ಕಾಂಗ್ರೆಸ್ನ ಎರಡು ಕಣ್ಣುಗಳು ಎಂದು ಕರೆಸಿಕೊಳ್ಳುವ ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವಿನ ಸಂಬಂಧ ಅಷ್ಟೇನೂ ಚೆನ್ನಾಗಿಲ್ಲ ಎನ್ನೋದು ಎಲ್ಲರಿಗೂ ಬಹಿರಂಗವಾಗಿರುವ ಸತ್ಯ. ಆದರೂ ಇಬ್ಬರೂ ನಾಯಕರೂ ಎಲ್ಲವೂ ಸರಿ ಇದೆ ಎಂದುಕೊಂಡು ಓಡಾಡುತ್ತಾರೆ. ಹೀಗಿರುವಾಗ ಹೈಕಮಾಂಡ್ ಇವರನ್ ಆಗಾಗ ಕರೆದು ಸಂಧಾನ ಮಾಡ್ತಾನೆ ಇರುತ್ತೆ. ದೆಹಲಿಗೆ ಹೋದಾಗ ಮಾತ್ರ ಹೊಂದಾಣಿಕೆ ರಾಜಕೀಯ ಮಾಡುವ ಸಿದ್ದು- ಡಿಕೆ, ರಾಜ್ಯಕ್ಕೆ ಬಂದ ನಂತರ ಮತ್ತೆ ಯಥಾಸ್ಥಿತಿಗೆ ಮರಳುತ್ತಾರೆ.
ಚುನಾವಣಾ ಪೂರ್ವ ತಯಾರಿಯಾಘಿ ಸಿದ್ದು ಡಿಕೆಶಿ ಇಬ್ಬರೂ ಕೂಡ ಜಿಲಲಾ ಪ್ರವಾಸಕ್ಕೆ ಪ್ಲ್ಯಾನ್ ಮಾಡಿದ್ದಾರೆ. ಬಸ್ ಹಾಗೂ ಹೆಲಿಕಾಪ್ಟರ್ ಮೂಲಕ ಪ್ರವಾಸ ಕೈಗೊಂಡಿದ್ದಾರೆ. ಆದರೆ ಸಿದ್ದರಾಮಯ್ಯ ಮಾತ್ರ ಪ್ರತ್ಯೇಕ ಬಸ್ ಯಾತ್ರೆ ಪ್ಲ್ಯಾನ್ ಮಾಡ್ಕೊಂಡಿದ್ದಾರೆ. ಇದರ ಬಗ್ಗೆ ನಿನ್ನೆ ಕನ್ನಿಂಗ್ ಹ್ಯಾಮ್ ರಸ್ತೆಯ ಒಂದು ಕಚೇರಿಯಲ್ಲಿ ನಿನ್ನೆ ರಹಸ್ಯ ಮಾತುಕತೆ ನಡೆಸಿದ್ದು, . ಸಭೆಯಲ್ಲಿ ಬಿ ಎಲ್ ಶಂಕರ್, ಭೈರತಿ ಸುರೇಶ್, ಬಸವರಾಜ್ ರಾಯರೆಡ್ಡಿ ಒಟ್ಟಾರೆ ಸಿದ್ದರಾಮಯ್ಯನವರ ಆಪ್ತ ಬಳಗ ಭಾಗಿಯಾಗಿದೆ ಎನ್ನಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada