ಮಥುರಾ: ಶಾಹಿ ಈದ್ಗಾ ಮಸೀದಿಯಲ್ಲಿ ಅಭಿಷೇಕಕ್ಕೆ ಅನುಮತಿ ಕೋರಿ ಹಿಂದೂ ಮಹಾಸಭಾ ಅರ್ಜಿ;

 

ಮಥುರಾ:ವಾರಣಾಸಿಯ ಜ್ಞಾನವಾಪಿ ಮಸೀದಿಯ ಕಾನೂನು ಹೋರಾಟದ ನಡುವೆಯೇ ಸೋಮವಾರ ಹಿಂದೂ ಮಹಾಸಭಾ ಶಾಹಿ ಈದ್ಗಾ ಮಸೀದಿಯ ಶುದ್ದೀಕರಣ ಕೋರಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದರೊಂದಿಗೆ ಶ್ರೀ ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿಯ ಮತ್ತೊಂದು ಭೂ ವಿವಾದವೇರ್ಪಟ್ಟಿದೆ.

ಜುಲೈ 1 ರಂದು ಅರ್ಜಿ ವಿಚಾರಣೆ ನಡೆಯಲಿದೆ.

ಶಾಹಿ ಈದ್ಗಾ ಮಸೀದಿಯು ಶ್ರೀ ಕೃಷ್ಣ ಜನ್ಮಭೂಮಿಯ ಪಕ್ಕದಲ್ಲಿದೆ. ಶ್ರೀ ಕೃಷ್ಣ ಜನ್ಮಭೂಮಿಯ ಗರ್ಭಗುಡಿಯಲ್ಲಿ ಈದ್ಗಾ ಮಸೀದಿ ನಿರ್ಮಿಸಲಾಗಿದೆ ಎಂದು ಹಿಂದೂ ಮಹಾಸಭಾದ ಖಜಾಂಚಿ ದಿನೇಶ್ ಶರ್ಮಾ ಮನವಿಯಲ್ಲಿ ಹೇಳಿದ್ದಾರೆ. ಪುರಾತನ ದೇವಾಲಯದ ವಿವಾದಿತ ಸ್ಥಳದಲ್ಲಿ ‘ಅಭಿಷೇಕ’ ಮತ್ತು ಭಗವಾನ್ ಕೃಷ್ಣನ ಪೂಜೆ ಮಾಡಲು ಶಾಹಿ ಈದ್ಗಾ ಮಸೀದಿ ಪ್ರವೇಶಿಸಲು ಅವರು ಅನುಮತಿ ಕೇಳಿದ್ದಾರೆ.

ಮೊದಲು ಕತ್ತಿಗಳ ಬಲದಿಂದ ನಮ್ಮ ದೇವಾಲಯಗಳ ಮೇಲೆ ದಾಳಿ ಮಾಡಿದರು, ಆದರೆ ಈಗ ನಾವು ಪ್ರಾಚೀನ ಪರಂಪರೆಯನ್ನು ಹಿಂಪಡೆಯುತ್ತೇವೆ, ಮಸೀದಿಯನ್ನು ತೆರವುಗೊಳಿಸಬೇಕು ಮತ್ತು ಹಿಂದೂಗಳ ಸ್ವಾಭಿಮಾನವನ್ನು ಪುನಃಸ್ಥಾಪಿಸಬೇಕು ಎಂದು ನಾವು ಬಯಸುತ್ತೇವೆ ಎಂದು ದಿನೇಶ್ ಶರ್ಮಾ ಹೇಳಿದ್ದಾರೆ.

ಇದಕ್ಕೂ ಮುನ್ನ ಮಥುರಾದಲ್ಲಿ ಶ್ರೀ ಕೃಷ್ಣ ವಿರಾಜಮಾನನ ಅರ್ಜಿ ವಿಚಾರಣೆ ನಡೆಸಲು ನ್ಯಾಯಾಲಯ ಒಪ್ಪಿಕೊಂಡಿತ್ತು. ಮೇ 26ರಂದು ಕೆಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಶಾಹಿ ಈದ್ಗಾ ಮಸೀದಿ ಇರುವ 2.37 ಎಕರೆ ಭೂಮಿಯನ್ನು ತೆರವುಗೊಳಿಸುವಂತೆ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪತಿ ಹಾಗೂ ಮಾವನ ವಿರುದ್ಧ ಪೊಲೀಸರಿಗೆ ದೂರು ನೀಡಿದ ನಟಿ ಚೈತ್ರಾ

Tue May 24 , 2022
ಮೈಸೂರು, ಮೇ 24-ಬ್ಯಾಂಕ್ ಖಾತೆಯನ್ನು ದುರ್ಬಳಕೆ ಹಾಗೂ ಫೋರ್ಜರಿ ಸಹಿ ಮಾಡಿ ಗೋಲ್ಡ ಲೋನ್ ಪಡೆದಿರುವುದಾಗಿ ಚಿತ್ರನಟಿಯೊಬ್ಬರು ತಮ್ಮ ಪತಿ ಹಾಗೂ ಮಾವನ ವಿರುದ್ದ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚಿತ್ರನಟಿ ಚೈತ್ರಾಹಳ್ಳಿಕೇರಿ ತಮ್ಮ ಪತಿ ಮತ್ತು ಮಾವನ ವಿರುದ್ಧ ದೂರು ನೀಡಿದ್ದಾರೆ. ಪತಿ ಬಾಲಾಜಿ ಪೋತರಾಜ್ ಹಾಗೂ ಮಾವ ಪೋತರಾಜ್ ವಿರುದ್ದ ವಂಚನೆ ಆರೋಪದಡಿ ದೂರು ದಾಖಲಾಗಿದೆ. ತನ್ನ ಅನುಮತಿ ಪಡೆಯದೆ ನನ್ನ ಖಾತೆಯನ್ನು ದುರ್ಬಳಕೆ […]

Advertisement

Wordpress Social Share Plugin powered by Ultimatelysocial