ಮತ್ತೇ ಒಂದಾಗುತ್ತಿದ್ದಾರೆ ಮಾದಕ ಚೆಲುವೆ ಶಿಲ್ಪಾ ಶೆಟ್ಟಿ ಮತ್ತು ಕ್ರೇಜಿ ಸ್ಟಾರ್ ಉಪೇಂದ್ರ.

 

ಜೋಗಿ ಪ್ರೇಮ್ ಜೊತೆಗಿನ ಸಿನಿಮಾದಲ್ಲಿ ಮಾದಕ ಚೆಲುವೆ ಶಿಲ್ಪಾ ಶೆಟ್ಟಿ ಮತ್ತು ಅಧೀರ ಪಾತ್ರದಲ್ಲಿ ಮಿಂಚಿದ ಸಂಜಯ್ ದತ್ ನಟನೆ ಮಾಡೋದು ಕನ್ಫರ್ಮ್ ಆಗಿದೆ. ಈ ಸುದ್ದಿಯನ್ನ ನಿಮ್ಮ ಜೀ ಕನ್ನಡ ನ್ಯೂಸ್ ಎರಡು ತಿಂಗಳ ಹಿಂದೆಯೇ Exclusive ಸುದ್ದಿ ಕೊಟ್ಟಿತ್ತು. ಈ ಎಲ್ಲಾ ಬೆಳವಣಿಗೆಗಳಿಂದ ಇದೀಗ KD ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.ಇನ್ನೊಂದು ಸಖತ್ ಖುಷಿ ನ್ಯೂಸ್ ಅಂದ್ರೆ 1998ರಲ್ಲಿ ಬಿಡುಗಡೆಯಾಗಿದ್ದ ಪ್ರೀತ್ಸೋದ ತಪ್ಪಾ ಮೂಲಕ ಹೊಸ ಅಲೆ ಎಬ್ಬಿಸಿದ್ದಶಿಲ್ಪಾ ಶೆಟ್ಟಿ,ಮತ್ತೆ ರವಿಚಂದ್ರನ್​ ಜೊತೆ ನಾಯಕಿಯಾಗಿ ಮತ್ತೊಮ್ಮೆ ಸುನಾಮಿ ಎಬ್ಬಿಸಲು ರೆಡಿಯಾಗಿದ್ದಾರೆ.ಯೆಸ್ KD ಸಿನಿಮಾದಲ್ಲಿ ರವಿಚಂದ್ರನ್ ಅವರು ಕೂಡ ಇರುತ್ತರೆ .ಅಂದಹಾಗೆ ಪ್ರೀತ್ಸೋದ ತಪ್ಪಾ ಬಳಿಕ 2003 ರಲ್ಲಿ ಒಂದಾಗೋಣ ಬಾ ಚಿತ್ರದಲ್ಲಿಯೂ ಶಿಲ್ಪಾ ನಟಿಸಿದ್ದರು. 18 ವರ್ಷಗಳ ನಂತ ಮತ್ತೆಸ್ಯಾಂಡಲ್​ವುಡ್ ಬೆಳ್ಳಿ ತೆರೆಯ ಮೇಲೆ ಶಿಲ್ಪಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.20 ವರ್ಷಗಳ ಬಳಿಕ ರವಿಚಂದ್ರನ್​ಗೆ ಪುನಃ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಇದೆ. ಆದರೆ ಈ ಸುದ್ದಿ ಸದ್ಯ ಗುಸುಗುಸು ಅಷ್ಟೇ. ಶಿಲ್ಪಾರನ್ನು ಕನ್ನಡಕ್ಕೆ ಪುನಃ ಕರೆತರಲಾಗುತ್ತಿದ್ದು, ಈ ನಿಟ್ಟಿನಲ್ಲಿ ಭಾರಿ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ಇದರ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇದೆಂಥಾ ಚಿತ್ರಹಿಂಸೆ..! ಅಮ್ಮ I love you -ಡೆತ್​​ನೋಟ್​​ ಬರೆದಿಟ್ಟು ʼವಿದ್ಯಾರ್ಥಿಆತ್ಮಹತ್ಯೆʼ.

Fri Mar 3 , 2023
   ಕಾಲೇಜಿನಲ್ಲಿ ಕಿರುಕುಳ ತಾಳಲಾಗದೆ ʻಅಮ್ಮ ಐ ಲವ್​ ಯೂʼ -ಡೆತ್​​ನೋಟ್​​ ಬರೆದಿಟ್ಟು ವಿದ್ಯಾರ್ಥಿಆತ್ಮಹತ್ಯೆಗೈದ ಘಟನೆ ಬೆಳಕಿಗೆ ಬಂದಿದೆ.ಹೈದರಾಬಾದ್​ನ ಶ್ರೀ ಚೈತನ್ಯ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಉಪನ್ಯಾಸಕರ ಪದೇ ಪದೇ ನೀನು ಫೈಲ್​ ಆಗಿದ್ದೀಯಾ ಅಂತ ಹೀಯಾಳಿಸುತ್ತಿದ್ದರು. ಅಷ್ಟೆ ಅಲ್ಲದೇ ಆತನಿಗೆ ಚಿತ್ರಹಿಂಸೆ ನೀಡುತ್ತಾ ಆತನಿಗೆ ಹೆಚ್ಚು ಒತ್ತಡ ಹಾಕುತ್ತಿದ್ದರು. ಇದಕ್ಕೆ ಬೇಸತ್ತ ಯುವಕ ಅಮ್ಮ ಐ ಲವ್​ ಯೂ -ಡೆತ್​​ನೋಟ್​​ ಬರೆದಿಟ್ಟು ವಿದ್ಯಾರ್ಥಿಆತ್ಮಹತ್ಯೆ ಶರಣಾಗಿದ್ದಾನೆ. ಮೃತಪಟ್ಟ […]

Advertisement

Wordpress Social Share Plugin powered by Ultimatelysocial