ಕುಟುಂಬ ದೇವರ ಮೊರೆ ಹೊಗುತ್ತಿರೋದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿದ್ದ ರೇವಣ್ಣ ಕುಟುಂಬ, ನವದುರ್ಗಿ ಚಂಡಿಕಾ ಯಾಗವನ್ನು ಮಾಡಿಸಿದೆ. ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗೆವರೆಗೂ ಯಾಗ ಮಾಡಿಸಲಾಗಿದೆ. ಚುನಾವಣಾ ಹೊಸ್ತಿಲಲ್ಲಿ ರೇವಣ್ಣ ಕುಟುಂಬದಿಂದ ವಿಶೇಷ ನವದುರ್ಗಿ ಚಂಡಿಕಾ ಯಾಗ ನಡೆದಿದೆ ಎಂದು ನಂಬಲಾಗಿದೆ.
ಯಾಕೆ ಪೂಜೆ..?
ರೇವಣ್ಣ ಅವರ ಕುಟುಂಬದ ಮೂಲಗಳು ತಿಳಿಸಿರುವ ಮಾಹಿತಿ ಪ್ರಕಾರ.. ದೇವೇಗೌಡರ ಆರೋಗ್ಯ ಸುಧಾರಣೆಯಾಗಬೇಕು. ಪಕ್ಷ ಅಧಿಕಾರ ಬರುವಂತೆ ಮತ್ತು ವೈಯಕ್ತಿಕ ರಾಜಕೀಯ ಯಶಸ್ಸು ಸಿಗಲೆಂದು ಯಾಗ ಮಾಡಿಸುತ್ತಿದ್ದಾರೆ ಎನ್ನಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada