ನಾಮಪತ್ರ ಸಲ್ಲಿಸುವ ಮೊದಲು ಗುಬ್ಬಿಯ ಗೋಸಲ ಶ್ರೀ ಚನ್ನಬಸವೇಶ್ವರ ಸ್ವಾಮಿಯವರಿಗೆ ವಿಶೇಷ ಪೂಜೆ!

ಗುಬ್ಬಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಎಸ್.ಡಿ. ದಿಲೀಪ್ ಕುಮಾರ್ ಇಂದು ನಾಮಪತ್ರ ಸಲ್ಲಿಕೆ. ನಾಮಪತ್ರ ಸಲ್ಲಿಸುವ ಮೊದಲು ಗುಬ್ಬಿಯ ಗೋಸಲ ಶ್ರೀ ಚನ್ನಬಸವೇಶ್ವರ ಸ್ವಾಮಿಯವರಿಗೆ ವಿಶೇಷ ಪೂಜೆ ಸಲ್ಲಿಸಿ, ಚನ್ನಬಸವೇಶ್ವರ ಸ್ವಾಮಿ ದೇವಲ ಮುಂಭಾಗದಿಂದ ಸಾವಿರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದರು. ಗುಬ್ಬಿ ಬಸ್ ನಿಲ್ದಾಣದ ಬಳಿ ಎಸ್.ಡಿ. ದಿಲೀಪ್ ಕುಮಾರ್ ರವರಿಗೆ ಬೃಹತ್ ಗಾತ್ರದ ಕೊಬ್ಬರಿ ಹಾರ ಹಾಕುವ ಮೂಲಕ ಅಭಿಮಾನಿಗಳು ಜಯಘೋಷ ಹಾಕಿದರು.

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ಸಂಸದ ಜಿ.ಎಸ್. ಬಸವರಾಜು ಹರಿಯಾಣದ ಸಂಸದರಾದ ಸಂಜಯ್ ಬಾಟ್ಯಾ ಹಾಗು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪಸ್ವಾಮಿ,ವಿರಭದ್ರಯ್ಯ ಭಾಗಿಯಾಗಿದ್ದಾರು. ಮಾಧ್ಯಮದೊಂದಿಗೆ ಮಾತನಾಡಿದ ಎಸ್. ಡಿ. ದಿಲೀಪ್ ಕುಮಾರ್ ಗುಬ್ಬಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಗೆ ಬಿಜೆಪಿ ಪಕ್ಷ ಬದ್ಧವಾಗಿದೆ ನನಗೆ ಬಿಜೆಪಿ ಪಕ್ಷದ ಟಿಕೆಟ್ ನಿಡಲು ಸಹಕರಿಸಿದ ಎಲ್ಲಾ ಮುಖಂಡರಿಗೆ ನಾನು ಹೃದಯ ತುಂಬಿ ಅಭಿನಂದನೆ ಸಲ್ಲಿಸುತ್ತೇನೆ.

ಮತದಾರ ಪ್ರಭುಗಳಿಗೆ ನಾನು ಕೈಮುಗಿದು ಕೆಳಿಕೋಳ್ಳುತ್ತೇನೆ ನಾನು ಸಾಮಾನ್ಯ ಕಾರ್ಯಕರ್ತನಾಗಿ ನಿಮ್ಮ ಸೇವೆ ಮಾಡುತ್ತೇನೆ ನನಗೆ ತಮ್ಮ ತಮ್ಮ ಆಶೀರ್ವಾದ ಮುಖ್ಯವಾಗಿದೆ, ತಾಲ್ಲೂಕಿನ ಪ್ರತಿ ಹಳ್ಳಿಗಳಿಗೆ ಉತ್ತಮವಾದ ರಸ್ತೆ ನಿರ್ಮಾಣ ಉತ್ತಮವಾದ ಅಸ್ಪತ್ರೆ ನಿರ್ಮಾಣ ಉತ್ತಮವಾದ ಶಾಲೆ ನಿರ್ಮಾಣ ಹಾಗಲವಾಡಿ ಭಾಗಕ್ಕೆ ನೀರವರಿ ಯೋಜನೆ ಜಾರಿಗೆ ತಮ್ಮ ಆಶೀರ್ವಾದ ನನಗೆ ನಿಡುವಂತೆ ಮನವಿ ಮಾಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಿಡ್ಲಘಟ್ಟದಲ್ಲಿ ಭಾರಿ ಜನಸಾಗರ..!

Thu Apr 20 , 2023
ಸೀಕಲ್ ರಾಮಚಂದ್ರಗೌಡರ ನಾಮಪತ್ರಕ್ಕೆ 25000(ಇಪ್ಪತೈದು ಸಾವಿರ) ಜನರ ಭಾರಿ ಮೆರವಣಿಗೆ. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಬಿಜೆಪಿಗೆ ಜನರ ಬೆಂಬಲ. ಶಿಡ್ಲಘಟ್ಟದ ವಿಧಾನಸಭೆಯ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡರು ಇಂದು ತಮ್ಮ ಅಪಾರ ಬೆಂಬಲಿಗರು ಮತ್ತು ಕಾರ್ಯಕರ್ತರ ಜೊತೆಗೂಡಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ಬೆಳಿಗ್ಗೆ ಗೋಪೂಜೆ ಮಾಡಿ, ವೀರಾಪುರದ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ನಂತರ ಸೇವಾಸೌಧಕ್ಕೆ ಆಗಮಿಸಿರು. ಸೇವಾಸೌಧದಿಂದ ತಾಲೂಕು ಕಚೇರಿವರೆಗೂ ಕಣ್ಣು ಹಾಯಿಸಿದಷ್ಟು […]

Advertisement

Wordpress Social Share Plugin powered by Ultimatelysocial