ನಾಳೆ ಕುಮಾರಸ್ವಾಮಿ ನೇತೃತ್ವದಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸ ಷಫಿ ಅಹ್ಮದ್ ಜೆಡಿಎಸ್ ಸೇರ್ಪಡೆ..!

ಹಿರಿಯ ಮುಖಂಡ ಹಾಗು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಎಸ್.ಷಫಿ ಅಹ್ಮದ್ ಹಾಗೂ ಅವರ ಬೆಂಬಲಿಗರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಗುರುವಾರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಗೊಳ್ಳಲಿದ್ದಾರೆ ಎಂದು ತುಮಕೂರು ಜಿಲ್ಲೆಯ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ. ಆಂಜಿನಪ್ಪ ತಿಳಿಸಿದರು.

ಬುಧವಾರ ತುಮಕೂರು ನಗರದ ಜೆಡಿಎಸ್ ಕಛೇರಿಯಲ್ಲಿ ನೆಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ಆಶೋಕ ರಸ್ತೆಯಲ್ಲಿನ ಜೆಡಿಎಸ್ ಕಛೇರಿಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯವರ ಸಮ್ಮುಖದಲ್ಲಿ ಷಪಿ ಅಹ್ಮದ್ ಹಾಗೂ ಅವರ ಬೆಂಬಲಿಗರು ಅಧಿಕೃತವಾಗಿ ಜೆಡಿಎಸ್ ಗೆ ಸೇರ್ಪಡೆ ಗೊಳ್ಳಲಿದ್ದಾರೆ ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ, ತಿಪ್ಪೇಸ್ವಾಮಿ ಅವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು. ಜಿಲ್ಲೆಯಲ್ಲಿ ಹನ್ನೊಂದು ಕ್ಷೇತ್ರದಲ್ಲಿಯೂ ಸಹ ಜೆಡಿಎಸ್ ಗೆ ಉತ್ತಮ ವಾತಾವರಣ ವಿದೆ. 9 ರಿಂದ 10 ಕ್ಷೇತ್ರಗಳಲ್ಲಿ ನಾವು ಗೆಲ್ಲಲಿದ್ದೇವೆ ಎಂದರು.

ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಗೋವಿಂದ ರಾಜ್ ಮಾತನಾಡಿ, ಷಫಿ ಅಹ್ಮದ್ ಹಾಗೂ ಅವರ ಅಪಾರ ಬೆಂಬಲಿಗರು ಜೆಡಿಎಸ್ ಗೆ ಸೇರ್ಪಡೆ ಗೊಳ್ಳುತ್ತಿರುವುದರಿಂದ ಜೆಡಿಎಸ್ ಗೆ ಅನೆ ಬಲ ಬಂದತ್ತಿದೆ. ಅವರ ಕುಟುಂಬದಲ್ಲೇ ಒಂದೂವರೆ ಸಾವಿರದಷ್ಷು ಜನ ಇದ್ದಾರೆ. ಅವರ ಎಲ್ಲಾ ಮತಗಳೂ ಒಳಗೊಂಡತೆ ಬೆಂಬಲಿಗರ ಮತಗಳು ಜೆಡಿಎಸ್ ತೆಕ್ಕೆಗೆ ಬಿಳಲಿದೆ ಎಂದರು.

ಚುನಾವಣೆ ಸಮಯದಲ್ಲಿ ಬೇರೆ ಬೇರೆ ಪಕ್ಷದ ನಾಯಕರು ವಲಸೆ ಬರುವುದು ಸಹಜ. ಅದರಂತೆ ಅಸಮಾಧಾನಿತರನ್ನು ಸಮಾಧಾನ ಗೊಳಿಸುವುದು ಕಷ್ಟದ ಕೆಲಸ ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

How Automation Can Help Customer Service Agents

Wed Apr 26 , 2023
Customer Service Automation: How to Save Time and Delight Customers HubSpot’s Service Hub is a service management software that enables you to conduct seamless onboarding, flexible customer support, and expand customer relationships. Service Hub delivers efficient and end-to-end service that delights customers at scale. With Zendesk, you can streamline customer […]

Advertisement

Wordpress Social Share Plugin powered by Ultimatelysocial